ಗೋಡಿನಾಳ ಸರ್ಕಾರಿ ಶಾಲೆ ಹಚ್ಚ ಹಸಿರು


Team Udayavani, Jun 5, 2022, 2:09 PM IST

7

ಕನಕಗಿರಿ: ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಮಾಡುವುದು ಅಪರೂಪ. ಆದರೆ ಸಮೀಪದ ಗೋಡಿನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಟ್ಟು ಹಚ್ಚ ಹಸಿರಿನ ಪರಿಸರ ನಿರ್ಮಾಣ ಮಾಡುವಲ್ಲಿ ಇಲ್ಲಿನ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ.

ಬರದ ನೆಲದಲ್ಲಿ ಹಸಿರು ತೊಡಿಸಲಾಗಿದೆ. ಹಕ್ಕಿಗಳ ಕಲರವ ನಿರಂತರ ದಟ್ಟಾರಣ್ಯದಂತೆ ಕಾಣುವ ಈ ನೆಲ ತಪೋವನದ ಹೆಸರಿನಲ್ಲಿ ತಪೋಭೂಮಿಯಂತಿದೆ. ಚಿಕ್ಕ ಜಾಗದಲ್ಲೆಲ್ಲ ಗಿಡಗಳ ಸಾಲಿವೆ. ಖಾಸಗಿ ಜಾಗವಾದರೂ ಸರಿ, ಸರ್ಕಾರಿ ಜಾಗವಾದರೂ ಸರಿ ಸ್ವ ಇಚ್ಛೆಯಿಂದ ಸಸಿ ನೆಟ್ಟು ಬೆಳೆಸಲಾಗಿದೆ. ಬೇಸಿಗೆಯಲ್ಲಿ ನೀರಿನ ಹಾಹಾಕಾರವಿದ್ದರೂ ಟ್ಯಾಂಕರ್‌ ಮೂಲಕ ನೀರನ್ನು ಖರೀದಿಸಿ ಗಿಡಮರಗಳಿಗೆ ನೀರುಣಿಸಲಾಗಿದೆ. ಪಕ್ಷಿಗಳಿಗಾಗಿ ಬಾಟಲ್‌ ಕೊರೆದು ನೀರಿನ ತೊಟ್ಟಿ ನಿರ್ಮಿಸಿ, ಗಿಜುಗನ ಗೂಡನ್ನು ತಂದು ಮರಗಳಿಗೆ ಕಟ್ಟಿ ಪಕ್ಷಿಗಳ ಸಂತಾನೋತ್ಪತ್ತಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ರಾಸಾಯನಿಕ ಸಿಂಪಡಿಸದೆ ಸಾವಯವ ಪದ್ಧತಿಯಲ್ಲಿ ಉದ್ಯಾನವನ ನಿರ್ಮಿಸಿ ಪೋಷಣೆ ಮಾಡಲಾಗುತ್ತಿದೆ. ಅನೇಕ ದಿನಗಳ ಕಾಲ ನೀರಿಲ್ಲದಿದ್ದರೂ ಸಾವಯವ ಪದ್ಧತಿಯಲ್ಲಿ ಬೆಳೆದ ಗಿಡಮರಗಳು ಹಸಿರಾಗಿ ಉಳಿದಿವೆ. ಗಿಡ ಮರಗಳನ್ನು ಬೆಳೆಸುತ್ತಾ ಪ್ರೇರಣೆಯಾಗಿ ನಿಲ್ಲುವ ಶಾಲೆ ಶಿಕ್ಷಕರು ಪ್ರತಿ ಮನೆಯ ಮುಂದೆಯೂ ಕೂಡ ಸೌಂದರ್ಯವರ್ಧಕ ಗಿಡಮರಗಳನ್ನು ಬೆಳೆಸುವಲ್ಲಿ ಹಾಗೂ ಬೇರೆ ಬೇರೆ ಗಿಡಗಳ ಪೋಷಣೆಗೆ ಜನರು ನಿಲ್ಲುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ವಿದ್ಯಾರ್ಥಿಗಳಿಗೊಂದು ಗಿಡ ನೀಡಿ ಪೋಷಣೆ ಮಾಡಿ ಸೊಂಪಾಗಿ ಬೆಳೆಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಮನೆಯ ಆವರಣ, ಸುತ್ತಮುತ್ತ ಜಾಗ ಸ್ವತ್ಛವಾಗಿಟ್ಟುಕೊಳ್ಳುವುದರ ಮೂಲಕ ಆ ಸ್ಥಳದಲ್ಲಿ ಗಿಡಗಳನ್ನು ಬೆಳೆಸುವಲ್ಲಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಹುಟ್ಟಿದ ದಿನಕ್ಕೊಂದು ಸಸಿ ತಂದು ನೆಟ್ಟು ಪೋಷಣೆ ಮಾಡಿ ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸುವಲ್ಲಿ ಮಕ್ಕಳು ಮುಂದಾಗಿದ್ದಾರೆ.

-ಮೆಹಬೂಬ್‌ ಗಂಗಾವತಿ

ಪರಿಸರ ಸ್ನೇಹಿ ಕೇಸೂರ ಗ್ರಾಪಂ

ದೋಟಿಹಾಳ: ಗ್ರಾಮ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿ 5-6 ವರ್ಷಗಳಲ್ಲಿ ಕೇಸೂರ ಗ್ರಾಪಂ 30 ಗುಂಟೆ ಜಾಗದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಿ ಉಳಿದ ಜಾಗದಲ್ಲಿ ವಿವಿಧ ಬಗೆ ಸಸಿಗಳನ್ನು ಬೆಳೆಸಿ ಗ್ರಾಪಂ ಕಂಗೊಳಿಸುವಂತೆ ಮಾಡಿದ್ದಾರೆ ಅಧಿಕಾರಿ ಮತ್ತು ಆಡಳಿತ ಮಂಡಳಿಯವರು. 2014ರಲ್ಲಿ ರಾಜ್ಯ ಸರಕಾರ ಗ್ರಾಪಂ ಮರುವಿಂಗಡನೆ ಮಾಡಿದ ವೇಳೆ ರಚನೆಯಾಗಿದ್ದು, ಸರಕಾರದ ಅನುದಾನ ಬಳಸಿಕೊಂಡು ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಪರಿಸರ ಸ್ನೇಹಿ ಗ್ರಾಪಂ ಮಾಡಲು ಮುಂದಾಗಿದ್ದಾರೆ. 2014ರಲ್ಲಿ ದೋಟಿಹಾಳ ಗ್ರಾಪಂನಿಂದ ವಿಂಗಡನೆಗೊಂಡ ಕೇಸೂರು ಗ್ರಾಪಂ ಕಚೇರಿ ಮೊದಲು ಗ್ರಾಮದ ಸಮುದಾಯ ಭವನದಲ್ಲಿ ಆರಂಭಿಸಲಾಗಿತ್ತು. ನಂತರ ಸರಕಾರ ರಾಜೀವ ಗಾಂಧಿ ಸೇವಾ ಕೇಂದ್ರ ಹಾಗೂ ಉಗ್ರಾಣ ಕೊಠಡಿಗೆ ಮರುವಿಂಗಡನೆಗೊಂಡ ಗ್ರಾಪಂಗಳಿಗೆ ಅನುದಾನ ಬಿಡುಗಡೆ ಮಾಡಿತು. ಇದನ್ನು ಹಿಂದಿನ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಪಂ ಕಚೇರಿಗೆ ಮೀಸಲಿದ್ದ ಸುಮಾರ 30 ಗುಂಟೆ ಜಾಗದಲ್ಲಿ ರಾಜೀವ್‌ ಗಾಂಧಿ ಸೇವಾ ಕೇಂದ್ರ ಮತ್ತು ಉಗ್ರಣ ಕೊಠಡಿ ನಿರ್ಮಿಸಿ ಉಳಿದ ಜಾಗದಲ್ಲಿ ಹಸಿರು ಬೆಳೆಸಲು 70ಕ್ಕೂ ಹೆಚ್ಚು ಸಸಿ ನೆಟ್ಟು ಕಂಗೊಳಿಸುವಂತೆ ಮಾಡಿದ್ದಾರೆ. ಗ್ರಾಪಂ ಆವರಣದ ಉದ್ಯಾನವನದಲ್ಲಿ ಸುಮಾರು 70ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗಿದೆ. ಬೇವಿನ ಮರ, ತೆಂಗಿನ ಮರ, ನೇರಳೆ ಮರ, ನಿಂಬೆ, ಬಾದಾಮಿ, ಲಿಂಬೆಹಣ್ಣು ಗಿಡ, ಅಶೋಕ, ಸಿಲ್ವಾರ್‌, ಗುಲ್‌ ಮೊಹರ್‌, ಇನ್ನೂ ಅನೇಕ ಜಾತಿಯ ಸಸಿಗಳು ಬೆಳೆಸಲಾಗುತ್ತಿದೆ.

ಈ ಹಿಂದಿನ ಹಾಗೂ ಈಗಿನ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರ ಪರಿಶ್ರಮದಿಂದ ಪರಿಸರ ಸ್ನೇಹಿ ಗ್ರಾಪಂ ನಿರ್ಮಾಣವಾಗಿದೆ. ಗ್ರಾಪಂ ಆವರಣದಲ್ಲಿ ಒಂದು ಗಿಡ ಬೆಳೆಸಲು ಅನೇಕ ತೊಂದರೆಗಳು ಬರುತ್ತವೆ. ಇವುಗಳನ್ನು ಮೀರಿ ಸುಂದರ ಉದ್ಯಾನವನ ಕಂಗೊಳಿಸುವಂತೆ ಮಾಡಲಾಗುತ್ತಿದೆ. ಇದು ಒಂದು ಹೆಮ್ಮೆಯ ವಿಷಯ. ಆಡಳಿತ ಮಂಡಳಿ ಮತ್ತು ಗ್ರಾಪಂ ಸಿಬ್ಬಂದಿ ನಡುವೆ ಉತ್ತಮ ಬಾಂಧವ್ಯದಿಂದ ಇದು ಸಾಧ್ಯವಾಗಿದೆ. –ಅಮೀನಸಾಬ್‌ ಅಲಂದಾರ, ಕೇಸೂರ ಪಿಡಿಒ

„ಮಲ್ಲಿಕಾರ್ಜುನ ಮೆದಿಕೇರಿ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.