ರಬಕವಿ-ಬನಹಟ್ಟಿ: ಹೊಸೂರನಲ್ಲಿ ಅಗ್ನಿ ಅವಘಡ ಲಕ್ಷಾಂತರೂ ಮೌಲ್ಯದ ಹಾನಿ
Team Udayavani, Apr 4, 2022, 1:19 PM IST
ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ತಾಲೂಕಿನ ಹೊಸೂರ ಪಟ್ಟಣದಲ್ಲಿನ ಅರಿವೆ ಅಂಗಡಿಯೊಂದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದಾಗಿ ಬೆಂಕಿ ತಗುಲಿ ಲಕ್ಷಾಂತರರೂ ಮೌಲ್ಯದ ಹಾನಿಯಾದ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸೂರನ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರದ ಮಂಜುನಾಥ ಗಂಗಪ್ಪ ಚಿಪ್ಪಾಡಿ ಅವರಿಗೆ ಸೇರಿದ ಅರಿವೆ ಅಂಗಡಿಗೆ ಇಂದು ಮುಂಜಾನೆ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದಾಗಿ ಬೆಂಕಿ ತಗುಲಿದ್ದು, ಬೆಂಕಿ ತಗುಲಿದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕೂಡಲೇ ರಬಕವಿ-ಬನಹಟ್ಟಿ ಅಗ್ನಿ ಶಾಮಕದಳವು ಕೂಡಾ ಆಗಮಿಸಿ ಬೆಂಕಿಯನ್ನು ತಹಬದಿಗೆ ತರಲು ಯಶಸ್ವಿಯಾಯಿತು. ಇದರಿಂದ ಇನ್ನಷ್ಟ ಭಾರಿ ಪ್ರಮಾಣದ ಅವಗಡ ಸಂಭಿವಿಸುವುದನ್ನು ಸ್ಥಳಿಯರ ಸಮಯಪ್ರಜ್ಞೆ ಹಾಗೂ ಅಗ್ನಿ ಶಾಮಕದಳದವರ ಕಾರ್ಯದಿಂದ ಬೆಂಕಿ ನಂದಿಸಲು ಸಹಾಯವಾಯಿತು.
ಬೆಂಕಿ ಅವಗಡದಲ್ಲಿ ಸೀರೆ, ಡ್ರೆಸ್ ಮಟೀರಿಯಲ್ಸ್ ಸುಟ್ಟು ಕರಕಲಾಗಿದ್ದು, ಒಟ್ಟು ಅಂದಾಜು 15 ರಿಂದ 20 ಲಕ್ಷ ಮೊತ್ತದ ಹಾನಿ ಸಂಭವಿಸಿದೆ. ಅಲ್ಲದೇ ವ್ಯಾಪಾರ ಮಾಡಿದ ಸುಮಾರು 1.30 ಲಕ್ಷದಷ್ಟು ಅಧಿಕ ಮೊತ್ತದ ಹಣ ಕೂಡಾ ಸುಟ್ಟು ಕರಕಲಾಗಿವೆ ಎಂದು ಮಾಲೀಕರಾದ ಮಂಜುನಾಥ ಚಿಪ್ಪಾಡಿ ತಿಳಿಸಿದರು.
ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಬನಹಟ್ಟಿ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kodaikanal – Ooty ಪ್ರವಾಸಕ್ಕೆ ಇ-ಪಾಸ್ ಕಡ್ಡಾಯ: ಹೈಕೋರ್ಟ್
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್