ಕಲಬೆರಕೆ ಸೇಂದಿ ಸಾಗಾಟ: ಇಬ್ಬರ ಬಂಧನ
Team Udayavani, May 27, 2022, 1:27 PM IST
ಚಿಂಚೋಳಿ: ತಾಲೂಕಿನ ಛತ್ರಸಾಲ ಗ್ರಾಮದ ಕ್ರಾಸ್ ಹತ್ತಿರ ತೆಲಂಗಾಣ ರಾಜ್ಯದ ಕರ್ನಕೋಟ ಗ್ರಾಮದಿಂದ ಸೇಡಂ ತಾಲೂಕಿಗೆ ದ್ವಿಚಕ್ರ ವಾಹನದ ಮೇಲೆ 62ಸಾವಿರ ರೂ. ಮೌಲ್ಯದ 40ಲೀಟರ್ ಕಲಬೆರೆಕೆ ಸೇಂದಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಾಲೂಕು ಅಬಕಾರಿ ನಿರೀಕ್ಷಕ ಜಟ್ಟೆಪ್ಪ ಬೇಲೂರು ತಿಳಿಸಿದ್ದಾರೆ.
ಸೇಡಂ ಪಟ್ಟಣದ ಶೇಖರ ಖತಲಪ್ಪ ಕೊಡದೂರ, ನಾಗೇಶ ಮರೆಪ್ಪ ಸೇಡಂ ಬಂಧಿತ ಆರೋಪಿಗಳಾಗಿದ್ದಾರೆ.
ತೆಲಂಗಾಣ ರಾಜ್ಯದ ಕರ್ನಕೋಟ ಗ್ರಾಮದಿಂದ ಅಕ್ರಮವಾಗಿ ಕಲಬೆರೆಕೆ ಸೇಂದಿಯನ್ನು ದ್ವಿಚಕ್ರ ವಾಹನದ ಮೇಲೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಅರಿತು ದಾಳಿ ನಡೆಸಿ, ಸೇಂದಿ ಹಾಗೂ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಜಟ್ಟೆಪ್ಪ ಬೇಲೂರ, ಅಬಕಾರಿ ಪೇದೆಗಳಾದ ಗೌತಮ ಬುದ್ಧ, ಶಿವಶರಣಪ್ಪ, ಸಿದ್ಧಾರೂಢ, ವಾಹನ ಚಾಲಕ ಗುರುನಾಥ ಇದ್ದರು. ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್