ಕಾಡು ಹಂದಿ ದಾಳಿಗೆ ಅಡಕೆ ಗಿಡ ನಾಶ
Team Udayavani, Mar 22, 2022, 9:32 AM IST
ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕಾಡು ಹಂದಿಗಳ ದಾಳಿಗೆ ಅಂದಾಜು 300ಕ್ಕೂ ಹೆಚ್ಚು ಅಡಕೆ ಸಸಿಗಳು ನಾಶವಾಗಿವೆ. ರೈತ ಕೆ.ಎಸ್. ಬಸವರಾಜಪ್ಪ ಎಂಬವರ ಕಳೆದ ತಿಂಗಳಷ್ಟೇ ತಮ್ಮ ಒಂದು ಎಕರೆ ಜಮೀನಿನಲ್ಲಿ ಅಡಕೆ ಸಸಿಗಳನ್ನು ನೆಟ್ಟಿದ್ದರು. ಅವು ಬೇರು ಬಿಟ್ಟು ನಳನಳಿಸುವ ಹಂತದಲ್ಲಿರುವಾಗ ಕಾಡು ಹಂದಿಗಳು ದಾಳಿ ನಡೆಸಿ ಗಿಡದ ಬುಡವನ್ನು ಬಗೆದು ಅದರಲ್ಲಿರುವ ತೊಗಟೆಗಳನ್ನು ತಿಂದು ಹಾಕಿವೆ. ಇನ್ನು ಸುತ್ತಮುತ್ತಲಿನಲ ಹೊಲದ ರೈತರಾದ ರವಿಕುಮಾರ್ ಮತ್ತು ಕೆ.ಬಿ. ಸೋಮನಗೌಡ ಇವರ ಹೊಲದಲ್ಲೂ ಅಡಿಕೆ ಸಸಿಗಳನ್ನು ನಾಶಮಾಡಿವೆ.
ಆಹಾರಕ್ಕಾಗಿ ಪರದಾಟ
ಬೇಸಿಗೆ ಹೆಚ್ಚಾಗುತ್ತಿದ್ದು ಕಾಡು ಹಂದಿಗಳಿಗೆ ಪ್ರಸ್ತುತ ಆಹಾರ ಪದಾರ್ಥಗಳಿಗೆ ಪರದಾಡುತ್ತಿವೆ. ಪ್ರತಿವರ್ಷ ಬೇಸಿಗೆಯಲ್ಲಿ ಶೇಂಗಾ, ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದ ರೈತರು. ಕಳೆದ ವರ್ಷ ಮಳೆಗಾಲ ಹೆಚ್ಚಾಗಿರುವ ಕಾರಣ ಅಡಕೆ ಸಸಿಗಳ ನಾಟಿ ಮಾಡಿಸುತ್ತಿದ್ದಾರೆ. ಪ್ರತಿವರ್ಷ ಮೆಕ್ಕೇಜೋಳ, ಶೇಂಗಾ ಫಸಲನ್ನು ತಿಂದು ಹಾಳು ಮಾಡುತ್ತಿದ್ದ ಹಂದಿಗಳಿಗೆ ಈ ಬಾರಿ ಆಹಾರದ ಕೊರತೆ ಹೆಚ್ಚಾಗಿ ಅಡಕೆ ಸಸಿಗಳ ತೊಗಡೆಯನ್ನು ತಿಂದು ನಾಶಗೊಳಿಸುತ್ತಿವೆ. ಒಮ್ಮೆಲೆ ಗುಂಪು ಗುಂಪಾಗಿ ಬರುವ ಹಂದಿಗಳು ಅಡಕೆ ಗಿಡಗಳನ್ನು ಸರ್ವನಾಶ ಮಾಡಿ ಹೋಗಿವೆ. ಲಕ್ಷಾಂತರ ರೂ. ಬಂಡವಾಳ ಹಾಕಿರುವ ರೈತರು ಕಾಡು ಹಂದಿದಾಳಿಗೆ ರೋಸಿ ಹೋಗಿದ್ದಾರೆ.
ಕಳೆದ ತಿಂಗಳು ಸಸಿಗಳನ್ನು ನಾಟಿ ಮಾಡಿದ್ದೆವು. ಗಿಡಗಳು ಚಿಗುರಲಾರಂಭಿಸಿದ್ದವು. ಆದರೆ ಕಾಡುಹಂದಿಗಳ ದಾಂದಲೆಯಿಂದ ಹೊಲದಲ್ಲಿ 200 ಗಿಡಗಳನ್ನು ತಿಂದು ನಾಶಮಾಡಿವೆ. ಸಾವಿರಾರು ರೂಪಾಯಿ ನಷ್ಟವಾಗಿದೆ. ನಮ್ಮ ಅಕ್ಕಪಕ್ಕದ ಹೊಲಗಳಲ್ಲೂ ಹಂದಿಗಳು ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು – ಕೆ.ಎಸ್. ಬಸವರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
MUST WATCH
ಹೊಸ ಸೇರ್ಪಡೆ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ