ಮಾಜಿ ಕಾರ್ಪೋರೇಟರ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಬಿಬಿಎಂಪಿ ಅಧಿಕಾರಿ
Team Udayavani, Jul 7, 2022, 3:32 PM IST
ಬೆಂಗಳೂರು: ಮಾಜಿ ಕಾರ್ಪೋರೇಟರ್ ಬಳಿಯೇ ಲಂಚ ಪಡೆಯುತ್ತಿದ್ದ ಬಿಬಿಎಂಪಿ ಯ ಬಿಎಂಟಿಎಫ್ ಅಧಿಕಾರಿ ಮೇಲೆ ಎಸಿಬಿ ದಾಳಿ ಮಾಡಿದೆ.
ಮಾಜಿ ಕಾರ್ಪೋರೇಟರ್ ಬಳಿಯೇ ಲಂಚ ಪಡೆಯಲು ಮುಂದಾಗಿದ್ದ ಬಿಎಂಟಿ ಎಫ್ ಅಧಿಕಾರಿ ಬೇಬಿ ಓಲೇಕಾರ್ ರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ:ಕಾರಿಗೆ ಸರ್ಕಾರಿ ಬಸ್ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು
ಮಾಜಿ ಕಾರ್ಪೋರೇಟರ್ ಲಕ್ಷ್ಮೀ ನಾರಾಯಣ್ ಬಳಿ ಹೊರಮಾವು ಅಗರ ಸರ್ವೆ ನಂಬರ್ 153 ರ ವ್ಯಾಜ್ಯಕ್ಕೆ ಸಬ್ ಇನ್ಸ್ ಪೆಕ್ಟ್ರ್ ಬೇಬಿ ಓಲೇಕಾರ್ ಮೂರು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲಕ್ಷ್ಮೀ ನಾರಾಯಣ್ ದೂರು ನೀಡಿದ್ದರು. ಇಂದು ಒಂದು ಲಕ್ಷ ಹಣ ಪಡೆಯುತ್ತಿರುವಾಗ ಎಸಿಬಿ ದಾಳಿ ಮಾಡಿದ್ದು, ಬೇಬಿ ಓಲೇಕಾರ್ ಸಿಕ್ಕಿ ಬಿದ್ದಿದ್ದಾರೆ.