40% ಕಮಿಷನ್ ಕೊಟ್ಟು ಕೆಲಸ ಪಡೆದ ಗುತ್ತಿಗೆದಾರರು ವಿಚಾರ ಬಹಿರಂಗ ಪಡಿಸಲಿ : ಈಶ್ವರಪ್ಪ
Team Udayavani, Jun 28, 2022, 7:54 PM IST
ಶಿವಮೊಗ್ಗ : 40 ಪರ್ಸೆಂಟ್ ಕಮಿಷನ್ ಕೊಟ್ಟು ಯಾರು ಗುತ್ತಿಗೆಯನ್ನು ಪಡೆದಿದ್ದಾರೆ ಅವರು ನೇರವಾಗಿ ವಿಚಾರ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
40 ಪರ್ಸೆಂಟ್ ಕಮಿಷನ್ ಬಗ್ಗೆ ಕೇಂದ್ರದಿಂದ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾವ ಇಲಾಖೆ, ಯಾವ ಮಂತ್ರಿ, ಯಾವ ಶಾಸಕ ಪರ್ಸೆಂಟೇಜ್ ಕೇಳಿದ್ರು ? ಯಾವ ಗುತ್ತಿಗೆದಾರನಿಗೆ, ಯಾವ ಕಾಮಗಾರಿಗೆ ಕೇಳಿದ್ರು? ಇದರಲ್ಲಿ ಯಾರಾದರೂ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ ಹಾಗಾಗಿ ಯಾರಾದ್ರೂ ಕಮಿಷನ್ ಕೊಟ್ಟಿದ್ದರೆ ಅದನ್ನು ಮೊದಲು ಬಹಿರಂಗಪಡಿಸಲಿ ಇಲ್ಲವಾದ್ರೇ ಇದು ಕೇವಲ ರಾಜಕೀಯ ವ್ಯಕ್ತಿಗಳ ಹೇಳಿಕೆ ರೀತಿ ಆಗುತ್ತೆ. ಅನ್ಯವ್ಯಕ್ತಿಗಳ ರಾಜಕೀಯ ಕುಮ್ಮಕ್ಕಿನಿಂದ ಪತ್ರ ಬರೆದರಾ ಎಂಬ ಪ್ರಶ್ನೆ ಕೂಡಾ ಜನರಿಗೆ ಎದುರಾಗುತ್ತೆ? ಅಲ್ಲದೆ ರಾಜಕೀಯ ದಾಳಕ್ಕೆ ಗುತ್ತಿಗೆದಾರರ ಸಂಘ ಇದಿಯೋ ಎಂಬ ಅನುಮಾನ ಆರಂಭವಾಗುತ್ತೆ ಎಂದರು.
ಗುತ್ತಿಗೆದಾರರ ಸಂಘದ ಕೆಂಪಣ್ಣ ಬಳಿ ದಾಖಲೆಯಿದೆ ಎಂದು ಬಹಳ ಹಿಂದಿನಿಂದ ಹೇಳ್ತಾ ಇದ್ದಾರೆ. ಈ ಹಿಂದೆ ಸಿಎಂ ಜೊತೆ ಕೂಡಾ ಅವರು ಸಭೆ ನಡೆಸಿದ್ದಾರೆ. ಆಗಲೂ ಕೆಂಪಣ್ಣ ಬಾಯಿ ಬಿಟ್ಟಿಲ್ಲ. ಪ್ರಧಾನಿ ಕಚೇರಿಯಿಂದ ಕರೆ ಬಂದ ಮೇಲೆ ಮತ್ತೆ ವಿಚಾರ ಮುನ್ನೆಲೆಗೆ ಬಂದಿದೆ. ಹಾಗಾಗಿ ಯಾರು ಕಮಿಷನ್ ಕೊಟ್ಟು ಕೆಲಸ ಪಡೆದ ಗುತ್ತಿಗೆದಾರರು ವಿಷಯ ಬಹಿರಂಗ ಪಡಿಸಲಿ ಎಂದರು.
ದಾಖಲೆ ಇವರ ಬಳಿ ಇಟ್ಟುಕೊಂಡು ಕೂತರೇ ಯಾವುದೇ ಲಾಭ ಇಲ್ಲ. ಇಲ್ಲವಾದಲ್ಲಿ ಇದು ಕೇವಲ ರಾಜಕೀಯ ಷಡ್ಯಂತ್ರವಾಗಿ ಉಳಿಯುತ್ತೆ. ಸತ್ಯಾಂಶ ಇದ್ದರೇ ವಿಷಯ ಎಲ್ಲವೂ ಹೊರಗೆ ಬರುತ್ತೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ