ದೊಡ್ಡ ರಾಷ್ಟ್ರೀಯ ಪಕ್ಷ ಬೆಂಬಲವನ್ನು ಖಚಿತಪಡಿಸಿದೆ : ಏಕನಾಥ್ ಶಿಂಧೆಗೆ ಇನ್ನಷ್ಟು ಬಲ
ನಮ್ಮನ್ನು ಅಯೋಧ್ಯೆಗೆ ಹೋಗದಂತೆ ತಡೆಯಲಾಯಿತು ;ಹಿಂದುತ್ವದ ಮಂತ್ರ
Team Udayavani, Jun 23, 2022, 8:48 PM IST
ಮುಂಬಯಿ : ಒಂದು ದೊಡ್ಡ ರಾಷ್ಟ್ರೀಯ ಪಕ್ಷವು “ಐತಿಹಾಸಿಕ ನಿರ್ಧಾರ” ತೆಗೆದುಕೊಂಡಿದ್ದಕ್ಕಾಗಿ ನಮ್ಮನ್ನು ಶ್ಲಾಘಿಸಿದೆ ಮತ್ತು ಅಗತ್ಯವಿರುವ ಎಲ್ಲಾ ಬೆಂಬಲವನ್ನು ಖಚಿತಪಡಿಸಿದೆ ಎಂದು ಬಂಡಾಯ ಶಿವಸೇನಾ ಶಾಸಕರ ನೇತೃತ್ವ ವಹಿಸಿರುವ ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಗುರುವಾರ ಹೇಳಿಕೆ ನೀಡಿದ್ದಾರೆ.
ಅವರು ಅಸ್ಸಾಂನ ಗುವಾಹಟಿಯ ಹೋಟೆಲ್ವೊಂದರಲ್ಲಿ ಬಂಡಾಯ ಶಿವಸೇನೆ ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಹೇಳಿಕೆ ನೀಡಿದ್ದಾರೆ.
ಸೂಪರ್ ಪವರ್ ಆಗಿರುವ ರಾಷ್ಟ್ರೀಯ ಪಕ್ಷವೊಂದು ನೀವು ತೆಗೆದುಕೊಂಡ ಯಾವುದೇ ನಿರ್ಧಾರ ಐತಿಹಾಸಿಕ ಎಂದು ನನಗೆ ಹೇಳಿದೆ ಮತ್ತು ನಮಗೆ ಯಾವುದೇ ಸಹಾಯ ಬೇಕಾದರೂ ನೀಡಲಾಗುವುದು ಎಂದು ಖಚಿತಪಡಿಸಿದೆ, ”ಎಂದು ಶಿಂಧೆ ಮರಾಠಿಯಲ್ಲಿ ಹೇಳಿದ್ದಾರೆ.
“ಹಿಂದುತ್ವ ಮತ್ತು ರಾಮಮಂದಿರವು ಪಕ್ಷಕ್ಕೆ ನಿರ್ಣಾಯಕ ವಿಷಯವಾಗಿರುವಾಗ, ಪಕ್ಷವು ನಮ್ಮನ್ನು ಅಯೋಧ್ಯೆಗೆ ಭೇಟಿ ನೀಡುವುದನ್ನು ಏಕೆ ತಡೆಯಿತು. ಆದಿತ್ಯ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದಾಗ ಶಾಸಕರನ್ನು ಕರೆದು ಅಯೋಧ್ಯೆಗೆ ಹೋಗದಂತೆ ತಡೆಯಲಾಯಿತು” ಎಂದು ಅವರು ಹೇಳಿದರು.
#WATCH | Rebel Maharashtra Shiv Sena MLAs in Guwahati unanimously chose Eknath Shinde their leader. pic.twitter.com/tuhL93rSfV
— ANI (@ANI) June 23, 2022
ಬಹುಮತವಿದೆಯೇ? ವಿಧಾನಸಭೆಯಲ್ಲಿ ನಿರ್ಧರಿಸಿ : ಪವಾರ್
ಎಂವಿಎ ಸರ್ಕಾರಕ್ಕೆ ಬಹುಮತವಿದೆಯೇ ಎಂಬುದನ್ನು ವಿಧಾನಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಬಂಡುಕೋರರು ನೇರವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಶಿವಸೇನೆಯ ಬಂಡಾಯ ಶಾಸಕರನ್ನು ಗುಜರಾತ್ಗೆ ಮತ್ತು ನಂತರ ಅಸ್ಸಾಂಗೆ ಹೇಗೆ ಕರೆದೊಯ್ಯಲಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಅವರಿಗೆ ಸಹಾಯ ಮಾಡುವ ಎಲ್ಲರ ಹೆಸರನ್ನು ನಾವು ತೆಗೆದುಕೊಳ್ಳಬೇಕಾಗಿಲ್ಲ. ಅಸ್ಸಾಂ ಬಿಜೆಪಿ ಸರ್ಕಾರ ಅವರಿಗೆ ಸಹಾಯ ಮಾಡುತ್ತಿದೆ ಎಂದು ಪವಾರ್ ಹೇಳಿದ್ದಾರೆ.
ಸರ್ಕಾರವನ್ನು ಉಳಿಸಲು ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸುವಂತೆ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಕೇಳಿಕೊಂಡಿದ್ದಾರೆ ಎಂದು ಎನ್ಸಿಪಿ ರಾಜ್ಯ ಮುಖ್ಯಸ್ಥ ಜಯಂತ್ ಪಾಟೀಲ್ ಹೇಳಿದ್ದಾರೆ. “ಆದರೆ ಯಾವುದೇ ಶಾಸಕರು ಮಹಾರಾಷ್ಟ್ರಕ್ಕೆ ಮರಳಿ ಬಂದು ಉದ್ಧವ್ ಠಾಕ್ರೆ ಅವರೊಂದಿಗೆ ಸಂವಾದ ನಡೆಸಿದರೆ, ಅವರು ಈ ಸರ್ಕಾರವನ್ನು ಮುಂದೆ ಕೊಂಡೊಯ್ಯುತ್ತಾರೆ ಎಂದು ನನಗೆ ಖಾತ್ರಿಯಿದೆ. ಹಾಗಾಗಿ ಯಾವುದೇ ತೀರ್ಮಾನಕ್ಕೆ ಬರುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ