ಬೇಡರಶಿವನಕೆರೆ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ : ಅರಣ್ಯ ಸಿಬಂದಿಗಳಿಂದ ಕಾರ್ಯಾಚರಣೆ
Team Udayavani, May 16, 2022, 9:52 PM IST
ಭರಮಸಾಗರ: ಸಮೀಪದ ಬೇಡರಶಿವನಕೆರೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡ ಕರಡಿಯನ್ನು ಸೆರೆ ಹಿಡಿಯಲು ಕಾರ್ಯಾಚಾರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಕರಡಿ ಕಣ್ತಪ್ಪಿಸಿ ಗವೀಶ್ವರ ಗುಡ್ಡದ ಕಡೆಗೆ ಪಲಾಯನ ಮಾಡಿರುವ ಘಟನೆ ನಡೆದಿದೆ.
ಭಾನುವಾರ ಬೇಡರಶಿವನಕೆರೆ ಗ್ರಾಮದ ಸುತ್ತ ಕರಡಿಯೊಂದು ಕಾಣಿಸಿಕೊಂಡ ಸುದ್ದಿ ಕೇಳಿ ಜನ ಭಯಭೀತರಾಗಿದ್ದರು. ಬಳಿಕ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ ಬಳಿಕ ಸಿಬ್ಬಂದಿ ಬೋನು ಮತ್ತು ಬಲೆಯೊಂದಿಗೆ ಕರಡಿ ಸೆರೆ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗಿನಿಂದ ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರನ್ನು ಅಲೆದಾಡಿಸಿದ ಕರಡಿ ಬಳಿಕ ತೋಟ ಒಂದರ ಬಳಿ ಅವಿತು ಕೆಲ ಕಾಲ ಉಳಿದಿದೆ. ಇನ್ನೇನು ಕರಡಿ ಬಲೆಗೆ ಬೀಳಿಸಲು ಕಸರತ್ತು ನಡೆಸಿದ ಸಿಬ್ಬಂದಿ ಗೆ ಕೈ ಕೊಟ್ಟ ಕರಡಿ ಹಿರೇಕಬ್ಬಿಗೆರೆ , ಮುದ್ದಾಪುರ ಮೂಲಕ ಗವೀಶ್ವರ ಬೆಟ್ಟದ ಕಡೆ ಪಲಾಯನ ಮಾಡಿದೆ.
ಕರಡಿ ಬೆಟ್ಟದ ಕಡೆ ಹೋದ ಸುದ್ದಿ ತಿಳಿದು ಬೇಡರಶಿವನಕೆರೆ ಸುತ್ತಮುತ್ತಲಿನ ಹಳ್ಳಿ ಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಕರಡಿ ಬೇಡರಶಿವನಕೆರೆ ಗ್ರಾಮದಲ್ಲಿ ಭಾನುವಾರ ಕಾಣಿಸಿಕೊಂಡಿತ್ತು. ಕರಡಿ ಸೆರೆ ಹಿಡಿಯಲು ಪೋಲಿಸ್ ಮತ್ತು ಅರಣ್ಯ ಸಿಬ್ಬಂದಿ, ಗ್ರಾಮಸ್ಥರು ಸಹಕಾರ ಸಿಕ್ಕಿತ್ತು. ಆದರೆ ಅಂತಿಮವಾಗಿ ಕರಡಿ ಸೆರೆ ಹಿಡಿಯುವಲ್ಲಿ ಅದು ತಪ್ಪಿಸಿ ಕೊಂಡು ಗುಡ್ಡದ ಕಡೆ ಓಡಿದೆ. ಜನರಿಗೆ ಕರಡಿಯಿಂದ ಯಾವುದೇ ತೊಂದರೆ ಆಗಿಲ್ಲ. ಕರಡಿ ಮತ್ತೆ ಜನವಸತಿ ಪ್ರದೇಶ ದ ಕಡೆ ಬರಲು ಸಾಧ್ಯವಿಲ್ಲ.
– ರುದ್ರಮುನಿ, ಡಿಆರ್ ಎಪ್, ಅರಣ್ಯ ಇಲಾಖೆ ಚಿತ್ರದುರ್ಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ