ಭಟ್ಕಳ: ಲಂಗರು ಹಾಕಿದ ಬೋಟ್ ಪಲ್ಟಿಯಾಗಿ ಲಕ್ಷಾಂತರ ರೂ. ನಷ್ಟ
Team Udayavani, May 17, 2022, 7:13 PM IST
ಭಟ್ಕಳ: ಭಟ್ಕಳದ ಮಾವಿನಕುರ್ವೆ ಬಂದರಿನಲ್ಲಿ ಹೂಳು ತುಂಬಿದ ಪರಿಣಾಮವಾಗಿ ಲಂಗರು ಹಾಕಿದ್ದ ನಾಲ್ಕು ಬೋಟುಗಳು ಮಗುಚಿ ಪರಸ್ಪರ ಢಿಕ್ಕಿಯಾದ ಪರಿಣಾಮ ಅಪಾರ ಹಾನಿ ಸಂಭವಿಸಿದೆ.
ಹಾನಿಗೊಳಗಾದ ಬೋಟುಗಳನ್ನು ದುರ್ಗಾಂಬಿಕಾ ದೇವಿ, ಶ್ರೀ ನಿತ್ಯಾನಂತ, ಜೈನ ಜಟಕಾ ಮತ್ತು ಗಗನ ಎಂದು ಗುರುತಿಸಲಾಗಿದ್ದು ಸದ್ರಿ ಬೋಟುಗಳನ್ನು ಮಾವಿನಕುರ್ವೆ ಬಂದರಿನಲ್ಲಿ ಲಂಗರು ಹಾಕಿಟ್ಟ ಸಂದರ್ಭದಲ್ಲಿ ಇಳಿತ ಉಂಟಾಗಿ ನೀರಿನ ಕೊರತೆಯಿಂದಾಗಿ ಒಂದಕ್ಕೊಂದು ಢಿಕ್ಕಿಯಾಗಿ ಮಗುಚಿಕೊಂಡಿವೆ ಎನ್ನಲಾಗಿದೆ.
ಬಂದರಲ್ಲಿ ಹೂಳು ತುಂಬಿದ್ದರಿಂದ ಸರ್ವ ಋತು ಬಂದರಾಗಿದ್ದ ಮಾವಿನಕುರ್ವೆ ಬಂದರು ಈಗ ಬೋಟುಗಳಿಗೆ ಸುರಕ್ಷತೆಯ ತಾಣವಲ್ಲ ಎನ್ನುವಂತಾಗಿದೆ. ಈ ಹಿಂದೆ ಕೂಡಾ ಹೂಳು ತುಂಬಿದ್ದರಿಂದ ಅನೇಕ ಬೋಟುಗಳಿಗೆ ಹಾನಿಯಾಗಿದ್ದನ್ನು ಸ್ಮರಿಸಬಹುದು.
ಹೂಳಿನಿಂದಾಗಿ ಮಗುಚಿ ಹಾನಿಯಾಗಿದ್ದ ಬೋಟುಗಳನ್ನು ಸ್ಥಳೀಯ ಮೀನುಗಾರರು, ಮುಳುಗು ತಜ್ಞರು ಸರಿಪಡಿಸಿ ನೀರು ತುಂಬಿದ ನಂತರದಲ್ಲಿ ಮತ್ತೆ ಲಂಗರು ಹಾಕಿಟ್ಟರೂ ಸಹ ಮುಳುಗುವ ಸಮಯದಲ್ಲಿ ಆದ ಹಾನಿಯೇ ಲಕ್ಷಾಂತರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇನ್ನೇನು ಕೆಲವು ಕೆಲವೇ ದಿನಗಳಲ್ಲಿ ಬೋಟುಗಳನ್ನು ಮೇಲಕ್ಕೆತ್ತಬೇಕಾಗಿದ್ದು ಮೀನುಗಾರಿಕೆಯೇ ಬಂದ್ ಆಗಲಿದೆ. ಆದರೆ ಇವರ ಪಾಲಿಗೆ ಕೊನೆ ಕ್ಷಣದಲ್ಲಿ ಮೀನುಗಾರಿಕಗೆ ಹೋಗಲಾದೇ ತುಂಬಲಾರದ ನಷ್ಟವುಂಟಾಗಿದೆ. ಅತ್ತ ರಿಪೇರಿಗೂ ಕೂಡಾ ಲಕ್ಷಾಂತರ ರೂಪಾಯಿ ಖರ್ಚಾಗಲಿದ್ದು ಎರಡೂ ಕಡೆಯಿಂದ ಇವರು ನಷ್ಟ ಅನುಭವಿಸುಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಯಾರನ್ನೂ ಯಾವತ್ತೂ ಪ್ಲೀಸ್ ಮಾಡಬೇಡಿ, ಪ್ರೀತಿ ಮಾಡಿ ಸಾಕು: ಹುಕ್ಕೇರಿ ಶ್ರೀ
Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ
Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ
ಭಾರತ್ ಜೋಡೋದಿಂದ ದೇಶದ ಜನರ ಮನಸ್ಸು ಬೆಸೆದ ರಾಗಾ: ಡಿಕೆಶಿ
Honnavar; ಖಾಸಗಿ ಬಸ್ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Holenarasipur: ಶಾಸಕ ಹೆಚ್.ಡಿ. ರೇವಣ್ಣ ಬಂಧನ ಹಿನ್ನೆಲೆ ಬಂದ್ ಗೆ ಕರೆ
Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್
ʼಟಾಕ್ಸಿಕ್ʼ ಅಪ್ಡೇಟ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?
Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ
Gayatri Siddeshwar: “ರಾಹುಲ್ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’