ಕುರಿಯಾಳಪಡು ತ್ಯಾಜ್ಯ ಡಂಪ್ ಪ್ರಕರಣ: ಗುತ್ತಿಗೆದಾರನಿಂದ ಕಸ ತೆಗೆಸಿ ದಂಡದ ಶಿಕ್ಷೆ
Team Udayavani, Jun 18, 2022, 1:40 AM IST
ಬಂಟ್ವಾಳ: ಫರಂಗಿ ಪೇಟೆ ಭಾಗದಿಂದ ತ್ಯಾಜ್ಯ ಸಂಗ್ರಹದ ಗುತ್ತಿಗೆ ವಹಿಸಿಕೊಂಡ ವ್ಯಕ್ತಿಯೋರ್ವ ಅಮ್ಟಾಡಿ ಗ್ರಾಮದ ಕುರಿಯಾಳಪಡುನಲ್ಲು ಕಸ ತಂದು ಡಂಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಿಂದ ಕಸ ವನ್ನು ತೆಗೆಸುವ ಜತೆಗೆ ದಂಡ ವಿಧಿಸಿದ ಘಟನೆ ಶುಕ್ರವಾರ ನಡೆದಿದೆ.
ಕುರಿಯಾಳಪಡುನಲ್ಲಿ ಗುರುವಾರ ರಾತ್ರಿ ಯಾರೋ ವಾಹನದಲ್ಲಿ ಕಸ ತಂದು ಹಾಕಿರುವ ಕುರಿತು ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಗ್ರಾ. ಪಂ. ಪಿಡಿಒ ರವಿ ಅವರು ಆರೋಪಿಯ ಕುರಿತು ಯಾವುದಾದರೂ ಸುಳಿವು ಸಿಗುತ್ತದೆಯೇ ಎಂದು ತನಿಖೆ ನಡೆಸಲು ಮುಂದಾದರು.
ಆ ವೇಳೆ ಗ್ರಾ.ಪಂ.ನ ಬಿಲ್ ಕಲೆಕ್ಟರ್ ಚೇತನ್ಗೆ ಕಸದ ರಾಶಿಯಲ್ಲಿ ಫರಂಗಿಪೇಟೆ ಬಾರೊಂದರ ಬಿಲ್ ಸಿಕ್ಕಿತು. ಅದರ ಆಧಾರದಲ್ಲಿ ಮಾಹಿತಿ ಸಂಗ್ರಹಿಸಿದಾಗ ಅದು ಪುದು ಗ್ರಾ.ಪಂ. ವ್ಯಾಪ್ರಿಯ ತ್ಯಾಜ್ಯ ಎಂಬ ವಿಚಾರ ಖಚಿತವಾಯಿತು. ಮುಂದೆ ಗ್ರಾ.ಪಂ.ನಲ್ಲಿ ವಿಚಾರಿಸಿ ಅದು ಗುತ್ತಿಗೆ ವಹಿಸಿಕೊಂಡ ವ್ಯಕ್ತಿಯ ಕೃತ್ಯ ಎಂದು ಖಚಿತವಾಯಿತು.
ಕಸದ ಗುತ್ತಿಗೆ ವಹಿಸಿಕೊಂಡ ವ್ಯಕ್ತಿಯನ್ನು ಸ್ಥಳಕ್ಕೆ ಕರೆಸಿ ಆತನಿಂದಲೇ ಕಸ ತೆಗೆಸಿ 5 ಸಾವಿರ ರೂ. ದಂಡವನ್ನೂ ವಿಧಿಸಲಾಗಿದೆ. ಅಮ್ಟಾಡಿ ಗ್ರಾ.ಪಂ.ನ ಈ ಕಾರ್ಯಾಚರಣೆಯಲ್ಲಿ ಪಿಡಿಒ ಅವರ ಜತೆಗೆ ಗ್ರಾ.ಪಂ. ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹಾಗೂ ಸಿಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು