ಎಡದಂಡೆ ಮುಖ್ಯ ಕಾಲುವೆಗೆ 6ರ ವರೆಗೆ ನೀರು ಪೂರೈಕೆ
Team Udayavani, Apr 4, 2022, 3:15 PM IST
ನಾರಾಯಣಪುರ: ಬಸವಸಾಗರ ಜಲಾಶಯದ ಎಡದಂಡೆ ಮುಖ್ಯ ಕಾಲುವೆಗೆ ಏ. 6ರವರೆಗೆ ನೀರು ಹರಿಸಲಾಗುತ್ತದೆ ಎಂದು ಅಣೆಕಟ್ಟು ವಿಭಾಗದ ಎಕ್ಸಿಕ್ಯೂಟಿವ್ ಎಂಜನಿಯರ್ ಶಂಕರ ನಾಯ್ಕೋಡಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ಹಿಂಗಾರು ಹಂಗಾಮಿನ ಬೆಳೆಗಳ ಸಂರಕ್ಷಣೆ, ಕೆರೆಗಳು ಹಾಗೂ ಇಂಪೌಂಡಿಂಗ್ ರಿಸರವೈಯರ್ ತುಂಬಿಸಿಕೊಳ್ಳಲು ಅಚ್ಚುಕಟ್ಟು ಭಾಗದ ಶಾಸಕರು, ರೈತರು ಹಾಗೂ ರೈತ ಸಂಘಟನೆಗಳು ಏ. 4ರಿಂದ ಏ. 10ರವರಗೆ ಕಾಲುವೆಗಳಿಗೆ ನೀರನ್ನು ಹರಿಸುವಂತೆ ಮನವಿ ಮಾಡಿದೆ.
ಹೀಗಾಗಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಗೋವಿಂದ ಕಾರಜೋಳ ಅವರ ನಿರ್ದೇಶನದಂತೆ ಜಲಾಶಯದಲ್ಲಿ ಉಳಿತಾಯವಾದ ನೀರನ್ನು ಏ. 4ರಿಂದ ಏ. 6ರವರೆಗೆ 3 ದಿನಗಳವರೆಗೆ ನೀರು ಹರಿಸಲಾಗುತ್ತದೆ. ಈ ಹಿಂದೆ ಹಿಂಗಾರು ಹಂಗಾಮಿಗೆ ನೀರು ಹರಿಸಲು ಕರೆಯಲಾದ ನೀರಾವರಿ ಸಲಹಾ ಸಮಿತಿ ಸಭೆ ನಿರ್ದೇಶನದಂತೆ ಮುಖ್ಯ ಕಾಲುವೆಗಳಿಗೆ ಏ. 3ರವರೆಗೆ ನೀರು ಹರಿಸಿ ಬಳಿಕ ನೀರು ಸ್ಥಗಿತಗೊಳಿಸಲು ಹೇಳಲಾಗಿತ್ತು ಎಂದು ಪತ್ರಿಕೆಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು
JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ