ಪಠ್ಯಪುಸ್ತಕ ಪರಿಷ್ಕರಣೆ ಅವೈಜ್ಞಾನಿಕ: ನಾಗತೀಹಳ್ಳಿ
Team Udayavani, May 29, 2022, 1:37 PM IST
ಮಂಡ್ಯ: ಪಠ್ಯಪುಸ್ತಕ ಪರಿಷ್ಕರಣೆ ಕಾಲ ಕಾಲಕ್ಕೆ ಬದಲಾವಣೆ ಅಗತ್ಯ. ಇಲ್ಲದಿದ್ದರೆ ಅದು ಅವೈಜ್ಞಾನಿಕ ವಾಗುತ್ತದೆ. ಆದರೆ, ಈಗ ನಡೆಸಿರುವ ಪಠ್ಯಪುಸ್ತಕ ಪರಿಷ್ಕರಣೆ ಕ್ರಮ ಸರಿಯಾಗಿಲ್ಲ. ಸಂಪೂರ್ಣ ಅವೈಜ್ಞಾನಿಕ ಹಾಗೂ ಅಕಾಲಿಕವಾಗಿದೆ ಎಂದು ಸಾಹಿತಿ ನಾಗತೀಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
“ಉದಯವಾಣಿ’ಯೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಮ್ಮ ಪಕ್ಷದ ತತ್ವ-ಸಿದ್ಧಾಂತ ಏನೇ ಇರಲಿ. ಅವುಗಳನ್ನು ನಿಮ್ಮ ಕಚೇರಿಯೊಳಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳ ಮೇಲೆಹೇರುವ ಪ್ರಯತ್ನ ಮಾಡಬಾರದು. ಸರ್ವ ಜನಗಳಿಗೆಬೇಕಾಗುವ , ಎಲ್ಲರ ಹಿತ ಕಾಪಾಡುವ ತತ್ವಗಳನ್ನು ಪಠ್ಯದಲ್ಲಿ ಅಳವಡಿಸುವ ವಿಶಾಲ ಮನೋಭಾವ ಇದ್ದಾಗ ಇಂತಹ ತಪ್ಪುಗಳಾಗುವುದಿಲ್ಲ ಎಂದರು.
ನಾನು ಯಾವ ಪಕ್ಷದ ಪರ ಮಾತನಾಡುತ್ತಿಲ್ಲ. ಮಕ್ಕಳ ಪರ ಇದ್ದೇನೆ. ಎಲ್ಲ ಪಕ್ಷಗಳಸರ್ಕಾರ ಇದ್ದಾಗಲೂ ಅವರ ವಿರುದ್ಧವೂ ಮಾತನಾಡಿದ್ದೇನೆ.ನಾನೊಬ್ಬ ಶಿಕ್ಷಕನಾಗಿ ಮಾತನಾಡುತ್ತಿದ್ದೇನೆ. ಯಾರನ್ನೋ ಮೆಚ್ಚಿಸುವ ಕೆಲಸ ಮಾಡುವವರನ್ನು ಸಮಿತಿಗೆ ನೇಮಿಸಬಾರದು ಎಂದು ಹೇಳಿದರು.
ಈಗಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚಿಸಿರುವ ಕ್ರಮ ಸರಿಯಲ್ಲ. ಪಠ್ಯಪುಸ್ತಕಪರಿಷ್ಕರಣೆ ವಿಧಾನವೂ ಸರಿಯಾಗಿಲ್ಲ. ಸರಿಯಾದಕಾಲದಲ್ಲೂ ಪರಿಷ್ಕರಣೆ ನಡೆಯುತ್ತಿಲ್ಲ. ಇದು ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಬಹಳ ಅಪಾಯಕಾರಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ