ನಾಡಕಚೇರಿಯಲ್ಲೇ ತಹಶೀಲ್ದಾರ್‌ ಕಚೇರಿ

ದಾಂಡೇಲಿ ತಾಲೂಕಿಗೆ 10 ಕೋಟಿ ಆಡಳಿತ ಭವನ

Team Udayavani, May 19, 2022, 12:31 PM IST

5

ಕಾರವಾರ: ರಾಜ್ಯದಲ್ಲಿ 58 ಹೊಸ ತಾಲೂಕುಗಳ ರಚನೆಯ ಜತೆಗೆ ಉತ್ತರ ಕನ್ನಡದ 12ನೇ ತಾಲೂಕಾಗಿ ಸೇರ್ಪಡೆಯಾದದ್ದು ದಾಂಡೇಲಿ. 2017ರಲ್ಲಿ ದಾಂಡೇಲಿ ತಾಲೂಕಾಗಿ ಘೊಷಣೆಯಾದ ನಂತರ ದಾಂಡೇಲಿ ನಗರದ ನಾಡಕಚೇರಿಯಲ್ಲಿಯೇ ತಹಶೀಲ್ದಾರ್‌ ಕಚೇರಿ ಆರಂಭವಾಗಿದೆ.

ತಹಶೀಲ್ದಾರರ ಕಚೇರಿ ಕರ್ತವ್ಯಕ್ಕೆ ಪೀಠೊಪಕರಣ ಹಾಗೂ ಕಚೇರಿಯ ಇತರೆ ಸೌಲಭ್ಯ ಹಾಗೂ ಕಾಗದ ಪತ್ರ, ಲೇಖನ ಸಾಮಾಗ್ರಿ ಖರೀದಿಗೆ ಒಟ್ಟು 25 ಲಕ್ಷವನ್ನು ಸರ್ಕಾರ ನೀಡಿದೆ. ಇದನ್ನು ಹೊರತುಪಡಿಸಿ 10 ಕೋಟಿಯ ಆಡಳಿತ ಭವನ ನಿರ್ಮಾಣ ಹಂತದಲ್ಲಿದೆ. 5 ಎಕರೆ ಪ್ರದೇಶವನ್ನು ಜಿಲ್ಲಾಡಳಿತ ನೀಡಿದ್ದು, ಭವ್ಯ ಆಡಳಿತ ಭವನ ನಿರ್ಮಾಣ ಮುಕ್ತಾಯ ಹಂತದಲ್ಲಿದೆ.

ಬರುವ ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಆಡಳಿತ ಭವನ ಉದ್ಘಾಟನೆ ಸಹ ಆಗಲಿದೆ. ದಾಂಡೇಲಿ ನಗರದ ಜೊತೆಗೆ ಅಂಬಿಕಾನಗರ, ಅಂಬೇವಾಡಿ, ಆಲೂರು, ಕೊಗಿಲಬನ ಗ್ರಾಮ ಪಂಚಾಯತ್‌ಗಳು ದಾಂಡೇಲಿ ತಾಲೂಕು ವ್ಯಾಪ್ತಿಯಲ್ಲಿವೆ. ಅಲ್ಲದೇ ಜೊಯಿಡಾದ ಬೈಲಪಾರು ಮಜಿರೆ ಸಹ ದಾಂಡೇಲಿ ತಾಲೂಕಿನ ವ್ಯಾಪ್ತಿಗೆ ಬರಲಿದೆ. ಈ ಪದೇಶದ ಜನರು ಈಗ ಹಳಿಯಾಳ ತಾಲೂಕಿಗೆ ಅಲೆದಾಡುವುದು ನಿಂತಿದೆ. ರೆಕಾರ್ಡ್‌ ರೂಂ ಸಿದ್ಧವಾದ ನಂತರ ದಾಂಡೇಲಿಗೆ ಬರಬೇಕಾದ ದಸ್ತಾವೇಜು, ಭೂ ದಾಖಲೆಗಳು ಸಹ ಬರುವ ಸೆಪ್ಟಂಬರ್‌ಗೆ ಹಳಿಯಾಳದಿಂದ ದಾಂಡೇಲಿಗೆ ಬರಲಿವೆ. ಹಳಿಯಾಳ ತಾಲೂಕಿನಿಂದ ಪ್ರತ್ಯೇಕವಾದ ದಾಂಡೇಲಿ ತಾಲೂಕು ತನ್ನ ಅಸ್ತಿತ್ವವನ್ನು ಪ್ರತ್ಯೇಕಿಸಿಕೊಂಡಿದೆ.

ದಾಂಡೇಲಿ ನಗರಸಭೆ ಸಹ ಶ್ರೀಮಂತ ನಗರಸಭೆಗಳಲ್ಲಿ ಒಂದಾಗಿದೆ. ಇಲ್ಲಿನ ಮೊಸಳೆ ಪಾರ್ಕ್‌ ಹಾಗೂ ಅರಣ್ಯ ಇಲಾಖೆ, ರೆಸಾರ್ಟ್‌ ಉದ್ಯಮಗಳು ದಾಂಡೇಲಿಗೆ ರಾಜ್ಯಮಟ್ಟದಲ್ಲಿ ಹೆಸರು ತಂದು ಕೊಟ್ಟಿದೆ. ಪ್ರವಾಸೋದ್ಯಮಕ್ಕೆ ದಾಂಡೇಲಿ ಹೆಸರುವಾಸಿ. ಅರಣ್ಯ ಇಲಾಖೆಯ ಜಂಗಲ್‌ ಸಫಾರಿ, ಕುಳಗಿ ಪಕ್ಷಿ ಧಾಮ ಹಾಗೂ ಅಂಬಿಕಾನಗರ ಸೆಕ್ಸ್‌ ಪಾಯಿಂಟ್‌, ಸಿಂಥೇರಿ ರಾಕ್ಸ್‌ ಹೆಸರುವಾಸಿ. ಜಂಗಲ್‌ ಲಾಡ್ಜಸ್‌ನ ರಾಫ್ಟ್‌ ಹಾಗೂ ಖಾಸಗಿಯವರು ನಡೆಸುವ ರಾಫ್ಟಿಂಗ್ ಚಟುವಟಿಕೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದು ವಾಡಿಕೆ. ವಿದ್ಯುತ್‌ ಉತ್ಪಾದನೆ ಹಾಗೂ ಕುಡಿವ ನೀರು ಪೂರೈಕೆಯಿಂದ ದಾಂಡೇಲಿ ಸದಾ ಸುದ್ದಿಯಲ್ಲಿದೆ. ಕಾಳಿ ನದಿ ನೀರನ್ನು ಹೊರ ಜಿಲ್ಲೆಗೆ ಹಂಚುವ ವಿಚಾರವಂತೂ ವಿವಾದದ ಬೆಂಕಿಯನ್ನು ಜನರ ಮಡಿಲಲ್ಲಿ ಅಡಗಿಸಿಟ್ಟಿದೆ.

ದಾಂಡೇಲಿ ಪೇಪರ್‌ ಮಿಲ್‌ ಸಹ ಅನೇಕ ಕೈಗಳಿಗೆ ಉದ್ಯೋಗ ನೀಡಿದೆ. ಅನೇಕ ಹೊಸ ಹೊಸ ಸಮಸ್ಯೆ ಹಾಗೂ ಸವಾಲುಗಳ ದಾಂಡೇಲಿ ತಾಲೂಕಿನ ಮುಂದೆ ಈಗಲೂ ಇವೆ. ಕಾಳಿ ನದಿ ನೀರಿನ ಹಂಚಿಕೆ ಹೊಸ ವಿವಾದವನ್ನೇ ಸೃಷ್ಟಿಸಿದೆ. ಹೊಸ ತಾಲೂಕಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕಿದ್ದು, ಪ್ರವಾಸೋದ್ಯಮದ ಮೇಲೆ ಪ್ರಸ್ತುತ ಎದ್ದಿರುವ ವಿವಾದವನ್ನು, ನೀರು ಹಂಚಿಕೆ ವಿವಾದವನ್ನು ಸಹ ಬಗೆ ಹರಿಸಬೇಕಿದೆ.

ಇಲ್ಲಿನ ಜಲ ಸಾಹಸ ಕ್ರೀಡೆಗಳು ಜೊಯಿಡಾದಿಂದ ಆರಂಭವಾಗಿ ದಾಂಡೇಲಿಯ ಮಾವಳಂಗಿಯಲ್ಲಿ ಬಂದು ನಿಲ್ಲುತ್ತವೆ. ಜೊಯಿಡಾ -ದಾಂಡೇಲಿ ಅವಳಿ ತಾಲೂಕುಗಳು ಪ್ರವಾಸೋದ್ಯಮವನ್ನು ಬೆಸೆದುಕೊಂಡಿವೆ. ಈಗ ಇಲ್ಲಿನ ಸ್ಥಳೀಯರ ಕೈಯಲ್ಲಿನ ಪ್ರವಾಸೋದ್ಯಮದ ಹೃದಯವೇ ಆಗಿರುವ ಜಲ ಸಾಹಸ ಕ್ರೀಡೆ ಹಾಗೂ ರಾಫ್ಟಿಂಗ್ ನ್ನು ಹೊರ ರಾಜ್ಯದ ಶ್ರೀಮಂತ ಸಂಸ್ಥೆಗೆ ಧಾರೆ ಎರೆಯುವ ಲಕ್ಷಣಗಳಿದ್ದು, ಅದು ಸ್ಥಳೀಯ ಪ್ರವಾಸೋದ್ಯಮಿಗಳನ್ನು ರೊಚ್ಚಿಗೆ ಏಳಿಸುವ ಎಲ್ಲಾ ಲಕ್ಷಣಗಳು ಇವೆ. ಹೊಸ ತಾಲೂಕಿನ ಉಗಮದ 5 ವರ್ಷದ ಹಾದಿ ಇನ್ನೂ ಕಠಿಣ ಸವಾಲುಗಳನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಮುಂದೆ ತಂದಿಡುವ ಘಟನೆಗಳು ಸಾಲು ಸಾಲಾಗಿ ನಡೆಯುತ್ತಿವೆ.

-ನಾಗರಾಜ್‌ ಹರಪನಹಳ್ಳಿ

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.