ಭೀಮಪಲಾಸ ಸಂಗೀತೋತ್ಸವಕ್ಕೆ 30ರಂದು ತೆರೆ

11 ದಿನಗಳ ರಾಷ್ಟ್ರಮಟ್ಟದ ಕಲಾವಿದರ ಕಲಾ ಪ್ರದರ್ಶನ

Team Udayavani, Mar 17, 2022, 11:54 AM IST

6

ಧಾರವಾಡ: ಭಾರತರತ್ನ ಪಂ|ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಭೀಮಪಲಾಸ ಸಂಗೀತೋತ್ಸವವು ಧಾರವಾಡದಲ್ಲಿ ನಡೆಯಲಿರುವ 11 ದಿನಗಳ ಗಾಯನ-ವಾದನ-ನರ್ತನಗಳ ಝೇಂಕಾರದೊಂದಿಗೆ ಸಮಾರೋಪಗೊಳ್ಳಲಿದೆ.

ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿರುವ ಭೀಮಪಲಾಸ ಸಂಗೀತೋತ್ಸವವು 2021ರ ಫೆಬ್ರವರಿಯಿಂದ ಆರಂಭಗೊಂಡು ಕೋವಿಡ್‌-19 ಮಧ್ಯದಲ್ಲಿಯೂ ರಾಜ್ಯಾದ್ಯಂತ ವರ್ಷಪೂರ್ತಿ ಯಶಸ್ವಿ ನಡೆಸಿದವು.

ಇದೀಗ ಮಾ.20ರಿಂದ 30ರವರೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ 11 ದಿನಗಳ ರಾಷ್ಟ್ರಮಟ್ಟದ ಕಲಾವಿದರ ಕಲಾ ಪ್ರದರ್ಶನದೊಂದಿಗೆ ಭೀಮಪಲಾಸ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್‌ ಫೌಂಡೇಶನ್‌, ಭಾರತೀಯ ಜೀವ ವಿಮಾ ನಿಗಮ, ಎಲ್‌ಐಸಿಯ ಹೌಸಿಂಗ್‌ ಫೈನಾನ್ಸ್‌ಗಳ ಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿದೆ. ಇದಕ್ಕೆ ಪುಣೆಯ ಪಂ. ಕಾಣೇಬುವಾ ಪ್ರತಿಷ್ಠಾನ, ನಾನಾಸಾಹೇಬ ಆಲವಣಿ ಚಾರಿಟೇಬಲ್‌ ಟ್ರಸ್ಟ್‌, ಬೆಂಗಳೂರಿನ ಐಸಿಸಿಆರ್‌, ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಸಹಪ್ರಾಯೋಜಕತ್ವ ನೀಡಿವೆ. ಧಾರವಾಡದ ವಿವಿಡ್‌ಲಿಪಿ ಸಂಸ್ಥೆ 11 ದಿನ ಕಾರ್ಯಕ್ರಮ ನೇರಪ್ರಸಾರವನ್ನು https:// www.youtube.com/vividlipi/ live  ಮಾಡಲಿದೆ.

ಈ ಸಂಗೀತೋತ್ಸವದಲ್ಲಿ 50ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಗಳ ವಿವರ: ಮಾ.20ರಂದು ಬೆಳಿಗ್ಗೆ 10:00 ಗಂಟೆಗೆ ರಾಷ್ಟ್ರೀಯ ಸಂಗೀತೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸುವರು.

ಮಾ.20 ಹಾಗೂ 27 ರವಿವಾರ ದಿನದಂದು ದಿನಪೂರ್ತಿ, ಶನಿವಾರ ಸಂಜೆ 5:00 ಗಂಟೆಗೆ ಇನ್ನುಳಿದ ದಿನ ಸಂಜೆ 6:00 ಗಂಟೆಗೆ ನಡೆಯಲಿದೆ. ಮಾ.20ರಂದು ನವದೆಹಲಿಯ ಪಂ|ರಾಜೇಂದ್ರ ಪ್ರಸನ್ನ ಅವರ ಬಾನ್ಸುರಿಯ ನಿನಾದದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ಸಿಗಲಿದೆ.

ನಂತರ ಮಧ್ಯಾಹ್ನ 2:30 ಗಂಟೆಗೆ ಪಂ|ಜಯತೀರ್ಥ ಮೇವುಂಡಿಯವರ ಗಾಯನ ಸಂಜೆ 4:30 ಗಂಟೆಗೆ ಪುಣೆಯ ರಾಮದಾಸ ಫಳಸುಲೆ ಅವರ ತಬಲಾ ಸೋಲೋ, ಸಂಜೆ 6:00 ಗಂಟೆಗೆ ಪುಣೆಯ ನಿಷಾದ ಬಾಕ್ರೆ, 7:30 ಗಂಟೆಗೆ ವಿದುಷಿ ಅನುರಾಧಾ ಕುಬೇರ ಅವರ ಗಾನಲಹರಿ ಹೊರಹೊಮ್ಮಲಿದೆ.

ಮಾ.21ರಂದು ಸಂಜೆ 6:00 ಗಂಟೆಗೆ ಅಲಿಬಾಗ್‌ ಯುವ ಗಾಯಕಿ ಮುಗಾœ ವೈಶಂಪಾಯನ, 7:30 ಗಂಟೆಗೆ ಮುಂಬೈನ ಪಂ|ಶೌನಕ ಅಭಿಷೇಕಿ ಅವರ ಗಾನಸುಧೆ ಹರಿದು ಬರಲಿದೆ. ಮಾ.22ರಂದು ಸಂಜೆ 6:00 ಗಂಟೆಗೆ ಪುಣೆಯ ವಿನಯ ರಾಮದಾಸನ್‌, ವಿದುಷಿ ಮಂಜೂಷಾ ಪಾಟೀಲ ಕುಲಕರ್ಣಿಯವರ ಗಾಯನ ಕಾರ್ಯಕ್ರಮ ನಡೆಯಲಿದೆ.

ಮಾ.23ರಂದು ಸಂಜೆ 6:00 ಗಂಟೆಗೆ ಕೋಲತ್ತಾದ ಟ್ರೋಯಿಲಿ, ಮೊಯ್ಸಿಲಿ ದತ್ತಾ ಸಹೋದರಿಯರಿಂದ ಸರೋದ ತಂತುಗಳ ನಿನಾದ ಹರಿದು ಬರಲಿದ್ದು, ಸಂಜೆ 7:30 ಗಂಟೆಗೆ ಕೋಲ್ಕತ್ತಾದ ಬ್ರಿಜೇಶ್ವರ ಮುಖರ್ಜಿ ಅವರಿಂದ ಗಾಯನ ಮೂಡಿ ಬರಲಿದೆ.

ಮಾ.24 ರಂದು ಸಂಜೆ 6:00 ಗಂಟೆಗೆ ಕೋಲ್ಕತಾದ ಕಲ್ಯಾಣಜೀತ ದಾಸ ಅವರ ಸಿತಾರ ವಾದನ, ವಿದುಷಿ ಮನಾಲಿ ಬೋಸ್‌ ಅವರಿಂದ ಗಾನಲಹರಿ ಹೊರಹೊಮ್ಮಲಿದೆ. ಮಾ.25 ರಂದು ಸಂಜೆ 6:00 ಗಂಟೆಗೆ ಕೋಲ್ಕತ್ತಾದ ಐವಿ ಬ್ಯಾನರ್ಜಿ, 7:30 ಗಂಟೆಗೆ ಅರ್ಷದ ಅಲಿ ಖಾನರ ಗಾಯನ ಕಾರ್ಯಕ್ರಮ ನಡೆಯಲಿದೆ. ಮಾ.26ರಂದು ಸಂಜೆ 5:00 ಗಂಟೆಗೆ ಕೋಲ್ಕತ್ತಾದ ಶಾಶ್ವತಿ ಚೌಧರಿ, 6:00 ಗಂಟೆಗೆ ಬೆಂಗಳೂರಿನ ಪೂರ್ಣಿಮಾ ಭಟ್‌ ಕುಲಕರ್ಣಿ, 7:30 ಗಂಟೆಗೆ ಉ. ಫಯಾಜ್‌ ಖಾನರಿಂದ ಗಾನಸುಧೆ ಹರಿದು ಬರಲಿದೆ. ಮಾ.27 ರವಿವಾರ ದಿನಪೂರ್ತಿಯಾಗಿ ನಡೆಯುವ ಸಂಗೀತೋತ್ಸವದಲ್ಲಿ ಬೆಳಿಗ್ಗೆ 10:00 ಗಂಟೆಗೆ ಸೋಲಾಪುರದ ಭೀಮಣ್ಣ ಜಾಧವ ಅವರಿಂದ ಸುಂದರಿ ವಾದನ, 11:15 ರಿಂದ ಗಾನಪಂಡಿತ ಎಂ. ವೆಂಕಟೇಶಕುಮಾರ ಅವರಿಂದ ಗಾನಲಹರಿ ಮೊಳಗಲಿದೆ. ಮಧ್ಯಾಹ್ನ 2:30 ಗಂಟೆಗೆ ಕಿರಾನಾ ಘರಾಣೆಯ ಪಂ|ಕೈವಲ್ಯಕುಮಾರ ಗುರವ ಅವರ ಗಾಯನ ಮೂಡಿ ಬಂದರೆ, 4:15 ಗಂಟೆಗೆ ಪೊವೈನ ಹರ್ಷನಾರಾಯಣ ಅವರ ಸಾರಂಗಿ ವಾದನದ ನಿನಾದ ಹರಿದು ಬರಲಿದೆ. ಸಂಜೆ 6:00 ಗಂಟೆಗೆ ಮುಂಬೈನ ಚೇತನಾ ಪಾಠಕ ಅವರಿಂದ ಗಾಯನ, 7:30 ರಿಂದ ರುಚಿರಾ ಕೇದಾರ ಮತ್ತು ತಂಡದವರಿಂದ ಗಾಯನ-ವಾದನ-ನರ್ತನಗಳ ಕಲಾವಂತಿಕೆ ಮೂಡಿ ಬರಲಿದೆ. ಇದರಲ್ಲಿ ರುಚಿರಾ ಕೇದಾರ ಗಾಯನ, ಶೀತಲ ಕೋಳ್ವಲಕರ ಕಥಕ್‌ ನೃತ್ಯ, ಸಹನಾ ಬ್ಯಾನರ್ಜಿ ಸಿತಾರ ವಾದನ, ಸಾವನಿ ತಳವಲಕರ ತಬಲಾ, ಅದಿತಿ ಗರಡೆ ಹಾರ್ಮೋನಿಯಂ, ಅನುಜಾ ಬುರ್ಡೆ ಪಖಾವಾಜನ ವಿದ್ವತ್ತನ್ನು ಮೆರೆಯಲಿದ್ದಾರೆ.

ಮಾ.28 ರಂದು ಸಂಜೆ 6:00 ಗಂಟೆಗೆ ಉಜ್ಜಯನಿಯ ಸುಧಾಕರ ದೇವಳೆ ಅವರ ಗಾಯನ, ಸಂಜೆ 7:30 ಗಂಟೆಗೆ ಬೆಂಗಳೂರಿನ ಪ್ರವೀಣ ಗೋಡಖೀಂಡಿ ಷಡ್ಜ್ ಗೋಡಖೀಂಡಿಯವರ ದ್ವಂದ್ವ ಕೊಳಲುವಾದನಗಳ ನಿನಾದ ಹರಿಯಲಿದೆ. ಮಾ.29ರಂದು ಸಂಜೆ 6:00 ಗಂಟೆಗೆ ನಾಸಿಕ್‌ನ ಮಂಜರಿ ಅಸ್ನಾರೆ ಕೇಳಕರ ಹಾಗೂ ಸಂಜೆ 7:30 ಗಂಟೆಗೆ ಪುಣೆಯ ಪಂ|ಆನಂದ ಭಾಟೆ ಅವರ ಗಾನಸಿಂಚನ ಮೊಳಗಲಿದೆ. ಭೀಮಪಲಾಸ ಸಂಗೀತೋತ್ಸವದ ಕೊನೆಯ ದಿನ ಮಾ.30 ರಂದು ಮುಂಬೈ ವರದಾ ಗೊಡಬೋಲೆ ಗಾಯನ ಮೂಡಿ ಬರಲಿದೆ.

ಸಂಜೆ 7:30 ಗಂಟೆಗೆ ಮೂಡಿ ಬರುವ ನವದೆಹಲಿ ಪಂ|ಹರೀಶ ತಿವಾರಿ ಅವರ ಗಾಯನದೊಂದಿಗೆ ಪಂ|ಭೀಮಸೇನ ಜೋಶಿ ಜನ್ಮಶತಾಬ್ದಿ ವರ್ಷಾಚರಣೆಗೆ ತೆರೆ ಬೀಳಲಿದೆ. ಪಂ|ರಘುನಾಥ ನಾಕೋಡ, ಪಂ|ರವೀಂದ್ರ ಯಾವಗಲ್‌, ಪಂ|ರಾಮದಾಸ ಫಳಸುಲೆ, ಪಂ|ರಾಜೇಂದ್ರ ನಾಕೋಡ, ಪಂ|ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಇಶಾನ್‌ ಘೋಷ, ಪಾಂಡುರಂಗ ಪವಾರ, ಪ್ರಥಮೇಶ ಅಮ್ರುಲೆ, ಕೇಶವ ಜೋಶಿ, ಉದಯ ಕುಲಕರ್ಣಿ, ಶ್ರೀಧರ ಮಾಂಡ್ರೆ, ದೇಬಜಿತ ಪಟತುಂಡಿ, ಸುಮಿತ ನಾಯಕ, ರೂಪಕ ಕಲ್ಲೂರಕರ, ಅಂಗದ ದೇಸಾಯಿ ತಬಲಾ ಸಾಥ್‌ ನೀಡಲಿದ್ದಾರೆ. ಡಾ|ಸುಧಾಂಶು ಕುಲಕರ್ಣಿ, ಪಂ|ವ್ಯಾಸಮೂರ್ತಿ ಕಟ್ಟಿ, ಗುರುಪ್ರಸಾದ ಹೆಗಡೆ, ಅಮೇಯ ಬಿಚು, ಜೋತಿರ್ಮಯ ಬ್ಯಾನರ್ಜಿ, ಸತೀಶ ಭಟ್ಟ ಹೆಗ್ಗಾರ, ಭರತ ಹೆಗಡೆ ಅವರು ಹಾರ್ಮೋನಿಯಂ ಸಾಥ್‌, ಸರಫರಾಜ್‌ ಖಾನ ಸಾರಂಗಿ ಹಾಗೂ ರಂಜನ ಬ್ಯೂರಾ ವಯೋಲಿನ್‌ ಸಾತ್‌ ಸಂಗತ್‌ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.