ಜಿಲ್ಲೆಯ 4 ಸರಕಾರಿ ಐಟಿಐಗಳಿಗೆ ಟಾಟಾ ಬಲ
ತಲಾ 30 ಕೋ.ರೂ. ವೆಚ್ಚದಲ್ಲಿ ಕಾರ್ಯಾಗಾರ
Team Udayavani, May 10, 2022, 10:52 AM IST
ಉಡುಪಿ: ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಕೌಶಲ, ಉದ್ಯೋಗಾಧಾರಿತ ತರಬೇತಿ ನೀಡುವ ಹೆಗ್ಗಳಿಕೆಗೆ ಪಾತ್ರವಾಗಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಉನ್ನತೀಕರಣಕ್ಕೆ ಟಾಟಾ ಟೆಕ್ನಾಲಜೀಸ್ ಮತ್ತಷ್ಟು ಬಲ ತುಂಬಲಿದೆ.
ಮೂಲಸೌಕರ್ಯ ಹಾಗೂ ಸಿಬಂದಿ ಕೊರತೆ ಸಹಿತವಾಗಿ ಹಲವು ಸಮಸ್ಯೆಗಳಿಂದ ನಲುಗಿ ಹೋಗಿದ್ದ ಐಟಿಐ ಕೇಂದ್ರಗಳಿಗೆ ನಿರ್ವಹಣೆ ಹಾಗೂ ಮುನ್ನಡೆಸಿಕೊಂಡು ಹೋಗುವ ಚಿಂತೆ ಬಹಳ ವರ್ಷಗಳಿಂದ ಕಾಡುತ್ತಿತ್ತು. ಈಗ ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ಹೊಸ ಉಪಕರಣಗಳು, ಆಧುನಿಕ ತಂತ್ರಜ್ಞಾನಗಳು ಐಟಿಐಗೆ ಹೊಸ ವಿನ್ಯಾಸ ನೀಡಲಿದೆ.
ಉಡುಪಿ ಮಣಿಪಾಲ ಪ್ರಗತಿ ನಗರ, ಬೈಂದೂರು, ಪೆರ್ಡೂರು, ಕಾರ್ಕಳದಲ್ಲಿ ಸರಕಾರಿ ಐಟಿಐ ತರಬೇತಿ ಸಂಸ್ಥೆಗಳಲ್ಲಿ ಟಾಟಾ ಟೆಕ್ನಾಲಜೀಸ್ ತಲಾ 30 ಕೋ. ರೂ. ವಿನಿಯೋಗಿಸಿ ಅತ್ಯಾಧುನಿಕ ತಂತ್ರಜ್ಞಾನ ಗಳನ್ನೊಳಗೊಂಡ ವರ್ಕ್ಶಾಪ್ ನಿರ್ಮಿಸಲಾಗಿದೆ.
ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸುವುದು ಮತ್ತು ಈ ಮೂಲಕ ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 2020ರ ನ. 6ರಂದು ಪುಣೆಯ ಟಾಟಾ ಟೆಕ್ನಾಲಜೀಸ್ ಲಿ. ಕಂಪೆನಿಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ರಾಜ್ಯದ 150 ಸರಕಾರಿ ಐಟಿಐ ಕಾಲೇಜುಗಳು ಮೇಲ್ದರ್ಜೆಗೇರಿದ್ದು, ಉಡುಪಿ ಸಹಿತ ಜಿಲ್ಲೆಯ 4 ಐಟಿಐ ಕಾಲೇಜುಗಳ ವರ್ಕ್ಶಾಪ್ ಕೆಲಸಗಳು ಪೂರ್ಣಗೊಂಡು ಮೊದಲ ಬ್ಯಾಚ್ ಆರಂಭಿಸಿದೆ.
ಕೋರ್ಸ್ ವಿವರ
34 ಅಲ್ಪಾವಧಿ ಕೋರ್ಸ್, 6 ದೀರ್ಘಾವಧಿ ಕೋರ್ಸ್ಗಳನ್ನು ಇಲ್ಲಿ ಕಲಿಸಲಾಗುತ್ತದೆ. ಈಗಾಗಲೇ 18 ವಿದ್ಯಾರ್ಥಿಗಳು ಉಡುಪಿ ಅಲೆವೂರಿನ ಪ್ರಗತಿ ನಗರದಲ್ಲಿ ತಾಂತ್ರಿಕ ಶಿಕ್ಷಣ ಪಡೆಯುತ್ತಿದ್ದಾರೆ. ಟಾಟಾ ಸಂಸ್ಥೆಯಿಂದ ಒಂದು ಕಾಲೇಜಿಗೆ ಇಬ್ಬರು ನುರಿತ ಶಿಕ್ಷಕರನ್ನು ನೇಮಿಸುತ್ತಾರೆ. ಎರಡು ವರ್ಷ ಕಾಲಾವಧಿಯಲ್ಲಿ ಅವರು ಶಿಕ್ಷಕರಿಗೆ ಪಾಠ, ಐಟಿಐ ಕಾಲೇಜು ಉಪನ್ಯಾಸಕರಿಗೂ ಮಾರ್ಗದರ್ಶನ ನೀಡಿ ತರಬೇತುಗೊಳಿಸುತ್ತಾರೆ.
ಸುಸಜ್ಜಿತ ವರ್ಕ್ಶಾಪ್
ಜಿಲ್ಲೆಯಲ್ಲಿ 4 ಐಟಿಐಗಳಲ್ಲಿ ಟಾಟಾ ಸಂಸ್ಥೆ ಅತ್ಯಾಧುನಿಕ ವರ್ಕ್ ಶಾಪ್ ನಿರ್ಮಿಸಿದೆ. ಮೊದಲ ಬ್ಯಾಚ್ ಆರಂಭಗೊಂಡು ತರಬೇತಿ ನಡೆಯುತ್ತಿದೆ. ಎಸೆಸೆಲ್ಸಿ ಫಲಿತಾಂಶ ಬರುತ್ತಿದ್ದಂತೆ ಆಸಕ್ತ ವಿದ್ಯಾರ್ಥಿಗಳು ಆಯಾ ಐಟಿಐಗಳನ್ನು ಸಂಪರ್ಕಿಸಬಹುದು. – ಜಗದೀಶ್, ಸಹಾಯಕ ನಿರ್ದೇಶಕ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಉಡುಪಿ
ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ