ದುಬಾೖಯಲ್ಲಿ ರಸ್ತೆ ಅಪಘಾತ: ನರ್ಸ್ ಸಾವು
Team Udayavani, May 9, 2022, 12:14 AM IST
ದುಬಾೖ: ಈದ್ ರಜೆಯ ಪ್ರವಾಸಕ್ಕೆಂದು ಅರಬ್ ಸಂಯುಕ್ತ ಸಂಸ್ಥಾನಕ್ಕೆ ತೆರಳಿದ್ದ ಕೇರಳದ ನರ್ಸ್ ಒಬ್ಬರು ರಸ್ತೆ ಅಪಘಾತದಿಂದಾಗಿ ಸಾವನ್ನಪ್ಪಿದ್ದಾರೆ.
ಟಿಂಟು ಪೌಲ್(36) ಹೆಸರಿನ ನರ್ಸ್, ಪತಿ ಕೃಪಾ ಶಂಕರ್, ಮಕ್ಕಳಾದ ಕೃತಿನ್(10), ಅದೀನ್ ಶಂಕರ್ ಹಾಗೂ ಇನ್ನಿತರರ ಜತೆ ಪ್ರವಾಸಕ್ಕೆ ತೆರಳಿದ್ದರು.
ಮೇ 3ರಂದು ಜಬೇಲ್ ಜೈಸ್ ಪರ್ವತಕ್ಕೆ ಕಾರಿನಲ್ಲಿ ತೆರಳುವ ವೇಳೆ, ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ.
ಗಂಭೀರ ಗಾಯಾಳುಗಳಾಗಿದ್ದ ಕುಟುಂಬಸ್ಥರನ್ನು ತತ್ಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಟಿಂಟು ಮೇ 4ಕ್ಕೆ ಸಾವನ್ನಪ್ಪಿದ್ದಾರೆ.
ಕೃಪಾ ಶಂಕರ್ ಮತ್ತು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.