ಕುಕ್ಕುಂದೂರು: ನಕ್ರೆ ನಡುವೆ ಅಸಮರ್ಪಕ ಚರಂಡಿ ವ್ಯವಸ್ಥೆ
Team Udayavani, May 9, 2022, 10:42 AM IST
ಕಾರ್ಕಳ: ಕುಕ್ಕುಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವಜ್ಞ ವೃತ್ತದಿಂದ ಕವಲೊಡೆದು ನಕ್ರೆ ಕಡೆ ತೆರಳುವ ದಾರಿ ಮಧ್ಯೆ ಅಸಮರ್ಪಕ ಚರಂಡಿ ವ್ಯವಸ್ಥೆ ಯಿಂದ ಮಳೆ ಬರುವ ವೇಳೆ ರಸ್ತೆಯೇ ಚರಂಡಿಯಾಗಿ ಪರಿವರ್ತನೆಯಾಗುತ್ತಿದೆ. ಸಂಚಾರದಲ್ಲೂ ಸಮಸ್ಯೆಗಳಾಗುತ್ತಿವೆ.
ಅಯ್ಯಪ್ಪ ನಗರದಿಂದ ನಕ್ರೆ ಭಾಗಕ್ಕೆ ತೆರಳುವ ರಸ್ತೆಯ ಮಧ್ಯೆ ಅನ್ನಪೂರ್ಣ ಜನರಲ್ ಸ್ಟೋರ್ನ ಎದುರುಗಡೆ ಈ ಸಮಸ್ಯೆಯಿದೆ. ಮೇ 6ರಂದು ಸಂಜೆ ಸುರಿದ ವ್ಯಾಪಕ ಮಳೆಗೆ ಈ ಜಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣಕ್ಕೆ ಎತ್ತರದ ಪ್ರದೇಶದದಿಂದ ತಗ್ಗು ಪ್ರದೇಶಕ್ಕೆ ಮಳೆ ನೀರು ಹರಿದು ಬಂದು ರಸ್ತೆಯೇ ಹೊಳೆಯಂತಾಗಿತ್ತು. ಮಳೆ ನೀರಿನ ಜತೆ ಕಲ್ಲು ಮಣ್ಣು ಮಿಶ್ರಿತ ಕೆಸರು ನೀರು ರಸ್ತೆಗೆ ಹರಿದು ಬಂದಿತ್ತು. ಕಸ, ಕಡ್ಡಿ, ಕಲ್ಲುಗಳು ರಸ್ತೆಯ ಮಧ್ಯೆ ಸಂಗ್ರಹಗೊಂಡ ಕಾರಣದಿಂದ ಸಂಚಾರ ವೇಳೆ ಇಲ್ಲಿ ತೊಂದರೆಗಳಾಗುತ್ತಿವೆ ಎಂದು ವಾಹನ ಸವಾರರು ದೂರಿದ್ದಾರೆ. ದ್ವಿಚಕ್ರ ವಾಹನ ಸವಾರರು ತೆರಳುವಾಗ ಇಲ್ಲಿ ಬಿದ್ದು ಗಾಯಗೊಳ್ಳುವ ಸ್ಥಿತಿ ಕೂಡ ಇದೆ.
ಪ್ರತಿ ಮಳೆಗಾಲ ಕೂಡ ಇಲ್ಲಿ ಸಮಸ್ಯೆ ಪುನಾರವರ್ತನೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಇಲ್ಲಿ ಈ ಪರಿಸ್ಥಿತಿ ಎದುರಾಗುತ್ತದೆ ಎಂದು ಈ ಭಾಗದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲಕ್ಕೂ ಮುಂಚಿತ ಸೂಕ್ತ ಚರಂಡಿ ನಿರ್ಮಿಸಿ ನೀರು ರಸ್ತೆಗೆ ಬರದಂತೆ ತಡೆದು ಚರಂಡಿ ಮೂಲಕವೇ ಹರಿದು ಹೋಗಲು ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. ಹೀಗೆ ಮಾಡಿದಾಗ ಡಾಮರು ರಸ್ತೆಯು ಉತ್ತಮವಾಗಿ ಬಹುಕಾಲ ಉಪಯೋಗಕ್ಕೆ ಬರಬಹುದು ಎನ್ನುವ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ