ಶುಂಠಿ ಬೆಳೆಗೆ ಡ್ರೋಣ್‌ ಬಳಸಿ ಔಷಧ ಸಿಂಪಡಣೆ

ವಿನೂತನ ಪ್ರಯೋಗದಲ್ಲಿ ಯಶಸ್ವಿಯಾದ ಶಿಡೇನೂರ ಗ್ರಾಮದ ರೈತ ರಾಜು ಹೊಸಕೇರಿ

Team Udayavani, May 30, 2022, 11:32 AM IST

8

ಬ್ಯಾಡಗಿ: ತಾಲೂಕಿನ ಶಿಡೇನೂರ ಗ್ರಾಮದ ರೈತರೊಬ್ಬರು ಡ್ರೋಣ್‌ ಮೂಲಕ ಶುಂಠಿ ಬೆಳೆಗೆ ಔಷಧ ಸಿಂಪಡಿಸುವ ಮೂಲಕ ವಿನೂತನ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾನೆ.

ಮದುವೆ ಇನ್ನಿತರ ಸಭೆ, ಸಮಾರಂಭಗಳಲ್ಲಿ ಫೋಟೋ, ವಿಡಿಯೋ ಹಾಗೂ ಕೃಷಿ ಭೂಮಿಗಳ ಭೂ ಮಾಪನಕ್ಕೆ ಡ್ರೋಣ್‌ ಕ್ಯಾಮರಾ ಬಳಸಿಕೊಳ್ಳುತ್ತಿರುವ ಕುರಿತು ವರದಿಯಾಗಿತ್ತು. ಆದರೆ, ತಾಲೂಕಿನ ರೈತ ರಾಜು ಹೊಸಕೇರಿ ಡ್ರೋಣ್‌ ಮೂಲಕ ಶುಂಠಿ ಬೆಳೆಗೆ ಔಷಧ ಸಿಂಪಡಿಸುವ ಮೂಲಕ ವಿನೂತನ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯಲ್ಲೇ ಮೊದಲ ಪ್ರಯೋಗ: ಹಾವೇರಿ ತಾಲೂಕು ತಿಮ್ಮಾಪುರ ಗ್ರಾಮದ ರೈತ ರಾಜು ಹೊಸಕೇರಿ, ಶಿಡೇನೂರ ಗ್ರಾಮದಲ್ಲಿ 7 ಎಕರೆ ಕೃಷಿ ಭೂಮಿಯನ್ನು ಗೇಣಿ(ಲಾವಣಿ) ಪಡೆದುಕೊಂಡಿದ್ದು, ಆ ಹೊಲದಲ್ಲಿ ಶುಂಠಿ ಮತ್ತು ಅಡಕೆ ಬೆಳೆದಿದ್ದಾರೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಕೃಷಿಕನೊಬ್ಬ ಡ್ರೋಣ್‌ ಪ್ರಯೋಗ ಮಾಡಿದ್ದು, ಇದರಿಂದ ಕೃಷಿ ವೆಚ್ಚದಲ್ಲಿ ಕಡಿತ ಹಾಗೂ ಸಮಯ ಉಳಿಸಬಹುದಾಗಿದೆ ಎನ್ನಲಾಗುತ್ತಿದೆ.

ಕೃಷಿಯಲ್ಲಿ ತಾಂತ್ರಿಕತೆ: ಕೃಷಿಯಲ್ಲಿ ತಾಂತ್ರಿಕತೆ ಬಳಕೆ ಮಾಡುವ ಮೂಲಕ ಆದಾಯದಲ್ಲಿ ಹೆಚ್ಚಳ ಸೇರಿದಂತೆ ಬೇರೊಬ್ಬರ ಮೇಲೆ ಕೃಷಿ ಅವಲಂಬಿತವಾಗದಂತೆ ನೋಡಿಕೊಳ್ಳುವುದು ಡ್ರೋಣ್‌ ಬಳಕೆ ಹಿಂದಿರುವ ಉದ್ದೇಶ. ಮೊದಲ ಬಾರಿಗೆ ಯೂಟ್ಯೂಬ್‌ನಲ್ಲಿ ನೋಡಿದ್ದ ರಾಜು ಹೊಸಕೇರಿ ಅವರು, ಬಳಿಕ ತಮ್ಮ ಲಾವಣಿ ಹೊಲದಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.
ದ್ರೋಣ್‌ ಬಳಕೆ ಹೇಗೆ: ಡ್ರೋಣ್‌ನಲ್ಲಿ 10 ಲೀ. ಟ್ಯಾಂಕ್‌ ಫಿಕ್ಸ್‌ ಆಗಿರುತ್ತದೆ. ಇದಕ್ಕೆ ಸಿಂಪಡಿಸುವ ಔಷಧಿಯನ್ನು ತುಂಬಿದ ಬಳಿಕ ಒಂದಿಂಚೂ ಜಾಗ ಬಿಡದೇ ಸ್ಪ್ರೇ ಮಾಡುವ ಡ್ರೋಣ್‌, ಕೇವಲ 15 ನಿಮಿಷದಲ್ಲಿ ಒಂದು ಎಕರೆ ಪೂರ್ತಿ ಸಿಂಪಡಣೆ ಮಾಡಿ ಮುಗಿಸುತ್ತದೆ.

ವೆಚ್ಚವೂ ಕಡಿಮೆ: ಡ್ರೋಣ್‌ ಬಳಕೆ ಖರ್ಚು ಕೈಗೆಟುಕಲ್ಲ ಎಂದೇನೂ ಇಲ್ಲ. ಪ್ರತಿ ಎಕರೆಗೆ ದ್ರೋಣ್‌ ವೆಚ್ಚ, ಔಷಧ ವೆಚ್ಚ ಹೊರತುಪಡಿಸಿ ಕೇವಲ 600 ರೂ. ಮಾತ್ರ ಖರ್ಚಾಗಲಿದೆ. ಹೀಗಾಗಿ, ಡ್ರೋಣ್‌ ಬಾಡಿಗೆ ದರ ಪ್ರತಿಯೊಬ್ಬ ರೈತರಿಗೂ ಕೈಗೆಟುಕುವಂತಿದೆ.

ಟಾಪ್ ನ್ಯೂಸ್

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.