ಸುಳ್ಯ: ತೂಫಾನ್- ಸ್ಕೂಟಿ ಢಿಕ್ಕಿ; ಸ್ಕೂಟರ್ ಸವಾರರಿಗೆ ಗಂಭೀರ ಗಾಯ
Team Udayavani, May 4, 2022, 7:40 PM IST
ಸುಳ್ಯ: ತೂಫಾನ್ ಮತ್ತು ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಕಲ್ಲುಗುಂಡಿ ಸಮೀಪದ ಗೂನಡ್ಕ ಎಂಬಲ್ಲಿ ಬುಧವಾರ ಸಂಭವಿಸಿದೆ.
ದೊಡ್ಡಡ್ಕ ನಿವಾಸಿ ವಾರಿಸ್ ಹಾಗೂ ಅಶ್ವಿದ್ ಗಾಯಗೊಂಡ ಯುವಕರು. ಸ್ಕೂಟರ್ ಸವಾರರು ಸುಳ್ಯದತ್ತ ಬರುವ ವೇಳೆ ತೂಫಾನ್ ವಾಹನ ಢಿಕ್ಕಿಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಪತಿ, ಪತ್ನಿ ನಡುವೆ ಜಗಳ; ನೊಂದ ಪತ್ನಿ ನೇಣಿಗೆ ಶರಣು
ಸ್ಥಳೀಯರು ಗಾಯಾಳು ಯುವಕರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದು, ಅನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.