ಪ್ರವಾಸಿಗರ ನೆಚ್ಚಿನ ತಾಣ ಆಲಮಟ್ಟಿ

ಹಚ್ಚ ಹಸಿರಿನ ವಾತಾವರಣ; ನಯನ ಮನೋಹರವಾಗಿ ಕಾಣುವ ಬೆಟ್ಟ-ಗುಡ್ಡಗಳು ; ಚಿಲಿಪಿಲಿ ಹಕ್ಕಿಗಳ ನಿನಾದ

Team Udayavani, Jul 21, 2022, 5:25 PM IST

24

ಆಲಮಟ್ಟಿ: ಬೆಳಗ್ಗೆಯಿಂದಲೇ ಶುರುವಾಗುವ ತುಂತುರು ಮಳೆ, ಎಲ್ಲಿ ನೋಡಿದರಲ್ಲಿ ಹಸಿರಿನಿಂದ ಕಂಗೊಳಿಸುವ ಬೆಟ್ಟ-ಗುಡ್ಡಗಳು, ನಯನ ಮನೋಹರವಾಗಿ ಕಾಣುವ ಜಲಾಶಯ, ಕಣ್ಣಿಗೆ ಕಾಣುವಷ್ಟು ದೂರದವರೆಗೂ ಜಲರಾಶಿ, ಇಂಪಾಗಿ ಕೇಳುವ ಹಕ್ಕಿಗಳ ಚಿಲಿಪಿಲಿ ನಿನಾದ.ಇದು ನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ತಾಣ ಆಲಮಟ್ಟಿಯ ವೈಶಿಷ್ಟ್ಯತೆ.

ಹೌದು. ಬೃಹತ್‌ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರ, ರಾಕ್‌ ಗಾರ್ಡನ್‌, ಮೊಘಲ್‌ ಗಾರ್ಡನ್‌, ಇಟಾಲಿಯನ್‌ ಗಾರ್ಡನ್‌, ಗೋಪಾಲಕೃಷ್ಣ ಗಾರ್ಡನ್‌, ಲವ-ಕುಶ, ಸಂಗೀತ ನೃತ್ಯ ಕಾರಂಜಿ, ಲೇಷರ್‌ ಶೋ, ಗುಲಾಬಿ ಗಾರ್ಡನ್‌, ತ್ರೀಡಿ ಪ್ರದರ್ಶನ, ರಾಕ್‌ ಉದ್ಯಾನದಲ್ಲಿ ನಿರ್ಮಿಸಿರುವ 7ಡಿ ಆಲಮಟ್ಟಿಯ ಆಕರ್ಷಣೆಯನ್ನು ಹೆಚ್ಚಿಸಿವೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಆಯುಕ್ತರಾಗಿದ್ದ ಡಾ|ಎಸ್‌.ಎಂ. ಜಾಮದಾರ ಹಾಗೂ ಉಪ ಅರಣ್ಯಸಂರಕ್ಷಣಾಧಿಕಾರಿ ಕೆ.ಡಿ.ಉದಪುಡಿಯವರ ವಿಶೇಷ ಕಾಳಜಿಯಿಂದ ಬಂಡೆಗಲ್ಲು, ಇಳಿಜಾರು ಕಲ್ಲು ಹಾಸು ಹಾಗೂ ತಗ್ಗು- ಗುಂಡಿಗಳಿಂದ ತುಂಬಿದ್ದ ನೆಲ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ತಂಪಾದ ವಾತಾವರಣ ನಿರ್ಮಾಣವಾಗಿದೆ.

ಆಲಮಟ್ಟಿ ರೈಲು ಸಂಪರ್ಕ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳನ್ನು ಹೊಂದಿ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಇದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಲೇ ಇರುತ್ತದೆ.

ಅಲುಗಾಡುವ ಗೋಡೆ

ಶಾಸ್ತ್ರಿ ಸಾಗರದ ಬಲಭಾಗದಲ್ಲಿರುವ ಲವ-ಕುಶ ಉದ್ಯಾನದಲ್ಲಿ ಹಸಿರಿನಿಂದ ಕಂಗೊಳಿಸುವ ವಿವಿಧ ಸಸ್ಯಗಳಿಂದ ಹಸಿರು ಗೋಡೆಯನ್ನು ನಿರ್ಮಿಸಲಾಗಿದೆ. ಜನ ಅಲುಗಾಡಿಸಿದರೆ ಸಾಕು ಸಂಪೂರ್ಣ ಬಾಗುತ್ತದೆ. ಕೈಬಿಟ್ಟರೆ ಮೊದಲಿನಂತೆ ಎದ್ದು ನಿಲ್ಲುತ್ತದೆ. ಇಲ್ಲಿ ಲವ-ಕುಶರ ಜೀವನ ಚರಿತ್ರೆ, ಶ್ರೀರಾಮ ಹಾಗೂ ಲವ-ಕುಶರ ಮಧ್ಯೆ ಅಶ್ವಮೇಧಯಾಗದ ಕುದುರೆ ಕಟ್ಟಿದ ಪರಿಣಾಮ ಯುದ್ಧ ಸೇರಿದಂತೆ ರಾಮಾಯಣದ ವಿವಿಧ ಪಾತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ಶ್ರೀಕೃಷ್ಣನ ಬಾಲಲೀಲೆ

ಜಲಾಶಯದ ಬಲಭಾಗದಲ್ಲಿ ಹೊಂದಿಕೊಂಡಂತಿರುವ ಗೋಪಾಲಕೃಷ್ಣ ಉದ್ಯಾನದಲ್ಲಿ ಶ್ರೀಕೃಷ್ಣನು ಗೋವುಗಳನ್ನು ಮೇಯಿಸುವ ವೇಳೆ ನೀರಿನಲ್ಲಿ ಜಲಕನ್ಯೆಯರು ಚೆಲ್ಲಾಟವಾಡುವಾಗ ಅವರ ಬಟ್ಟೆಯನ್ನು ಕದ್ದೊಯ್ದಿರುವ ದೃಶ್ಯ, ತಾಯಿಯ ಕಣ್ತಪ್ಪಿಸಿ ಬೆಣ್ಣೆ ಕದಿಯುವುದು ಹೀಗೆ ಶ್ರೀಕೃಷ್ಣನ ಬಾಲ್ಯವನ್ನು ನೆನಪಿಸುವ ದೃಶ್ಯಗಳು ಮುದ ನೀಡುತ್ತವೆ.

ರಾಕ್‌ ಉದ್ಯಾನ

ಹಳೆ ರಾಷ್ಟ್ರೀಯ ಹೆದ್ದಾರಿಯಿಂದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರಕ್ಕೆ ಬರುವ ಮಾರ್ಗ ಮಧ್ಯದಲ್ಲಿ ರಾಕ್‌ ಉದ್ಯಾನವಿದೆ. ಇಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಯ ದೃಶ್ಯ, ಕಾಡು ಪ್ರಾಣಿಗಳು, ಪಕ್ಷಿಗಳು, ಕಾಡುಜನರ ಬದುಕು, ಚಿಣ್ಣರ ನೀರಾಟ, ಚಿಟ್ಟೆಗಳ ಜೀವನ ಚರಿತ್ರೆ, ಸರೀಸೃಪಗಳು, ಕಮಲದ ಹೂವು, ಸೂರ್ಯಪಾರ್ಕ್‌ನಲ್ಲಿ ಭಾರತ ನಕ್ಷೆ ಅದರ ಸುತ್ತಲೂ ಸರ್ವ ಜನಾಂಗಗಳ ಶಾಂತಿಯ ತೋಟವೆನ್ನುವ ಕವಿವಾಣಿಯನ್ನು ನೆನಪಿಸುವಂತೆ ವಿವಿಧ ಕಲಾಕೃತಿಗಳು, ದೋಣಿ ವಿಹಾರ, ಚಿಣ್ಣರ ಉದ್ಯಾನ, ಜೋಕಾಲಿ, ರಾಜಸ್ಥಾನ ಮರುಭೂಮಿಯ ಜನರ ಬದುಕು, ಗುಹಾಂತರ ಕಲೆ ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿದೆ.

ಯುಕೆಪಿ ಅಧಿಕಾರಿಗಳ ವಿಶೇಷ ಕಾಳಜಿಯ ಫಲವಾಗಿ ಹಾಸು ಬಂಡೆಗಳ ಮೇಲೆ ಸುಂದರ ಉದ್ಯಾನಗಳು ನಿರ್ಮಾಣವಾಗಿವೆ. ಹಿನ್ನೀರು ಪ್ರದೇಶದಲ್ಲಿ ಜಲಕ್ರೀಡೆಗಳು ನಡೆಯುವಂತಾಗಬೇಕು. – ಮಹಿಬೂಬ ವಾಲಿಕಾರ, ಸೊಲ್ಲಾಪುರ

ಉದ್ಯಾನಗಳನ್ನು ಆರಂಭಿಸಿದ್ದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ ಇದರಿಂದ ಸಣ್ಣ ವ್ಯಾಪಾರಸ್ಥರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. -ದೇವರಾಜ ಹಿರೇಮನಿ, ಆಲಮಟ್ಟಿ

ಆಲಮಟ್ಟಿಯ ವಿವಿಧ ಉದ್ಯಾನಗಳಲ್ಲಿನ ಕಲಾಕೃತಿ, ಹಸಿರಿನಿಂದ ಕಂಗೊಳಿಸುವ ಗಿಡಮರಗಳು ಸೇರಿದಂತೆ ತುಂತುರು ಮಳೆಯ ನಡುವೆ ಇಲ್ಲಿನ ಸೌಂದರ್ಯ ನೋಡುವ ಸೌಭಾಗ್ಯ ದೊರಕಿರುವುದು ಸಂತಸವಾಗಿದೆ.  –ಶರಣಪ್ಪ ಮಂಕಣಿ, ಗದಗ

-ಶಂಕರ ಜಲ್ಲಿ

ಟಾಪ್ ನ್ಯೂಸ್

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.