ರಸ್ತೆ ನಿರ್ಮಾಣವಾದ ಮೂರೇ ದಿನಕ್ಕೆ ಕಿತ್ತು ಬಂದ ಡಾಂಬರು
Team Udayavani, Mar 8, 2022, 3:05 PM IST
ಗುಂಡ್ಲುಪೇಟೆ: ತಾಲೂಕಿನ ಪಂಜನಹಳ್ಳಿ- ವೀರನಪುರ ಮಾರ್ಗವಾಗಿ ನಿರ್ಮಾಣ ಮಾಡಿರುವ200 ಮೀಟರ್ ರಸ್ತೆ ಕಾಮಗಾರಿ ತೀರಕಳಪೆಯಾಗಿರುವ ಕಾರಣ ನಿರ್ಮಾಣವಾದ ಮೂರೇ ದಿನದಲ್ಲೆ ಕೆದಕಿದರೆ ಡಾಂಬರ್ ಮೇಲೆಳುತ್ತಿದೆ. ಇದು ಗುತ್ತಿಗೆದಾರನ ಕಳಪೆ ಕೆಲಸಕ್ಕೆ ಹಿಡಿದ ಕೈ ಕನ್ನಡಿಯಾಗಿದೆ.
ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಹದಗೆಟ್ಟ ಪ್ಯಾಚ್ ಕಾಮಗಾರಿ ಮಾಡುವ ವೇಳೆ ನಿಗದಿಯಂತೆ ಜಲ್ಲಿಕಲ್ಲುಬಳಸದೆ ಮಣ್ಣಿನ ಮೇಲೆ ಡಾಂಬರು ಹಾಕಿರುವಕಾರಣ ಸಂಪೂರ್ಣ ಕಳಪೆಯಿಂದ ಕೂಡಿದೆ. ರಸ್ತೆ ಮೇಲೆ ಅಧಿಕ ಭಾರದ ವಾಹನವಿರಲಿ ದ್ವಿಚಕ್ರ ವಾಹನಸಂಚರಿಸಿದರೂ ಡಾಮಬರು ಕಿತ್ತು ಹೋಗುವಂತಿದೆ.
ಜಿಪಂ 3054 ಹೆಡ್ನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಅನುದಾನ ಬಂದರೂಗುತ್ತಿಗೆದಾರನ ಹಣದಾಸೆಗೆ 200 ಮೀಟರ್ ರಸ್ತೆಕೆದಕಿದರೆ ರಸ್ತೆಯ ಗುಣಮಟ್ಟ ಬಹಿರಂಗವಾಗಲಿದೆ ಎಂದು ಪಂಜನಹಳ್ಳಿ-ವೀರನಪುರ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ಯಾಚ್ ಕೆಲಸ ನೆಪದಲ್ಲಿ ಹಣ ಮಾಡುವ ದಂಧೆಗೆಗುತ್ತಿಗೆದಾರ ಇಳಿದಿದ್ದಾರೆ. ಆದರೆ ಈ ಗುತ್ತಿಗೆದಾರಉಸ್ತುವಾರಿ ಇರುವ ಜಿಪಂ ಎಂಜಿನಿಯರ್ಬೇಜಬಾಬ್ದಾರಿ ತೋರಿದ್ದಾರೆ.
ರಾತ್ರಿ ವೇಳೆ ಕೆಲಸ: ಪಂಜನಹಳ್ಳಿ-ವೀರನಪುರ ರಸ್ತೆಯ ಪ್ಯಾಚ್ ಕೆಲಸ ಕೇವಲ ಎರಡು ಗಂಟೆಯಲ್ಲಿಮುಗಿದಿದೆ. ಅದು ಹಗಲಲ್ಲಿ ಅಲ್ಲ, ಕಳೆದ ಮೂರುದಿನದ ಹಿಂದೆ ರಾತ್ರಿ 7 ಗಂಟೆಯಿಂದ 9 ಗಂಟೆಗೆಮುಗಿದಿದೆ ಎಂದು ಜನರು ದೂರಿದ್ದಾರೆ. ರಸ್ತೆಯ ಪ್ಯಾಚ್ ಮುಚ್ಚುವ ಕೆಲಸ ಮಳವಳ್ಳಿಯ ಮಹೇಶ್ ಎಂಬುವವರ ಹೆಸರಿನಲ್ಲಿದೆ. ಆದರೆ ರಸ್ತೆಗೆ ಪ್ಯಾಚ್ ಕೆಲಸವನ್ನು ಸ್ಥಳೀಯ ಮುಖಂಡರೊಬ್ಬರು ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಚಿವ-ಶಾಸಕರೇ ಕ್ರಮ ವಹಿಸಿ: ಪಂಜನಹಳ್ಳಿ-ವೀರನಪುರದ ಸುಮಾರು 200ಮೀಟರ್ ರಸ್ತೆಯನ್ನು ಕಳಪೆಯಾಗಿಕಾಟಾಚಾರದಿಂದ ಮಾಡಲಾಗಿದ್ದು, ನಿಗದಿಯಂತೆವಸ್ತುಗಳನ್ನು ಬಳಕೆ ಮಾಡಿಲ್ಲ. ನಿರ್ಮಾಣವಾದಮೂರು ದಿನದಲ್ಲೆ ರಸ್ತೆ ಡಾಂಬರು ಮೇಲೆಳುತ್ತಿರುವಕಾರಣ ಇದು ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂಗುತ್ತಿಗೆದಾರನ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ-ಶಾಸಕ ಸಿ.ಎಸ್.ನಿರಂಜನಕುಮಾರ್ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಂಜನಹಳ್ಳಿ-ವೀರನಪುರದಸುಮಾರು 200 ಮೀಟರ್ ರಸ್ತೆಯಪ್ಯಾಚ್ ಕಾಮಗಾರಿ ಕೆಲಸವನ್ನುಗುತ್ತಿಗೆದಾರ ಮಹೇಶ್ ಮಾಡಿದ್ದಾರೆ.ರಸ್ತೆಯನ್ನು ಕಳಪೆಯಿಂದ ಮಾಡಿದ್ದರೆ ಮತ್ತೆಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. – ಶಿವಕುಮಾರ್, ಎಇ
– ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ