ಆರ್‌ಸಿಬಿ-ಚೆನ್ನೈ : ಇಬ್ಬರಿಗೂ ಗೆಲುವು ಅತ್ಯಗತ್ಯ


Team Udayavani, May 4, 2022, 8:10 AM IST

ಆರ್‌ಸಿಬಿ-ಚೆನ್ನೈ : ಇಬ್ಬರಿಗೂ ಗೆಲುವು ಅತ್ಯಗತ್ಯ

ಪುಣೆ: ಈ ಸಲ ತಂಡದ ಹಣೆಬರಹ ಬದಲಾದಂತಿದೆ ಎಂಬ ರೀತಿಯಲ್ಲಿ ಆಟ ಆರಂಭಿಸಿ, ಈಗ ಸೋಲಿನೊಂದಿಗೆ ಗಾಢ ನಂಟು ಬೆಳೆಸಿರುವ ಆರ್‌ಸಿಬಿ ಬುಧವಾರದ ಮಹತ್ವದ ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಇಲ್ಲಿ ಗೆದ್ದು, ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡರೆ ಡು ಪ್ಲೆಸಿಸ್‌ ಬಳಗದ ಪ್ಲೇ ಆಫ್ ಮೇಲೆ ಒಂದು ಹಂತದ ತನಕ ನಿರೀಕ್ಷೆ ಇರಿಸಿಕೊಳ್ಳಬಹುದು. ಸದ್ಯ ಹತ್ತರಲ್ಲಿ 5 ಪಂದ್ಯಗಳನ್ನಷ್ಟೇ ಜಯಿಸಿರುವ ಆರ್‌ಸಿಬಿ ಉಳೆದೆಲ್ಲ ಪಂದ್ಯಗಳನ್ನು ದೊಡ್ಡ ಅಂತರದಿಂದ ಜಯಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ರನ್‌ರೇಟ್‌ ಕೂಡ ಮೈನಸ್‌ನಲ್ಲಿದೆ.

ಚೆನ್ನೈ ತಂಡದ್ದು ಇದಕ್ಕೆ ತದ್ವಿರುದ್ಧ ಕೇಸ್‌. ಅದು ಆರಂಭದಲ್ಲಿ ಸತತವಾಗಿ ಸೋತು, ಇನ್ನೇನು ಹೊರಬೀಳಲಿದೆ ಎನ್ನುವಾಗಲೇ ಗೆಲುವಿನ ಲಯ ಕಾಣಲಾರಂಭಿಸಿದೆ. ಮಹೇಂದ್ರ ಸಿಂಗ್‌ ಧೋನಿಗೆ ಮರಳಿ ನಾಯಕತ್ವ ಲಭಿಸಿದ ಬಳಿಕ ತಂಡದ ಚಹರೆ ಹಾಗೂ ಆಟದ ರೀತಿಯೆರಡೂ ಬದಲಾಗಿದೆ. ಎರಡರಲ್ಲೂ ಧನಾತ್ಮಕ ಸಂಗತಿಗಳೇ ಗೋಚರಿಸುತ್ತಿವೆ.

ಆದರೂ ಚೆನ್ನೈ ಮುಂದಿರುವ ಸವಾಲು ಸುಲಭದ್ದಲ್ಲ. ಅದು 9 ಪಂದ್ಯಗಳಲ್ಲಿ ಗೆದ್ದದ್ದು 3 ಮಾತ್ರ. ಉಳಿದ ಐದೂ ಪಂದ್ಯಗಳನ್ನು ಗೆದ್ದು, ರನ್‌ರೇಟ್‌ ಸುಧಾರಿಸಿಕೊಂಡರೆ 4ನೇ ಸ್ಥಾನಕ್ಕೆ ಪೈಪೋಟಿ ನೀಡಬಹುದು. ಆದರೂ ಇದು ಖಾತ್ರಿಯೇನಲ್ಲ. ಆದರೆ ಉಳಿದ ತಂಡಗಳ ಮುನ್ನಡೆಗೆ ಅಡ್ಡಗಾಲಿಕ್ಕಬಹುದು. ಚೆನ್ನೈಯಿಂದ ಇಂಥ ಸ್ಥಿತಿ ಎದುರಿಸುತ್ತಿರುವ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದು!

ಆರ್‌ಸಿಬಿ ಸಾಧನೆ ಸಾಲದು
ಆರ್‌ಸಿಬಿಯ ಆರಂಭ ಹೇಗೆಯೇ ಇರಲಿ, ಈ 10 ಪಂದ್ಯಗಳ ಒಟ್ಟು ಸಾಧನೆಯನ್ನು ಗಮನಿಸುವಾಗ ಕರ್ನಾಟಕದ ಫ್ರಾಂಚೈಸಿಯ ಪ್ರದರ್ಶನ ಏನೂ ಸಾಲದು. ಈವರೆಗೆ ತಂಡದಿಂದ ದಾಖಲಾದದ್ದು 6 ಅರ್ಧ ಶತಕ ಮಾತ್ರ. ಇದರಲ್ಲಿ ಎರಡನ್ನು ನಾಯಕ ಡು ಪ್ಲೆಸಿಸ್‌ ಅವರೇ ಹೊಡೆದಿದ್ದಾರೆ. ಆದರೀಗ ಅವರೂ ಬೇಗನೇ ವಿಕೆಟ್‌ ಒಪ್ಪಿಸುತ್ತಿದ್ದಾರೆ. ಹೀಗಾಗಿ ಉಳಿದ ಬ್ಯಾಟರ್‌ಗಳಿಗೆ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಸಾಕಷ್ಟು ಪರದಾಡಿದ ಬಳಿಕ ವಿರಾಟ್‌ ಕೊಹ್ಲಿ ಕಳೆದ ಪಂದ್ಯದಲ್ಲಿ ಐವತ್ತರ ಗಡಿ ದಾಟಿದರು. ಇದಕ್ಕಿಂತ ಉತ್ತಮ ಮಟ್ಟದ ಪ್ರದರ್ಶನವನ್ನು ಅವರಿಂದ ತಂಡ ಬಯಸುತ್ತದೆ. ಯುವ ಆಟಗಾರ ರಜತ್‌ ಪಾಟಿದಾರ್‌ ಓಕೆ. ಆದರೆ ಸ್ಥಿರ ಪ್ರದರ್ಶನ ಅಗತ್ಯ. ದಿನೇಶ್‌ ಕಾರ್ತಿಕ್‌ ಅವರ ಅಬ್ಬರದ ಆಟ ಈಗ ಗೋಚರಿಸುತ್ತಿಲ್ಲ. ಮ್ಯಾಕ್ಸ್‌ವೆಲ್‌ ಕೂಡ ಮಂಕಾಗಿದ್ದಾರೆ. ಇವರಿಬ್ಬರು ಸಿಡಿದು ನಿಂತರೆ ಆರ್‌ಸಿಬಿಯನ್ನು ತಡೆಯುವುದು ಕಷ್ಟ.

ಆರ್‌ಸಿಬಿಯ ಬೌಲಿಂಗ್‌ ಯೂನಿಟ್‌ನಲ್ಲೂ ಸಾಕಷ್ಟು ದೌರ್ಬಲ್ಯಗಳಿವೆ. ಸಿರಾಜ್‌ ಯಾವುದೇ ಪರಿಣಾಮ ಬೀರದಿರುವುದು, ಹರ್ಷಲ್‌ ಪಟೇಲ್‌ ಡೆತ್‌ ಓವರ್‌ಗಳಲ್ಲಿ ಕ್ಲಿಕ್‌ ಆಗದಿರುವುದು ತಂಡದ ಪ್ರಮುಖ ಸಮಸ್ಯೆ.

ಧೋನಿಯೇ ತಂಡದ ಸ್ಫೂರ್ತಿ
ಧೋನಿ ಮರಳಿ ತಂಡದ ಚುಕ್ಕಾಣಿ ಹಿಡಿದದ್ದೇ ಚೆನ್ನೈ ತಂಡಕ್ಕೊಂದು ಸ್ಫೂರ್ತಿ. ಹಾಗೆಯೇ ಕಳೆದ ಋತುವಿನ ಬ್ಯಾಟಿಂಗ್‌ ಹೀರೋ ಋತುರಾಜ್‌ ಗಾಯಕ್ವಾಡ್‌ ಫಾರ್ಮ್ ಕಂಡುಕೊಂಡಿರುವುದೊಂದು ಶುಭ ಸೂಚನೆ. ಡೇವನ್‌ ಕಾನ್ವೆ ಕೂಡ ಭರವಸೆ ಮೂಡಿಸಿದ್ದಾರೆ. ಆದರೂ ಬ್ಯಾಟಿಂಗ್‌ ವಿಭಾಗದಲ್ಲಿ ಫಾರ್ಮ್ನಲ್ಲಿಲ್ಲದ ಆಟಗಾರ ಸಂಖ್ಯೆಯೇ ದೊಡ್ಡದಿದೆ. ನಾಯಕತ್ವದ ಒತ್ತಡದಿಂದ ಮುಕ್ತರಾದ ರವೀಂದ್ರ ಜಡೇಜ ಫಾರ್ಮ್ಗೆ ಮರಳಿಯಾರೇ ಎಂಬುದು ದೊಡ್ಡ ನಿರೀಕ್ಷೆ.

ತಂಡದ ಬೌಲಿಂಗ್‌ ಘಾತಕವೇನಲ್ಲ. ಮುಕೇಶ್‌ ಚೌಧರಿ ಮೋಡಿಗೈಯುತ್ತಿದ್ದಾರೆ. ಮಹೀಶ್‌ ತೀಕ್ಷಣ ಪರಾÌಗಿಲ್ಲ. ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ.

ಆರ್‌ಸಿಬಿ ವಿರುದ್ಧವೇ ಮೊದಲ ಜಯ
ಸತತ 4 ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ, ಈ ಋತುವಿನ ಮೊದಲ ಜಯ ಸಾಧಿಸಿದ್ದೇ ಆರ್‌ಸಿಬಿ ವಿರುದ್ಧ ಎಂಬುದನ್ನು ಮರೆಯುವಂತಿಲ್ಲ. ಎ. 12ರಂದು ನವೀ ಮುಂಬಯಿಯಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ 23 ರನ್ನುಗಳ ಗೆಲುವು ಕಂಡಿತ್ತು.

ರಾಬಿನ್‌ ಉತ್ತಪ್ಪ (88) ಮತ್ತು ಶಿವಂ ದುಬೆ (ಅಜೇಯ 95) ಬ್ಯಾಟಿಂಗ್‌ ಶೌರ್ಯದಿಂದ ಚೆನ್ನೈ 4ಕ್ಕೆ 216 ರನ್‌ ರಾಶಿ ಹಾಕಿತು. ಆರ್‌ಸಿಬಿ 9 ವಿಕೆಟಿಗೆ 193ರ ತನಕ ಬಂದು ಶರಣಾಯಿತು. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯ, ಒಂದೂ ಅರ್ಧ ಶತಕ ದಾಖಲಿಸದ ಹೊರತೂ ಆರ್‌ಸಿಬಿ ಇಷ್ಟೊಂದು ರನ್‌ ಗಳಿಸಿದ್ದೇ ಅಚ್ಚರಿಯಾಗಿ ಕಂಡಿತು. 41 ರನ್‌ ಮಾಡಿದ ಶಬಾಜ್‌ ಅಹ್ಮದ್‌ ಅವರದೇ ಗರಿಷ್ಠ ಗಳಿಕೆಯಾಗಿತ್ತು.ಈ ಸೋಲನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಸೇಡು ತೀರಿಸಿಕೊಂಡೀತೇ ರಾಯಲ್‌ ಚಾಲೆಂಜರ್?

ಟಾಪ್ ನ್ಯೂಸ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಪ್ರಜೆಗಳಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.