ಬೀದರ್: ಗೂಡ್ಸ್ ವಾಹನಕ್ಕೆ ರೈಲು ಢಿಕ್ಕಿ, ತಪ್ಪಿದ ಭಾರಿ ಅನಾಹುತ
Team Udayavani, Jul 7, 2022, 2:40 PM IST
ಬೀದರ್: ಗೂಡ್ಸ್ ವಾಹನಕ್ಕೆ ಎಕ್ಸ್ ಪ್ರೆಸ್ ರೈಲು ಢಿಕ್ಕಿ ಹೊಡೆದ ಘಟನೆ ಮಂಗಳವಾರ ಸಾಯಂಕಾಲ ತಾಲೂಕಿನ ಸಿದ್ದೇಶ್ವರ ಕ್ರಾಸ್ ಹತ್ತಿರ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಬೀದರ ಕಡೆಯಿಂದ ಭಾಲ್ಕಿಗೆ ಪ್ರಯಾಣಿಕರ ರೈಲು ಆಗಮನ ಹಿನ್ನೆಲೆ ರೈಲ್ವೆ ಸಿಬ್ಬಂದಿ ಗೇಟ್ ಹಾಕಿದ್ದು, ಅಷ್ಟರಲ್ಲಿ ವೇಗವಾಗಿ ಬಂದ ಗೂಡ್ಸ್ ಟ್ರಕ್ ಗೇಟ್ ಮುರಿದು ಒಳಗೆ ನುಗ್ಗಿದೆ. ಎರಡನೇ ಗೇಟ್ ಹತ್ತಿರ ಗೂಡ್ಸ್ ವಾಹನ ನಿಂತಿದೆ. ಅಷ್ಟರಲ್ಲಿ ಎಕ್ಸಪ್ರೆಸ್ ರೈಲು ಬರುತಿತ್ತು. ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತನಾಗಿ ಕೆಂಪು ನಿಶಾನೆ ತೋರಿಸಿದ. ಇದನ್ನು ಗಮನಿಸಿದ ರೈಲ್ವೆ ಚಾಲಕ ರೈಲಿನ ವೇಗ ತಗ್ಗಿಸುತ್ತಾ ಬಂದಿದ್ದು, ಗೇಟ್ ಸಮೀಪ ಬಂದು ವಾಹನಕ್ಕೆ ಢಿಕ್ಕಿ ಹೊಡೆದಿದೆ. ಅಷ್ಟರಲ್ಲಿ ಟ್ರಕ್ ಚಾಲಕ ಹೊರಗೆ ಓಡಿ ಹೋಗಿದ್ದು, ಜೀವಹಾನಿ ತಪ್ಪಿದೆ.
ಇದನ್ನೂ ಓದಿ:ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ
#WATCH Bidar, Karnataka | A train collided with a truck at Bhalki crossing, early this morning. No injury reported pic.twitter.com/9xYUUZTpcy
— ANI (@ANI) July 7, 2022
ಚಾಲಕನ್ನು ವಶಕ್ಕೆ ಪಡೆದಿರುವ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ