ಪತಿ ಸಾವಿನ ಸುದ್ದಿ ಕೇಳಿ ಮಗನೊಂದಿಗೆ ಪತ್ನಿ ನೇಣಿಗೆ ಶರಣು!
Team Udayavani, Apr 17, 2022, 12:24 PM IST
ಲಿಂಗಸುಗೂರು: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಐದು ತಿಂಗಳ ಮಗನೊಂದಿಗೆ ಪತ್ನಿಯೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದಿದೆ.
ಉಡುಪಿಯಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗಾರಾಮ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಾವಿನ ಸುದ್ದಿ ತಿಳಿದು ಲಿಂಗಸುಗೂರು ಪಟ್ಟಣದಲ್ಲಿ ಗಂಗಾರಾಮ್ ಪತ್ನಿ ಶ್ರುತಿ (30) ತನ್ನ ಮಗ ಅಭಿರಾಮ್ ನಿಗೆ (ಐದು ತಿಂಗಳು) ನೇಣು ಹಾಕಿ ತಾನೂ ನೇಣಿಗೆ ಶರಣಾದ ಘಟನೆ ಬೆಳಗಿನ ಜಾವ ನಡೆದಿದೆ.
ಇದನ್ನೂ ಓದಿ:ಸಾರಾಯಿ ಖರೀದಿ ಹಣದಲ್ಲಿ ಚಿಲ್ಲರೆ ವಾಪಸ್ ಕೊಡದಿದ್ದಕ್ಕೆ ಬಿಯರ್ ಬಾಟಲಿಯಿಂದ ಹೊಡೆದು ಕೊಲೆ
ಸ್ಥಳಕ್ಕೆ ಡಿವೈಎಸ್ಪಿ ಎಸ್ ಎಸ್ ಹುಲ್ಲೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.