ಜ್ಞಾನವ್ಯಾಪಿ ಕೇಸ್ನಲ್ಲಿ ಹೊಸ ತಿರುವು: ವೀಡಿಯೋ ಸೋರಿಕೆ: ಸಿಬಿಐ ತನಿಖೆಗೆ ಆಗ್ರಹ
Team Udayavani, May 31, 2022, 10:22 PM IST
ಲಕ್ನೋ: ಉತ್ತರ ಪ್ರದೇಶದಯಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚೆಗೆ ನಡೆದ ವೀಡಿಯೋ ಸಮೀಕ್ಷೆಯ ವೀಡಿಯೋಗಳು ವಿವಿಧ ಟಿ.ವಿ. ಮಾಧ್ಯಮಗಳಲ್ಲಿ ಬಿತ್ತರ ವಾಗಿರುವುದರ ಬಗ್ಗೆ ಜ್ಞಾನವಾಪಿ ಮಸೀದಿ ಪ್ರಕರಣದ ಅರ್ಜಿದಾರರಲ್ಲೊಬ್ಬರಾದ ರಾಖೀ ಸಿಂಗ್ ಆಕ್ಷೇಪಿಸಿದ್ದಾರೆ.
ವಾರಾ ಣಸಿ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿರುವ ಅವರು, ವೀಡಿಯೋ ಸರ್ವೇಯ ದೃಶ್ಯಾವಳಿಗಳು ಸೋರಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಸೀದಿಯೊಳಗೆ ನ್ಯಾಯಾಲಯ ನೇಮಿಸಿದ್ದ ಕೋರ್ಟ್ ಕಮೀಷನ್ ವತಿಯಿಂದ ನಡೆಸ ಲಾಗಿದ್ದ ಸರ್ವೇಯ ವೀಡಿಯೋ ದೃಶ್ಯಗಳನ್ನು ಮಸೀದಿಯೊಳಗೆ ಪೂಜೆಗೆ ಅವಕಾಶ ಮಾಡಿಕೊಡ ಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದ ಐವರು ಮಹಿಳೆಯರ ಪೈಕಿ ನಾಲ್ವರಿಗೆ ನ್ಯಾಯಾಲಯವು ನೀಡಿತ್ತು. ಆ ವೀಡಿಯೋವನ್ನು ಸಾರ್ವ ಜನಿಕರಿಗೆ ತೋರಿ ಸುವು ದಿಲ್ಲ ಎಂದು ಅರ್ಜಿ ದಾರರು ಪತ್ರ ಬರೆದು ಕೊಟ್ಟ ಅನಂತರ ಮುಚ್ಚಿದ ಲಕೋಟೆ ಯಲ್ಲಿ ವೀಡಿಯೋದ ಸಿಡಿಗಳನ್ನು ಕೊಡಲಾಗಿತ್ತು.
ಮುಚ್ಚಿದ ಲಕೋಟೆಗಳು ಹಾಗೆಯೇ ಇವೆ!:ವೀಡಿಯೋ ಸೋರಿಕೆ ಬಗ್ಗೆ ಅರ್ಜಿದಾರ ಪರ ವಕೀಲರೊಬ್ಬರು ಹೇಳಿಕೆ ನೀಡಿ ನ್ಯಾಯಾಲಯದಿಂದ ಕೊಡಲಾಗಿದ್ದ ಮುಚ್ಚಿದ ಲಕೋಟೆಗಳನ್ನು ಇನ್ನೂ ತೆರೆದಿಲ್ಲ. ವೀಡಿಯೋಗಳು ಲೀಕ್ ಆಗಿದ್ದು ಹೇಗೆ ಎಂಬುದೇ ಅರ್ಥವಾಗಿಲ್ಲ ಎಂದಿದ್ದಾರೆ.
ಅದು ಶಿವಲಿಂಗವೇ, ಕಾರಂಜಿಯ ಭಾಗವಲ್ಲ: ಇದೇ ವೇಳೆ ವೀಡಿಯೋ ಸಮೀಕ್ಷೆಯಲ್ಲಿ ಭಾಗ ವಹಿ ಸಿದ್ದ ವೀಡಿ ಯೋಗ್ರಾಫರ್ ಗಣೇಶ್ ಶರ್ಮಾ “ರಿಪಬ್ಲಿಕ್ ವಾಹಿನಿ’ಗೆ ಸಂದರ್ಶನ ಕೊಟ್ಟಿದ್ದು, “ಅಲ್ಲಿ ಪತ್ತೆಯಾಗಿದ್ದು ಕಾರಂಜಿಯಲ್ಲ, ಶಿವಲಿಂಗವೇ’ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ