ಸೇಡಂ ಪುರಸಭೆಗೆ 22 ಕೋಟಿ ಆದಾಯ ನಿರೀಕ್ಷೆ
Team Udayavani, Mar 30, 2022, 11:00 AM IST
ಸೇಡಂ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ 2022-23ನೇ ಸಾಲಿನ ಬಜೆಟ್ ಮಂಡನಾ ಸಭೆ ಜರುಗಿತು. ನೂತನ ಅಧ್ಯಕ್ಷೆ ಶೋಭಾ ಹೂಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 22 ಕೋಟಿ 77 ಲಕ್ಷ ರೂ. ಆದಾಯ ನಿರೀಕ್ಷೆ ಜೊತೆಗೆ 23.800ರೂ. ಉಳಿತಾಯದ ಬಜೆಟ್ ಮಂಡಿಸಲಾಯಿತು.
ಸಾರ್ವಜನಿಕರ ಸಲಹೆ-ಸೂಚನೆಗಳಿಲ್ಲದೇ ಬಜೆಟ್ ಮಂಡಿಸಲು ಮುಂದಾದ ಪುರಸಭೆ ಕ್ರಮಕ್ಕೆ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಕೆಲಹೊತ್ತು ವಿರೋಧ ವ್ಯಕ್ತಪಡಿಸಿದರು.
ಆದರೂ ಬಜೆಟ್ ಮಂಡಿಸುವ ಮೂಲಕ ಕೆಲವೇ ನಿಮಿಷಗಳಲ್ಲಿ ಅನುಮೋದನೆ ಪಡೆಯಲಾಯಿತು. ಈ ಬಾರಿಯ ಆಯವ್ಯಯದಲ್ಲಿ ಪಟ್ಟಣದ ಸೌಂದರ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಬೀದಿ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಅನುದಾನ ನಿಗಪಡಿಸಿರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಪ್ರಹ್ಲಾದ ಸಭೆಗೆ ತಿಳಿಸಿದರು. ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಇಲಾಖೆಯ ಹಣಮಂತ, ಸರ್ವ ಮೂಲಗಳಿಂದ ಒಟ್ಟು 22 ಕೋಟಿ 77 ಲಕ್ಷ ರೂ. ಆದಾಯ ನಿರೀಕ್ಷೆ ಮಾಡಲಾಗಿದ್ದು, ಸರಾಸರಿಯಾಗಿ 23,800ರೂ. ಉಳಿತಾಯದ ನಿರೀಕ್ಷೆ ಹೊಂದಲಾಗಿದೆ ಎಂದರು.
ಸರ್ವ ವಿಷಯಕ್ಕೂ ಅನುಮೋದನೆ ಇದೆ ಎಂದು ಸದಸ್ಯರು ಸೂಚಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಕೆರಳ್ಳಿ, ಸದಸ್ಯರಾದ ವೀರೇಂದ್ರ ರುದ್ನೂರ, ಸಿದ್ಧು ನಾಯಿಕೋಡಿ, ಶ್ರೀನಿವಾಸ ಬಳ್ಳಾರಿ, ಲಾಲು ರಾಠೊಡ, ಸಂತೋಷ ತಳವಾರ, ನಾಗಕುಮಾರ ಎಳ್ಳಿ, ರವೀಂದ್ರ ಜಡೇಕರ್, ಬಸಣ್ಣ ರನ್ನೇಟ್ಲಾ, ಆಶಾ ಜಾಧವ, ದೇವು ದೊರೆ, ಶಿವಾನಂದಸ್ವಾಮಿ, ಸುನಂದಾ ರಾಜಾಪುರ, ಮಲ್ಕಮ್ಮ ಕಣೇಕಲ್, ಸಕ್ಕುಬಾಯಿ ಪವಾರ, ಶೈರಿಬಿ, ಫಾತೀಮಾ ಅಂಜುಮ್, ಅತಿಯಾಬೇಗಂ, ಪ್ರಮಿಳಾ ಮಡಿವಾಳ, ಮಲ್ಕಪ್ಪ ಕೊಡದೂರ, ನೀಲಾಧರಶೆಟ್ಟಿ, ರಾಜುಗೌಡ್ಸ್, ಚಾಂದಬೀ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ