ಆಲೂರಿಗೆ ಬರಲಿ ಪಿಯು ಕಾಲೇಜು


Team Udayavani, Jun 20, 2022, 1:24 PM IST

9

ಆಲೂರು: ಹರ್ಕೂರು ಹಾಗೂ ಆಲೂರು ಗ್ರಾಮವನ್ನೊಳಗೊಂಡ ಆಲೂರು ಗ್ರಾ.ಪಂ. ವ್ಯಾಪ್ತಿಗೆ ಮುಖ್ಯವಾಗಿ ಸರಕಾರಿ ಪ.ಪೂ. ಕಾಲೇಜೊಂದರ ಬೇಡಿಕೆಯಿದೆ. ಪ್ರೌಢಶಾಲೆಯವರೆಗೆ ಕಲಿತ ವಿದ್ಯಾರ್ಥಿಗಳು ಪಿಯುಸಿಗಾಗಿ ಹತ್ತಾರು ಕಿಲೋ ಮೀಟರ್‌ ದೂರದ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ.

ಆಲೂರಲ್ಲಿ ಪ.ಪೂ. ಕಾಲೇಜು ಸಾಧ್ಯವಾದರೆ ಹರ್ಕೂರು, ಆಲೂರು, ಕಳಿ ಮಾತ್ರವಲ್ಲದೆ ನಾಡ ಗುಡ್ಡೆಯಂಗಡಿ, ಹುಂತನಗೋಳಿಯಲ್ಲಿ ಶಾಸಕರ ಮುತುವರ್ಜಿಯಲ್ಲಿ ಸೇತುವೆಯೂ ಆಗಿರುವುದರಿಂದ ಕಾಲ್ತೋಡು, ಹೇರೂರು ಗ್ರಾಮಗಳ ಮಕ್ಕಳಿಗೂ ಪಿಯುಸಿ ವ್ಯಾಸಂಗಕ್ಕೆ ಅನುಕೂಲವಾಗಲಿದೆ.

ಈ ಭಾಗದ ಮಕ್ಕಳೆಲ್ಲ ಪಿಯುಸಿಗಾಗಿ ನಾವುಂದ, ಕುಂದಾಪುರ, ಗಂಗೊಳ್ಳಿಗೆ ಹೋಗಬೇಕಿದೆ. ವಂಡ್ಸೆಯಲ್ಲಿ ಕಾಲೇಜಿದ್ದರೂ ಅಲ್ಲಿಗೆ ಸರಿಯಾದ ಬಸ್‌ ವ್ಯವಸ್ಥೆಯಿಲ್ಲ. ಆಲೂರಲ್ಲಿಯೇ ಪ್ರತೀ ವರ್ಷ 100ಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳು ಎಸೆಸೆಲ್ಸಿ ಮಕ್ಕಳಿದ್ದು, ಸುತ್ತಮುತ್ತಲಿನ ಪ್ರದೇಶಗಳ 200ಕ್ಕೂ ಅಧಿಕ ವಿದ್ಯಾರ್ಥಿಗಳಾಗುತ್ತಾರೆ. ಈ ನೆಲೆಯಲ್ಲಿ ಆಲೂರಿಗೆ ಪ.ಪೂ. ಕಾಲೇಜು ತುರ್ತಾಗಿ ಅಗತ್ಯವಿದೆ.

ಕಾಲೇಜಿನ ಕುರಿತು ಈ ಹಿಂದೆಯೇ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈಗ ಈ ಪ್ರಸ್ತಾವ ಶಿಕ್ಷಣ ಇಲಾಖೆಯ ಪ್ರ. ಕಾರ್ಯದರ್ಶಿ ಮಟ್ಟದಲ್ಲಿದೆ. ಅದು ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ಬರುವಲ್ಲಿ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ.

ಹೊಸ ಕಟ್ಟಡ

ಗ್ರಾ.ಪಂ. ಕಚೇರಿ ಕಟ್ಟಡ 40 ವರ್ಷಗಳಿಗೂ ಹಿಂದಿನದ್ದಾಗಿದ್ದು, ಹೊಸ ಸುಸಜ್ಜಿತ ಕಟ್ಟಡದ ಬೇಡಿಕೆಯೂ ಇದೆ.

ಕೈಗಾರಿಕೆ ಆರಂಭವಾಗಲಿ…

ಆಲೂರಲ್ಲಿ ಕಲಿತ ಯುವಜನರು ಉದ್ಯೋಗ ಅರಸಿಕೊಂಡು ಬೇರೆ ಜಿಲ್ಲೆಗಳು, ಪರ ಊರಿಗೆ ವಲಸೆ ಹೋಗಬೇಕಿದೆ. ಇಲ್ಲಿ ಯಾವುದೇ ಕೈಗಾರಿಕೆ, ಉದ್ಯಮವಾಗಲಿ ಇಲ್ಲ. ಗ್ರಾಮದ ಜನರಿಗೆ ಉದ್ಯೋಗ ಕಲ್ಪಿಸುವಂಥ ಬಟ್ಟೆ ಅಥವಾ ಇನ್ನಿತರ ಯಾವುದಾದರೂ ಕೈಗಾರಿಕೆ ಸ್ಥಾಪನೆಯಾದರೆ ಅನುಕೂಲವಾಗಲಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೇ ನಂಬರ್‌ 102ರಲ್ಲಿ 330.67 ಎಕರೆ ಜಾಗವಿದೆ. ಇದರಲ್ಲಿ ಒಂದಷ್ಟು ಮೀಸಲು ಅರಣ್ಯ ಸಮಸ್ಯೆಯಿದ್ದರೂ, ಅದನ್ನು ನಿವಾರಿಸಿ, ಕೈಗಾರಿಕೆ ಆರಂಭಿಸಲು ಅವಕಾಶವಿದೆ.

ನಿವೇಶನ ಕೊಡಿ: ಆಲೂರಿಗೆ ಅಗತ್ಯವಾಗಿ ಪಿಯುಸಿ ಕಾಲೇಜು ಬೇಕಿದೆ. ಇನ್ನು ಗ್ರಾಮದಲ್ಲಿ ಅನೇಕ ಮಂದಿ ನಿವೇಶನ ರಹಿತರಿದ್ದು, ಸಾಕಷ್ಟು ಸರಕಾರಿ ಜಾಗವಿದ್ದರೂ, ಡೀಮ್ಡ್ ಫಾರೆಸ್ಟ್‌ ಸಮಸ್ಯೆ ನಿವಾರಿಸಿದರೆ ಇದು ಸುಗಮವಾಗಲಿದೆ. ವಸತಿ ರಹಿತರಿಗೂ ತ್ವರಿತಗತಿಯಲ್ಲಿ ಮನೆ ಮಂಜೂರಾಗಬೇಕಿದೆ. ಇನ್ನು ಇಲ್ಲಿನ ಯುವಜನರಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕೆಗಳು ಆರಂಭವಾಗಬೇಕು. –ಪ್ರಶಾಂತ್‌ ಕುಲಾಲ್‌ ಆಲೂರು, ಗ್ರಾಮಸ್ಥರು

ಪ್ರಯತ್ನಿಸಲಾಗುವುದು: ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಗ್ರಾಮಸ್ಥರಿಗೆ ತಿಳಿಸಿದ್ದು, ಅದನ್ನು ನಿರ್ಣಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. ಪಿಯುಸಿ ಕಾಲೇಜು ಬೇಡಿಕೆ ಬಗ್ಗೆ ಈ ಹಿಂದೆಯೇ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮತ್ತೆ ಸಂಬಂಧಪಟ್ಟ ಸಚಿವರು, ಇಲಾಖಾ ಅಧಿಕಾರಿಗಳ ಗಮನಕ್ಕೆ ತರಲಾಗುವುದು. –ರವಿ ಶೆಟ್ಟಿ ಉಪಾಧ್ಯಕ್ಷರು, ಆಲೂರು ಗ್ರಾ.ಪಂ.

„ ಪ್ರಶಾಂತ್‌ ಪಾದೆ

 

 

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.