ರೈತರ ಸಹಾಯಕ್ಕೆ ಆರಂಭವಾಗಿದ್ದ ಕೇಂದ್ರದಲ್ಲಿ ಅವ್ಯವಹಾರ


Team Udayavani, Mar 12, 2022, 2:49 PM IST

ರೈತರ ಸಹಾಯಕ್ಕೆ ಆರಂಭವಾಗಿದ್ದ ಕೇಂದ್ರದಲ್ಲಿ ಅವ್ಯವಹಾರ

ಕುದೂರು: ರೈತರಿಗೆ ನೆರವಾಗಲು ಅವರ ಷೇರು ಹಣದಿಂದ ಆರಂಭವಾದ ರೈತ ಉತ್ಪಾದಕ ಸಂಸ್ಥೆಅವ್ಯವಹಾರದ ಆಗರವಾಗಿ ಪರಿಣಮಿಸಿದ್ದು, ರೈತರಷೇರು ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬಆರೋಪ ಮಾಗಡಿ ತಾಲೂಕು ಕುದೂರು ಹೋಬಳಿ ಶ್ರೀಗಿರಿಪುರ ಗ್ರಾಮದಲ್ಲಿ ಕೇಳಿ ಬರುತ್ತಿದೆ.

ಗ್ರಾಮದ ಸುತ್ತಮುತ್ತಲಿನ ರೈತರಿಗೆ ಸರ್ಕಾರದ ಅನುದಾನ ಬಳಸಿಕೊಂಡು ಸೌಲಭ್ಯ ಕಲ್ಪಿಸುವಹಾಗೂ ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಉತ್ಪನ್ನ ಒದಗಿಸಲೆಂದು ಸ್ಥಳೀಯ ರೈತರು ಹಾಗೂ ಗ್ರಾಮಸ್ಥರಷೇರು ಹಣದಿಂದ 2015-16ರಲ್ಲಿ ಶ್ರೀಗಿರಿಪುರ ರೈತ ಉತ್ಪಾದಕ ಕಂಪನಿ ಆರಂಭವಾಗಿತ್ತು. ಮೊದಲಿಗೆ ಪ್ರಾಮಾಣಿಕವಾಗಿ ಸೇವೆ ನೀಡುತ್ತಿದ್ದ ಕಂಪನಿ ಯಲ್ಲಿಈಗ ಹಿಂದಿನ ಸಿಇಒ ಮತ್ತು ನಿರ್ದೇಶಕರು ರೈತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಭಾನು ಪ್ರಕಾಶ್‌ ಎಂಬ ಸಿಇಒ 4.95 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು 2019, 20, 21ನೇ ವರ್ಷದ ಕಂಪನಿಯ ಅಡಿಟ್‌ನಲ್ಲಿ ವರದಿಯಾಗಿತ್ತು. ಆದರೂ, ಅವರಿಂದ ಸಂಘಕ್ಕೆ ಬರಬೇಕಿರುವ ಹಣ ವಸೂಲಿ ಮಾಡುವಲ್ಲಿ ನಿರ್ದೇಶಕರು ಕಾಳಜಿ ವಹಿಸದಿರುವುದು ನೋಡಿದರೆಹಣ ದುರ್ಬ ಳಕೆಯಲ್ಲಿ ನಿರ್ದೇಶಕರು ಕೂಡ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ಕಾನೂನಾತ್ಮಕವಾಗಿ ಪ್ರಶ್ನಿಸಿಲ್ಲ: ಅಡಿಟ್‌ ವರದಿಯಲ್ಲಿ ಸಿಇಒ ಭಾನುಪ್ರಕಾಶ್‌ರಿಂದ ಹಣಬರ ಬೇಕೆಂದು ವರದಿಯಾಗಿದ್ದರೂ, ಈವರೆಗೆ ನಿರ್ದೇಶಕರು ಹಾಗೂ ಕಂಪನಿ ಈ ಬಗ್ಗೆ ಕಾನೂನಾತ್ಮಕವಾಗಿ ಪ್ರಶ್ನಿಸಿಲ್ಲವೇಕೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅಡಿಟ್‌ ವರದಿ ಸರಿಯಾಗಿದೆಯೇ ಎಂಬ ಅನುಮಾನ ಮೂಡಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕಿದೆ.

ಅಡಿಟ್‌ ಬಗ್ಗೆ ಅನುಮಾನ: ಈಗ ಕೆಲವು ನಿರ್ದೇ ಶಕ ಹಾಗೂ ಹೊಸದಾಗಿ ಬಂದಿರುವ ಸಿಇಒ ಹಿಂದಿನ ಸಿಇಒಗೆ ಕಂಪನಿಯಿಂದ ಹಣ ಕೊಡಬೇ ಕಿದೆ ಎಂದುಹೇಳುತ್ತಿದ್ದಾರೆ. ಆಡಿಟ್‌ ವರದಿಯಲ್ಲಿ ಎಲ್ಲಿಯೂಭಾನುಪ್ರಕಾಶ್‌ ಅವರಿಗೆ ಕಂಪನಿಯಿಂದ ಹಣ ಕೊಡಬೇಕೆಂದು ನಮೂದಾಗಿಲ್ಲದಿದ್ದರೂ, ಕಂಪನಿ ಖಾತೆಯಿಂದ ಹಿಂದಿನ ಸಿಇಒ ಭಾನು ಪ್ರಕಾಶ್‌ಗೆ ಹೇಗೆಹಣ ಕೊಡಲು ಸಾಧ್ಯ ಎಂಬ ಪ್ರಶ್ನೆ ಸಾರ್ವ ಜನಿಕವಲಯದಲ್ಲಿ ಮೂಡಿದ್ದು, ತೋಟಗಾರಿಕೆ ಇಲಾಖೆಅಧಿಕಾರಿ, ಜಿಪಂ ಸಿಇಒ ಈ ಬಗ್ಗೆ ಗಮನ ಹರಿಸಬೇಕಿದೆ.

ಆರೋಪ-ಪ್ರತ್ಯಾರೋಪ: ನಿರ್ದೇಶಕರು ಈ ಹಿಂದಿನ ಸಿಇಒ ಮೇಲೆ ಆರೋಪ ಮಾಡಿದರೆ,ಸಿಇಒ ನಿರ್ದೇಶಕರತ್ತ ಬೊಟ್ಟು ಮಾಡುತ್ತಾರೆ. ನಿರ್ದೇಶಕರು ತಮಗೆ ಇಷ್ಟ ಬಂದ ಹಾಗೆ ಹಣ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಹಾಕುತ್ತಿ ದ್ದಾರೆ. ನಿರ್ದೇಶಕರು ಈ ಹಿಂದೆ ನಡೆದ ಗ್ರಾಪಂ, ವಿಧಾನಸಭೆ ಚುನಾವಣೆಗೆಲ್ಲ ಹಣ ಬಳಸಿಕೊಂಡು ಹಿಂತಿರುಗಿಸಿದ್ದಾರೆ. ಹಣ ದುರ್ಬಳಕೆಯ ಬಗ್ಗೆ ನಿರ್ದೇಶಕರನ್ನು ಹಾಗೂ ಸ್ಥಳೀಯರನ್ನು ಕೇಳಿ ಹೇಳುತ್ತಾರೆ. ನಾನು ಯಾವುದೇ ಹಣ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ನಿರ್ದೇಶಕರ ಮೇಲೆ ಆರೋಪ ಮಾಡುತ್ತಾರೆ ಹಿಂದಿನ ಸಿಇಒ ಭಾನುಪ್ರಕಾಶ್‌.

ನಾನು ಶ್ರೀ ಗಿರಿಪುರ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗೆ ಯಾವುದೇಹಣ ಕೊಡಬೇಕಿಲ್ಲ. ನಾನು ಕೆಲಸ ಬಿಟ್ಟಮೇಲೆ ದುರ್ಬಳಕೆ ಹಣವನ್ನು ಅಡಿಟ್‌ವರದಿಯಲ್ಲಿ ನನ್ನ ಹೆಸರಿಗೆ ಸೇರಿಸಿದ್ದಾರೆ.ನಾನು ಹಣ ದುರ್ಬಳಕೆ ಮಾಡಿಕೊಂಡಿದ್ದರೆನನ್ನ ಮೇಲೆ ಇಲ್ಲಿಯವರೆಗೆ ನಿರ್ದೇಶಕರು ಕಾನೂನು ಕ್ರಮ ಏಕೆ ಜರುಗಿಸಿಲ್ಲ?.– ಭಾನುಪ್ರಕಾಶ್‌, ಹಿಂದಿನ ಸಿಇಒ. 

ಮಾನವೀಯತೆ ದೃಷ್ಟಿಯಿಂದ ನಾವು ಈವರೆಗೆ ಹಿಂದಿನ ಸಿಇಒ ಭಾನುಪ್ರಕಾಶ್‌ಗೆ ಕಾಲಾವಕಾಶ ನೀಡಿದ್ದೆವು. ಸರ್ವ ಸದಸ್ಯರ ಸಭೆಯಲ್ಲಿ ಹಣ ಪಾವತಿ ಮಾಡುತ್ತೇನೆ. ನನಗೆ ಕಾಲಾವಕಾಶ ಕೊಡಿ ಎಂದು ಭಾನುಪ್ರಕಾಶ್‌ ಒಪ್ಪಿಕೊಂಡಿದ್ದಾರೆ.– ಗಂಗಪ್ಪ ,ನಿರ್ದೇಶಕ ಶ್ರೀಗಿರಿಪುರ ಎಫ್‌ಪಿಒ,

-ಕೆ.ಎಸ್‌.ಮಂಜುನಾಥ್‌ ,ಕುದೂರು

ಟಾಪ್ ನ್ಯೂಸ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು

Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು

Ramanagara: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ… ಪೊಲೀಸ್ ಸಿಬ್ಬಂದಿಗಳಿಂದ ಪರಿಶೀಲನೆ

Ramanagara: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ… ಪೊಲೀಸರಿಂದ ಪರಿಶೀಲನೆ

Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ

Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.