ಹುಣಸಗಿ ಠಾಣೆಯಲ್ಲಿ ಬೈಕ್ ಕಳ್ಳನ ಸೆರೆ-14 ಬೈಕ್ ಜಪ್ತಿ
Team Udayavani, May 10, 2022, 5:40 PM IST
ಹುಣಸಗಿ: ಶಹಾಪುರ, ಯಾದಗಿರಿ, ದೇವದುರ್ಗ, ಹುಣಸಗಿ, ಮಸ್ಕಿ, ಮುದಗಲ್, ಹಟ್ಟಿ ವ್ಯಾಪ್ತಿಗಳಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪಿಯನ್ನು ತಾಲೂಕಿನ ಗೆದ್ದಲಮರಿ ಕ್ರಾಸ್ನಲ್ಲಿ ಸೋಮವಾರ ಬೆಳಗ್ಗೆ 8:45ಕ್ಕೆ ಬಂಧಿಸುವಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ತಿರುಪತಿ ಅಂಬ್ರೇಶ ರಾಠೊಡ ಎಂಬ ಆರೋಪಿಯನ್ನು (ಲಿಂಗಸೂರು ತಾಲೂಕಿನ ಗೌಡೂರು ತಾಂಡಾದವನು) ಬಂಧಿಸಲಾಗಿದೆ.
ಬಂಧಿತನಿಂದ 6.35 ಲಕ್ಷ ಸಾವಿರ ಬೆಲೆ ಬಾಳುವ ಒಟ್ಟು 14 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.
ಡಿವೈಎಸ್ಪಿ ಡಾ| ದೇವರಾಜ ಮಾರ್ಗದರ್ಶನದಲ್ಲಿ ಹುಣಸಗಿ ಸಿಪಿಐ ದೌಲತ್ ಎನ್.ಕೆ. ನೇತೃತ್ವದಲ್ಲಿ ಹುಣಸಗಿ ಪಿಎಸ್ಐ ಚಿದಾನಂದ ಸೌದಿ, ಕೊಡೇಕಲ್ ಪಿಎಸ್ಐ ಶ್ರೀಶೈಲ್ ಅಂಬಾಟೆ, ಎಎಸ್ಐ ಮೌನೇಶ, ಎಚ್. ಸಿ. ಮಲ್ಲಪ್ಪ, ಸಿಪಿಸಿಗಳಾದ ವೀರೇಂದ್ರ, ಹನುಮಂತ್ರಾಯ, ಸುನೀಲ್, ಅಜ್ಮೀರಸಾಬ್, ರವಿಕುಮಾರ, ಪಿಸಿಗಳಾದ ಅಜರುದ್ದಿನ್, ಲಿಂಗಪ್ಪ, ಶಾಂತಪ್ಪ ಅವರನ್ನೊಳಗೊಂಡ ತಂಡವು ಪತ್ತೆ ಹಚ್ಚಿ ಆರೋಪಿ ಸಮೇತ ಬೈಕ್ ಗಳ ವಶಪಡಿಸಿಕೊಂಡಿದ್ದನ್ನು ಶ್ಲಾಘಿಸಿ ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ