ಕೋಡಿ ಬಿದ್ದ ಕೆರೆಗೆ ಶಾಸಕ ಗೌರಿಶಂಕರ್ ಬಾಗಿನ
Team Udayavani, May 21, 2022, 4:16 PM IST
ತುಮಕೂರು: ಗ್ರಾಮಾಂತರ ಕ್ಷೇತ್ರದ ಮಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರ ಅಮಾನಿಕೆರೆಯು ವರುಣನ ಕೃಪೆಯಿಂದ ಒಂದು ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದಿದ್ದು, ಕೆರೆಗೆ ಗ್ರಾಮಾಂತರಶಾಸಕ ಡಿ.ಸಿ.ಗೌರಿಶಂಕರ್ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಸಾಸಲು ಕೆರೆಯು 22 ವರ್ಷಗಳ ನಂತರ ತುಂಬಿ ಕೋಡಿ ಹರಿದಿದ್ದು,ಗ್ರಾಮಾಂತರ ಶಾಸಕ ಗೌರಿ ಶಂಕರ್ ಮತ್ತು ಪಾಲ ನೇತ್ರಯ, ಇವರಿಬ್ಬರ ಅಧ್ಯಕ್ಷತೆ ಯಲ್ಲಿ, ಸಾವಿರಾರು ಗ್ರಾಮಸ್ಥರು ಹಾಗೂ ಮಹಿಳೆಯರ ಜೊತೆಯಲ್ಲಿ ಶುಕ್ರವಾರ ಗಂಗಾಪೂಜೆ ನೆರವೇರಿಸಿದರು.
ಗಂಗಾ ಪೂಜೆಯಲ್ಲಿ ನೆರೆದಿದ್ದ 1500ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಹಿಂದೂ ಸಂಪ್ರದಾಯ ದಂತೆ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಪಾಲನೇತ್ರಯ ಅವರು ಇಬ್ಬರು ಕೂಡಿ ಅರಿಶಿಣ ಕುಂಕುಮ ಸೀರೆ ಕೊಡುವ ಮುಖಾಂತರ ಹೆಣ್ಣು ಮಕ್ಕಳಿಗೂ ಕೂಡ ಭಕ್ತಿ ಸಮರ್ಪಿಸಿದರು. ಗಂಗಾಪೂಜೆ, ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಮುಖಂಡರಾದ ರಾಮಚಂದ್ರಯ್ಯ, ತಾ. ಅಧ್ಯಕ್ಷರು, ಗೋವಿಂದರಾಜು, ಹಾಲನೂರು ಅನಂತ ಕುಮಾರ್, ಮಸ್ಕಲ್ ಕುಮಾರ್, ಮಸ್ಕಲ್ ಮೋಹನ್, ಸಿದ್ದಪ್ಪ, ಅಶ್ವತ್ಥ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ