ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್ ಗೆ ತೀವ್ರ ನಿರಾಸೆ ತಂದಿಟ್ಟ ಫೈನಲ್ ಸೋಲು
ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಫೈನಲ್ಗಳನ್ನು ಕಳೆದುಕೊಂಡಿದ್ದೇನೆ
Team Udayavani, May 30, 2022, 3:09 PM IST
ಅಹಮದಾಬಾದ್ : ಐಪಿಎಲ್ ಫೈನಲ್ ಸಮರದಲ್ಲಿ ಸೋಲು ಅನುಭವಿಸಿದ ಬಳಿಕ ರಾಜಸ್ಥಾನ್ ರಾಯಲ್ಸ್ ನ ಸ್ಪೋಟಕ ಆಟಗಾರ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ಹೊಂದಿದ ಹೊರತಾಗಿಯೂ ತೀವ್ರ ನಿರಾಸೆ ಅನುಭವಿಸಬೇಕಾಯಿತು.
ಆಲ್ರೌಂಡ್ ಆಟದ ಪ್ರದರ್ಶನ ನೀಡಿದ ನೂತನ ತಂಡವಾದ ಗುಜರಾತ್ ಟೈಟಾನ್ಸ್,ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ಗಳಿಂದ ಭರ್ಜರಿಯಾಗಿ ಸೋಲಿಸಿ ಚೊಚ್ಚಲ ಪ್ರವೇಶದಲ್ಲಿಯೇ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.
ಅತ್ಯಮೋಘ ಬ್ಯಾಟಿಂಗ್ ಮಾಡಿ ತಂಡದ ಹಲವು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿ ಫೈನಲ್ ಪ್ರವೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದ ಬಟ್ಲರ್, 17 ಪಂದ್ಯಗಳಲ್ಲಿ 57.53 ಸರಾಸರಿಯಲ್ಲಿ 863 ರನ್ಗಳನ್ನು ಸಿಡಿಸಿದ್ದಾರೆ. ಈ ಋತುವಿನಲ್ಲಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಮತ್ತು ಆರೆಂಜ್ ಕ್ಯಾಪ್ ಅನ್ನು ಗೆದ್ದರು.
”ತೀವ್ರ ನಿರಾಶನಾಗಿದ್ದೇನೆ, ಇದು ಸಂಪೂರ್ಣವಾಗಿ ಸಹಜವಾಗಿದೆ. ದುರದೃಷ್ಟವಶಾತ್, ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಫೈನಲ್ಗಳನ್ನು ಕಳೆದುಕೊಂಡಿದ್ದೇನೆ, ”ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಜೋಸ್ ಬಟ್ಲರ್ ಹೇಳಿದ್ದಾರೆ.
ನಾವು ನಿಜವಾಗಿಯೂ ಬಯಸಿದ ಟ್ರೋಫಿ ಸಿಗಲಿಲ್ಲ, ಅದರಿಂದ ನಿರಾಸೆಯಾಯಿತು. ಹಾರ್ದಿಕ್ ಮತ್ತು ತಂಡಕ್ಕೆ ಅಭಿನಂದನೆಗಳು. ಅರ್ಹ ಚಾಂಪಿಯನ್ಗಳು. ನನ್ನ ಗುರಿ ತಂಡಕ್ಕಾಗಿ ನನ್ನ ಪಾತ್ರವನ್ನು ನಿರ್ವಹಿಸುವುದು ಮತ್ತು ಆಟವು ನನ್ನನ್ನು ಏನು ಮಾಡಲು ಕೇಳುತ್ತಿದೆ ಎಂಬುದರ ಕುರಿತು ಪ್ರಯತ್ನಿಸಿ ಮತ್ತು ಪ್ರತಿಕ್ರಿಯಿಸುವುದು. ಉತ್ತಮ ತಂಡಗಳಲ್ಲಿ ನೀವು ಪ್ರತಿಯೊಬ್ಬರಲ್ಲೂ ಹೆಚ್ಚಿನ ನಂಬಿಕೆಯನ್ನು ಹೊಂದಿರುತ್ತೀರಿ. ನಮ್ಮ ತಂಡದ ಪ್ರತಿಯೊಬ್ಬರ ಮೇಲೂ ನಮಗೆ ಅಪಾರ ನಂಬಿಕೆ ಇದೆ. ಇಂದು ಆಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನಂತರ ಬಟ್ಲರ್ ಐಪಿಎಲ್ನ ಒಂದೇ ಆವೃತ್ತಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಕೊಹ್ಲಿ 2016ರಲ್ಲಿ 16 ಇನ್ನಿಂಗ್ಸ್ ಗಳಿಂದ 973 ರನ್ ಗಳಿಸಿ ಆಗ್ರ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು