ಆಜಾನ್ ಗೆ ಪ್ರತಿಯಾಗಿ ದೇವಸ್ಥಾನಗಳಲ್ಲಿ ಬೆಳಗ್ಗೆ 5 ರಿಂದ ಓಂಕಾರ, ಸುಪ್ರಭಾತ : ಮುತಾಲಿಕ್
Team Udayavani, May 1, 2022, 8:10 PM IST
ಮಂಗಳೂರು: ಮೇ 9ರಿಂದ ರಾಜ್ಯದ ಒಂದು ಸಾವಿರ ದೇವಸ್ಥಾನಗಳಲ್ಲಿ ಬೆಳಗ್ಗೆ 5 ರಿಂದ ಓಂಕಾರ, ಸುಪ್ರಭಾತ ಮೊಳಗಿಸುವುದಾಗಿ ಪ್ರಮೋದ್ ಮುತಾಲಿಕ್ ಭಾನುವಾರ ಹೇಳಿದ್ದಾರೆ.
ಆಜಾನ್ ವೇಳೆ ಮೈಕ್ ಬಗ್ಗೆ ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘನೆ ವಿರೋಧಿಸಿ ಮೇ 9ರಿಂದ ರಾಜ್ಯದ ಒಂದು ಸಾವಿರ ದೇವಸ್ಥಾನ, ಮಠ- ಮಂದಿರಗಳಲ್ಲಿ ಬೆಳಗ್ಗೆ 5 ರಿಂದ ಓಂಕಾರ, ಸುಪ್ರಭಾತ ಮೊಳಗಿಸುವುದಾಗಿ ತಿಳಿಸಿದ್ದಾರೆ.
ಮಸೀದಿಗಳಲ್ಲಿ ಆಜಾನ್ ವೇಳೆ ಧ್ವನಿವರ್ಧಕ ನಿಷೇಧಿಸಲು ಮೇ 1 ರವರೆಗೂ ಗಡುವು ನೀಡಿದ್ದ ಶ್ರೀರಾಮಸೇನೆ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿವೆ.