ರಣಜಿ ಕ್ವಾರ್ಟರ್ ಫೈನಲ್ ಪಂದ್ಯ: ಕರ್ನಾಟಕ ತಂಡ ಪ್ರಕಟ
Team Udayavani, May 31, 2022, 11:23 PM IST
ಬೆಂಗಳೂರು: ಕರ್ನಾಟಕ ಮತ್ತು ಉತ್ತರ ಪ್ರದೇಶ ನಡುವೆ ಜೂನ್ 6ರಿಂದ ಬೆಂಗಳೂರಿನಲ್ಲಿ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.
ಈ ಪಂದ್ಯಕ್ಕೆ ಕೆಎಸ್ಸಿಎ ರಾಜ್ಯ ತಂಡವನ್ನು ಪ್ರಕಟಿಸಿದೆ.ಮನೀಷ್ ಪಾಂಡೆ ನಾಯಕರಾಗಿ ಮುಂದುವರಿದಿದ್ದಾರೆ.
ಆರ್.ಸಮರ್ಥ್, ಅಗರ್ವಾಲ್, ಪಡಿಕ್ಕಲ್, ಕರುಣ್ ನಾಯರ್, ಕೆ.ವಿ.ಸಿದ್ಧಾರ್ಥ, ಡಿ. ನಿಶ್ಚಲ್, ಎಸ್.ಶರತ್, ಶ್ರೇಯಸ್ ಗೋಪಾಲ್, ಕೆ. ಗೌತಮ್, ಶುಭಾಂಗ್ ಹೆಗ್ಡೆ, ಜೆ.ಸುಚಿತ್, ಕೆ.ಸಿ. ಕಾರಿಯಪ್ಪ, ರೋನಿತ್ ಮೋರೆ, ವಿ.ಕೌಶಿಕ್, ವಿ. ವೈಶಾಖ್, ಎಂ. ವೆಂಕಟೇಶ್, ವಿದ್ವತ್ ಕಾವೇರಪ್ಪ, ಕಿಶನ್ ಎಸ್. ಬೆದರೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.