ಆರ್ ಸಿಬಿಗೆ ಮತ್ತೆ ಸೋಲು : ಗೆದ್ದು ಬೀಗಿದ ಗುಜರಾತ್ ಟೈಟಾನ್ಸ್


Team Udayavani, Apr 30, 2022, 7:19 PM IST

1-wwqewqe

ಮುಂಬಯಿ: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಹೊಸ ತಂಡವಾದ ಗುಜರಾತ್‌ ಟೈಟಾನ್ಸ್‌ ತಂಡವು ಶನಿವಾರದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.

ಈ ಗೆಲುವಿನ ಮೂಲಕ ಗುಜರಾತ್‌ ಸತತ ಐದು ಪಂದ್ಯಗಳಲ್ಲಿ ಜಯ ಸಾಧಿಸಿದ ಸಾಧನೆ ಮಾಡಿದ್ದರೆ ಇದು ಆರ್‌ಸಿಬಿಗೆ ಸತತ ಮೂರನೇ ಸೋಲು ಆಗಿದೆ.

ಡೇವಿಡ್‌ ಮಿಲ್ಲರ್‌ ಮತ್ತು ರಾಹುಲ್‌ ತೆವಾಟಿಯ ಅವರ ಭರ್ಜರಿ ಆಟದಿಂದಾಗಿ ಗುಜರಾತ್‌ ತಂಡವು 19.3 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ಕಳೆದುಕೊಂಡು 174 ರನ್‌ ಪೇರಿಸಿ ಜಯಭೇರಿ ಬಾರಿಸಿತು. ಈ ಮೊದಲು ವಿರಾಟ್‌ ಕೊಹ್ಲಿ ಅವರ ಅರ್ಧಶತಕದಿಂದಾಗಿ ಆರ್‌ಸಿಬಿ ತಂಡವು 6 ವಿಕೆಟಿಗೆ 170 ರನ್‌ ಪೇರಿಸಿತ್ತು.

ಈ ಐಪಿಎಲ್‌ನಲ್ಲಿ ಎಂಟನೇ ಗೆಲುವು ದಾಖಲಿಸಿದ ಗುಜರಾತ್‌ ತಂಡವು 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಲೀಗ್‌ ಹಂತದ ಸ್ಪರ್ಧೆಗಳು ಮುಗಿಯುವ ವೇಳೆ ತಂಡವು ಅಗ್ರ ಎರಡರ ಒಳಗಿನ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಪಂದ್ಯದಲ್ಲೂ ಗುಜರಾತ್‌ನ ಬೌಲರ್‌ಗಳು ಮತ್ತು ಬ್ಯಾಟ್ಸ್‌ ಮನ್‌ ಗಮನಾರ್ಹ ನಿರ್ವಹಣೆ ನೀಡಿದ್ದಾರೆ. ಈ ಗೆಲುವಿನಿಂದಾಗಿ ಗುಜರಾತ್‌ ತಂಡವು ರವಿವಾರದ ಗುಜರಾತ್‌ ಡೇ ಆಚರಣೆಯನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸುವ ಸಾಧ್ಯತೆಯಿದೆ.

ಉತ್ತಮ ಆರಂಭ
ಆರಂಭಿಕರಾದ ವೃದ್ಧಿಮಾನ್‌ ಸಾಹಾ ಮತ್ತು ಶುಭಮನ್‌ ಗಿಲ್‌ ಅವರು ಮೊದಲ ವಿಕೆಟಿಗೆ 51 ರನ್‌ ಪೇರಿಸುವ ಮೂಲಕ ಗುಜರಾತ್‌ ತಂಡ ಉತ್ತಮ ಆರಂಭ ಪಡೆಯಿತು. ಆಬಳಿಕ ಕುಸಿತ ಕಂಡ ಗುಜರಾತ್‌ 13 ಓವರ್‌ ಮುಗಿದಾಗ 95 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಒದ್ದಾಡುವ ಸ್ಥಿತಿಗೆ ಬಿತ್ತು. ಆದರೆ ತೆವಾಟಿಯ ಮತ್ತು ಮಿಲ್ಲರ್‌ ಸ್ಫೋಟಕವಾಗಿ ಆಡಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಭರ್ಜರಿಯಾಗಿ ಆಡಿದ ಅವರಿಬ್ಬರು ಮುರಿಯದ ಐದನೇ ವಿಕೆಟಿಗೆ 79 ರನ್‌ ಪೇರಿಸಿದರು. ತೆವಾಟಿಯ 25 ಎಸೆತ ಎದುರಿಸಿ 5 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 43 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅವರಿಗೆ ಉತ್ತಮ ಬೆಂಬಲ ನೀಡಿದ ಮಿಲ್ಲರ್‌ 24 ಎಸೆತಗಳಿಂದ 39 ರನ್‌ ಹೊಡೆದರು. 4 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು.

ಕೊಹ್ಲಿ ಅರ್ಧಶತಕ
ಇನ್ನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಈ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು. ಆರಂಭಿಕ ಫಾ ಡು ಪ್ಲೆಸಿಸ್‌ ಬೇಗನೇ ಔಟಾದರೂ ಕೊಹ್ಲಿ ತಾಳ್ಮೆಯಿಂದ ಆಡಿ ತಂಡವನ್ನು ಆಧರಿಸಿದರು. ಎಚ್ಚರಿಕೆಯ ಆಟವಾಡಿದ ಕೊಹ್ಲಿ ಮತ್ತು ರಜತ್‌ ಪಾಟಿದಾರ್‌ ಅವರು ದ್ವಿತೀಯ ವಿಕೆಟಿಗೆ 99 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಸುಸ್ಥಿತಿಗೆ ತಲುಪಿಸಿದರು.

ಕೊಹ್ಲಿ ಆಟ ಸ್ಫೋಟಕವಾಗಿರಲಿಲ್ಲ, ಆದರೆ ಬಹಳಷ್ಟು ಎಚ್ಚರ ವಹಿಸಿ ಆಡುವ ಮೂಲಕ ಫಾರ್ಮ್ಗೆ ಮರಳಿರುವ ಸೂಚನೆಯಿತ್ತರು. 53 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 58 ರನ್‌ ಗಳಿಸಿದರು. ಇದು ಈ ಋತುವಿನ 9 ಸಹಿತ ಕಳೆದ 14 ಐಪಿಎಲ್‌ ಪಂದ್ಯಗಳಲ್ಲಿ ಕೊಹ್ಲಿ ಹೊಡೆದ ಮೊದಲ ಅರ್ಧಶತಕವಾಗಿದೆ. ಅರ್ಧಶತಕ ಸಿಡಿಸಿ ಮರಳಿದಾಗ ಅವರಿಗೆ ವಾಂಖೇಡೆ ಕ್ರೀಡಾಂಗಣದಲ್ಲಿನ ಅಭಿಮಾನಿಗಳು ಎದ್ದು ನಿಂತು ಗೌರನವ ಸಲ್ಲಿಸಿದರು.

ಕೊಹ್ಲಿ ಅವರಿಗಿಂತ ಹೆಚ್ಚು ಬಿರುಸಿನಿಂದ ಆಡಿದ ಪಾಟಿದಾರ್‌ 32 ಎಸೆತಗಳಿಂದ 52 ರನ್‌ ಹೊಡೆದರು. ಇದು ಐಪಿಎಲ್‌ನಲ್ಲಿ ಅವರ ಮೊದಲ ಅರ್ಧಶತಕವಾಗಿದೆ. 5 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು. ಕೊನೆ ಹಂತದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿಡಿದ ಕಾರಣ ಆರ್‌ಸಿಬಿ ಸವಾಲೆಸೆಯುವ ಮೊತ್ತ ಪೇರಿಸುವಂತಾಯಿತು. ಮ್ಯಾಕ್ಸ್‌ವೆಲ್‌ 18 ಎಸೆತಗಳಿಂದ 33 ರನ್‌ ಹೊಡೆದರು.

ಬಿಗು ದಾಳಿ ಸಂಘಟಿಸಿದ ಪ್ರದೀಪ್‌ ಸಂಗವಾನ್‌ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 19 ರನ್‌ ನೀಡಿ ಎರಡು ವಿಕೆಟ್‌ ಹಾರಿಸಿದ್ದರು. ಇನ್ನುಳಿದ ಬೌಲರ್‌ಗಳಾದ ಶಮಿ, ರಶೀದ್‌, ಜೋಸೆಫ್ ಮತ್ತು ಫ‌ರ್ಗ್ಯುಸನ್‌ ತಲಾ ಒಂದು ವಿಕೆಟ್‌ ಉರುಳಿಸಿದರು.

ಚೇಸಿಂಗ್‌ ಸಾಧನೆ
ನೂತನ ತಂಡವಾದ ಗುಜರಾತ್‌ ಟೈಟಾನ್ಸ್‌ ಜಂಟಿ ಚೇಸಿಂಗ್‌ ದಾಖಲೆ ಬರೆಯಿತು. ಈ ಐಪಿಎಲ್‌
ಸೀಸನ್‌ನ ಅಂತಿಮ ಓವರ್‌ನಲ್ಲಿ ಅತ್ಯಧಿಕ 5 ಪಂದ್ಯಗಳನ್ನು ಚೇಸ್‌ ಮಾಡಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಯಿತು. ಇದಕ್ಕೂ ಮುನ್ನ 2018ರಲ್ಲಿ ಚೆನ್ನೈ ಮತ್ತು 2019ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ಕೂಡ ಕೊನೆಯ ಓವರ್‌ನಲ್ಲಿ 5 ಪಂದ್ಯಗಳ ಚೇಸಿಂಗ್‌ ಸಾಧನೆಗೈದಿದ್ದವು. ಇನ್ನೂ ಸಾಕಷ್ಟು ಪಂದ್ಯಗಳನ್ನು ಆಡಲಿರುವುದರಿಂದ ಈ ದಾಖಲೆಯನ್ನು ಮುರಿಯುವ ಅವಕಾಶವೊಂದು ಗುಜರಾತ್‌ಗೆ ಒದಗಿ ಬಂದಿದೆ.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಬಿ ಮೊಹಮ್ಮದ್‌ ಶಮಿ 58
ಫಾ ಡು ಪ್ಲೆಸಿಸ್‌ ಸಿ ಸಾಹಾ ಬಿ ಸಂಗವಾನ್‌ 0
ರಜತ್‌ ಪಾಟಿದಾರ್‌ ಸಿ ಗಿಲ್‌ ಬಿ ಸಂಗವಾನ್‌ 52
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ರಶೀದ್‌ ಬಿ ಫೆರ್ಗ್ಯುಸನ್‌ 33
ದಿನೇಶ್‌ ಕಾರ್ತಿಕ್‌ ಸಿ ಶಮಿ ಬಿ ರಶೀದ್‌ 2
ಶಾಬಾಜ್‌ ಅಹ್ಮದ್‌ ಔಟಾಗದೆ 2
ಮಹಿಪಾಲ್‌ ಲೊನ್ರೋರ್‌ ಸಿ ಮಿಲ್ಲರ್‌ ಬಿ ಜೋಸೆಫ್ 16
ಇತರ: 7
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 170
ವಿಕೆಟ್‌ ಪತನ: 1-11, 2-110, 3-129, 4-138, 5-150, 6-170
ಬೌಲಿಂಗ್‌:
ಮೊಹಮ್ಮದ್‌ ಶಮಿ 4-0-39-1
ಪ್ರದೀಪ್‌ ಸಂಗವಾನ್‌ 4-0-19-2
ಅಲ್ಜಾರಿ ಜೋಸೆಫ್ 4-0-42-1
ರಶೀದ್‌ ಖಾನ್‌ 4-0-29-1
ಲೂಕಿ ಫ‌ರ್ಗ್ಯುಸನ್‌ 4-0-36-1

ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹಾ ಸಿ ಪಾಟಿದಾರ್‌ ಬಿ ಹಸರಂಗ 29
ಶುಭಮನ್‌ ಗಿಲ್‌ ಎಲ್‌ಬಿಡಬ್ಲ್ಯು ಬಿ ಶಾಬಾಜ್‌ 31
ಸಾಯ್‌ ಸುದರ್ಶನ್‌ ಸಿ ಬದಲಿಗ ಬಿ ಹಸರಂಗ 20 ಹಾರ್ದಿಕ್‌ ಪಾಂಡ್ಯ ಸಿ ಲೊನ್ರೋರ್‌ ಬಿ ಶಾಬಾಜ್‌ 3
ಡೇವಿಡ್‌ ಮಿಲ್ಲರ್‌ ಔಟಾಗದೆ 39
ರಾಹುಲ್‌ ತೆವಾಟಿಯ ಔಟಾಗದೆ 43
ಇತರ: 9
ಒಟ್ಟು (19.3 ಓವರ್‌ಗಳಲ್ಲಿ 4 ವಿಕೆಟಿಗೆ) 174
ವಿಕೆಟ್‌ ಪತನ: 1-51, 2-68, 3-78, 4-95
ಬೌಲಿಂಗ್‌:
ಗ್ಲೆನ್‌ ಮ್ಯಾಕ್ಸ್‌ವೆಲ್‌ 1-0-10-0
ಮೊಹಮ್ಮದ್‌ ಸಿರಾಜ್‌ 4-0-35-0
ಜೋಶ್‌ ಹ್ಯಾಝೆಲ್‌ವುಡ್‌ 3.3-0-36-0
ಶಾಬಾಜ್‌ ಅಹ್ಮದ್‌ 3-0-26-2
ಹರ್ಷಲ್‌ ಪಟೇಲ್‌ 4-0-35-0
ವನಿಂದು ಹಸರಂಗ 4-0-28-2
ಪಂದ್ಯಶ್ರೇಷ್ಠ: ರಾಹುಲ್‌ ತೆವಾಟಿಯ

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

1-wtwtw

ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್ ಗೆ ತೀವ್ರ ನಿರಾಸೆ ತಂದಿಟ್ಟ ಫೈನಲ್ ಸೋಲು

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

1-sad-dad

ಐಪಿಎಲ್‌ ಫೈನಲ್‌: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್‌ ರಾಯಲ್ಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.