ಹನುಮ ಜನ್ಮಸ್ಥಳಕ್ಕೆ ಗೋಕರ್ಣ ಸೇರ್ಪಡೆ!
ಹನುಮ ಹೇಳಿದ್ದಾನೆ, ವಾಲ್ಮೀಕಿ ಬರೆದಿದ್ದಾನೆ ಎಂಬ ವಾದ ಶುರು - ದಾಖಲೆ ಸಿದ್ಧಪಡಿಸಿದ್ದ ರಾಘವೇಶ್ವರ ಶ್ರೀ
Team Udayavani, Jun 2, 2022, 6:35 AM IST
ಹೊನ್ನಾವರ: ಹನುಮಂತನ ಜನ್ಮಸ್ಥಾನ ಸಂಬಂಧಿಸಿದ ವಿವಾದಕ್ಕೆ ಈಗ ಉತ್ತರ ಕನ್ನಡದ ಗೋಕರ್ಣವೂ ಸೇರಿದೆ.
ಹಂಪಿಯ ಕಿಷ್ಕಿಂಧಾ ಪರ್ವತವು ಹನುಮಂತನ ಜನ್ಮಸ್ಥಾನ ಎಂದೇ ನಂಬಲಾಗಿತ್ತು. ಆ ಬಳಿಕ ಆಂಧ್ರ ಪ್ರದೇಶವು ನಮ್ಮ ರಾಜ್ಯವೇ ಹನು ಮಂತನ ಜನ್ಮಭೂಮಿ ಎಂದು ಹೇಳಿಕೊಂಡಿತ್ತು. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ನಾಸಿಕ್ ಹನು ಮಂತನ ಜನ್ಮಸ್ಥಳ ಎಂದು ಅಲ್ಲಿನ ಕೆಲವರು ಹೇಳಿದ್ದು, ಈಗ ಆ ಸಾಲಿಗೆ ಗೋಕರ್ಣವೂ ಸೇರಿದೆ.
ಹನುಮಂತನ ಜನ್ಮಸ್ಥಳ ಮಹಾ ರಾಷ್ಟ್ರದ ನಾಸಿಕ್ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿ ನಾಸಿಕ್ದಲ್ಲಿ ನಡೆದ ಧರ್ಮಸಂಸತ್ ಸಭೆಯಲ್ಲಿ ಹೊಡೆದಾಟದವರೆಗೆ ತಲು ಪಿದೆ. ಪೊಲೀಸರ ಮಧ್ಯಪ್ರವೇಶವೂ ಆಗಿದೆ. ಕೊನೆಗೂ ಸಭೆಯಲ್ಲಿ ಯಾವ ತೀರ್ಮಾನವೂ ಆಗಿಲ್ಲ.
ಈ ನಡುವೆ, ರಾಘವೇಶ್ವರ ಶ್ರೀಗಳು ರಾಮಾಯಣದ ಸುಂದರ ಕಾಂಡದ ದಾಖಲೆಯನ್ನಿಟ್ಟು ಗೋಕರ್ಣ ಹನುಮನ ಜನ್ಮಸ್ಥಳ ಎಂದು ಕುರುಹುಗಳೊಂದಿಗೆ ಅಲ್ಲಿ ಪೂಜೆಯನ್ನೇ ಆರಂಭಿಸಿದರು. ಉತ್ತರ ಕನ್ನಡದವರು ಬೆಂಬಲಿಸಬೇಕಿತ್ತು. ಎಂದಿನಂತೆ ಉತ್ತರ ಕನ್ನಡದ ಧ್ವನಿ ಜಿಲ್ಲೆಯ ಹೊರಗೆ ಕೇಳಿಸಲೇ ಇಲ್ಲ. ರಾಮಾಯಣದಲ್ಲಿ ಹನುಮಂತನೇ ತನ್ನ ಜನ್ಮಸ್ಥಳ ಗೋಕರ್ಣ ಎಂದು ಹೇಳಿರುವಾಗ, ವಾಲ್ಮೀಕಿ ಋಷಿಗಳು ಬರೆದಿರುವಾಗ ಮತ್ತೆ ಉತ್ತರದವರು ಕಿತ್ತಾಡುವ ಬದಲು ಗೋಕರ್ಣ ಹನುಮನ ಜನ್ಮಸ್ಥಳ ಎಂದು ಒಪ್ಪಿಕೊಳ್ಳಬಾರದೇಕೆ ಎನ್ನುವ ಚರ್ಚೆಗಳು ಶುರುವಾಗಿವೆ.
ದಾಖಲೆಯಲ್ಲೇನಿದೆ?
ಸೀತಾಮಾತೆಯನ್ನು ಪ್ರಥಮ ಬಾರಿ ಆಂಜನೇಯ ನೋಡಿದಾಗ ತನ್ನ ಗುರುತು ಹೇಳುತ್ತ, ವೈದೇಹಿ, ಮಾಲ್ಯವಂತವು ಪರ್ವತಗಳಲ್ಲಿಯೇ ಶ್ರೇಷ್ಠವಾದ ಪರ್ವತ. ಕೇಸರಿ ಎಂಬ ಕಪೀಶ್ವರನು ಅಲ್ಲಿಂದ ಗೋಕರ್ಣ ಪರ್ವತಕ್ಕೆ ಹೋದನು. ಪುಣ್ಯಪ್ರದ ವಾದ ಗೋಕರ್ಣ ಕ್ಷೇತ್ರದಲ್ಲಿ ಯಾತ್ರಾರ್ಥಿಗಳಿಗೆ ತೊಂದರೆ ಮಾಡುತ್ತಿದ್ದ ಶಂಬಸಾದನ ಎಂಬ ರಾಕ್ಷಸನನ್ನು ಸಂಹರಿಸುವಂತೆ ಬ್ರಹ್ಮರ್ಷಿಗಳು ಕಪಿಶ್ರೇಷ್ಠನಾದ ನನ್ನ ತಂದೆಗೆ ಆಜ್ಞೆ ಮಾಡಿದರು. ಅವರ ಆಜ್ಞೆಯಂತೆ ನನ್ನ ತಂದೆಯು ಆ ರಾಕ್ಷಸನನ್ನು ಸಂಹರಿಸಿದನು. ಅಂತಹ ಪರಾಕ್ರಮಿಯಾದ ಕೇಸರಿಯ ಕ್ಷೇತ್ರದಲ್ಲಿ (ಅವನ ಪತ್ನಿ ಅಂಜನಾದೇವಿಯಲ್ಲಿ) ನಾನು ವಾಯುವಿನಿಂದ ಹುಟ್ಟಿದೆ. ನನ್ನ ಪರಾಕ್ರಮದಿಂದಲೇ ನಾನು ಲೋಕದಲ್ಲಿ ಹನುಮಂತ ಹೆಸರಿ ನಿಂದ ಖ್ಯಾತನಾಗಿದ್ದೇನೆ ಎಂದು ಸೀತೆಗೆ ಆಂಜನೇಯ ಪರಿಚಯಿಸಿ ಕೊಳ್ಳುತ್ತಾನೆ. (ತಸ್ಯಾಹಂ ಹರಿಣಃ ಕ್ಷೇತ್ರೇ ಜಾತೋ ವಾತೇನ ಮೈಥಿಲಿ ಹನುಮಾನಿತಿ ನಿಖ್ಯಾತೋ ಲೋಕೇ ಸ್ವೇನೈವ ಕರ್ಮಣಾ) ಮೂಲ ವಾಲ್ಮೀಕಿ ರಾಮಾಯಣದ ಸುಂದರ ಕಾಂಡದ 1304ನೇ ಪುಟದ 81ನೇ ಶ್ಲೋಕದಲ್ಲಿ ಮತ್ತು ಕನ್ನಡ ಅನು ವಾದದ 2274ನೇ ಪುಟದಲ್ಲಿ ಇದು ದಾಖಲಾಗಿದೆ. ಹೀಗಿರುವಾಗ ಆಂಜ ನೇಯ ಜನ್ಮಭೂಮಿಗೆ ಸಂಬಂಧಿಸಿದ ದಾಖಲೆ ಕೇಳುವ ಅಗತ್ಯವೇ ಇಲ್ಲ ಎನ್ನುವ ವಾದ ಆರಂಭವಾಗಿದೆ.
-ಜೀಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !