ನಂದವಾಡಗಿ ಏತ ನೀರಾವರಿ: 30 ಹಳ್ಳಿಗಳ ಮರು ಸೇರ್ಪಡೆಗೆ ಆಗ್ರಹ
Team Udayavani, May 13, 2022, 5:32 PM IST
ಮುದಗಲ್ಲ: ಈ ಭಾಗದ ರೈತರ ಜೀವನಾಡಿಯಾದ ನಂದವಾಡಗಿ ಏತ ನೀರಾವರಿ ಯೋಜನೆಯಿಂದ ಕೈ ತಪ್ಪಿರುವ 33 ಹಳ್ಳಿಗಳನ್ನು ಪುನರ್ ಸೇರ್ಪಡೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ನಂದವಾಡಿ ಏತ ನೀರಾವರಿ (ಆರ್.ಎಲ್.590) ಹೋರಾಟ ಸಮಿತಿ ಅಧ್ಯಕ್ಷ ನಾಗನಗೌಡ ಪಾಟೀಲ್ ತುರಡಗಿ ಸಿಎಂ ಆಪ್ತಕಾರ್ಯದರ್ಶಿ ಅನಿಲ್ ಕುಮಾರ ಅವರಿಗೆ ಸಲ್ಲಿಸಿದರು.
ಹೂನೂರು, ತುರಡಗಿ, ಮಾಕಾಪೂರ, ತಲೆಕಟ್ಟು, ಮರಳಿ, ಅಂಕಲಿಮಠ, ವಂದಾಲಿ, ಆರ್ಯಭೋಗಾಪುರ, ಬ್ಯಾಲಿಹಾಳ, ರಾಮತ್ನಾಳ, ವ್ಯಾಕರನಾಳ, ನಾಗಲಾಪುರ, ಉಳಿಮೇಶ್ವರ, ಪಿಕಳಿಹಾಳ, ಹೆಗ್ಗಾಪೂರ ತಾಂಡಾ, ಹೆಗ್ಗಾಪುರ, ಕೋಮಲಾಪುರ, ಕನಸಾವಿ, ಆದಾಪೂರ, ಬನ್ನಿಗೋಳ, ಚಿಕ್ಕಯರದಿಹಾಳ, ಹಿರೇಯರದಿಹಾಳ, ಜನತಾಪುರ, ಕೆ.ಮರಿಯಮ್ಮನಹಳ್ಳಿ, ಮುದಗಲ್ಲ, ಕನ್ನಾಪೂರಹಟ್ಟಿ, ಬೆಳ್ಳಿಹಾಳ, ಕಾಚಾಪುರ, ಆಶಿಹಾಳ, ಆಶಿಹಾಳ ತಾಂಡಾ, ಮೆಗಳಪೇಟೆ ಸೇರಿದಂತೆ ಹಲವು ಗ್ರಾಮಗಳು ಬಸವಸಾಗರ ಜಲಾಶಯ ಸಮೀಪದಲ್ಲಿಯೇ ಇದ್ದರೂ ಸಹ ನೀರಾವರಿಯಿಂದ ವಂಚಿತವಾಗಿವೆ.
ಸತತ ಬರ ಪರಸ್ಥಿತಿಯಿಂದ ಇಲ್ಲಿನ ಜನರು ದನಕರುಗಳನ್ನು ಸಾಗಿಸಿಕೊಂಡು ದೂರದ ಪ್ರದೇಶಗಳಿಗೆ ಗುಳೆ ಹೋಗುತ್ತಾರೆ. ಇದರಿಂದ ಇಲ್ಲಿನ ಜನರ ಆರ್ಥಿಕ ಪರಸ್ಥಿತಿ ಹದೇಗೆಟ್ಟಿದೆ. ಕಾರಣ ನೀರಾವರಿ ಯೋಜನೆಯಿಂದ ಕೈ ಬಿಟ್ಟಿರುವ ಗ್ರಾಮಗಳನ್ನು ನಂದವಾಡಿ ಏತ ನೀರಾವರಿ ವ್ಯಾಪ್ತಿಗೆ ಸೇರಿಸಬೇಕೆಂಬುವುದು ಇಲ್ಲಿನ ಜನರ ಮತ್ತು ಸಮಿತಿಯ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ