ಹೇಮಂತ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು: ಅಧಿಪತ್ಯ ಸಾಧಿಸಲು ನಡೆಯಿತೇ ಹತ್ಯೆ?
Team Udayavani, Jul 24, 2022, 10:17 AM IST
ಬೆಂಗಳೂರು: ಇತ್ತೀಚೆಗೆ ಹುಟ್ಟಹಬ್ಬದ ದಿನವೇ ಕೆಂಗೇರಿ ಕೊನಸಂದ್ರ ಕರೆ ಸಮೀಪ ಬರ್ಬರವಾಗಿ ಹತ್ಯೆಗೀಡಾದ ಎಚ್.ಗೊಲ್ಲಹಳ್ಳಿ ನಿವಾಸಿ ಹೇಮಂತ್ನ ಕೊಲೆ ಪ್ರಕರಣ ಹೊಸ ತಿರುವು ಸಿಕ್ಕಿದ್ದು, ರೌಡಿಶೀಟರ್ ಕುಳ್ಳ ರಿಜ್ವಾನ್ನ ಸಹಚರರೇ ಹತ್ಯೆಗೈದಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕೆಂಪೇಗೌಡ ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಬಂಧನಕ್ಕೀಡಾದ ರಿಜ್ವಾನ್ನ ಮೊಬೈಲ್ ಪರಿಶೀಲಿಸಿದಾಗ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ, ಈತನ ಸಹಚರರು “ತಮ್ಮ ಬಾಸ್ ಯಾರೆಂದು ಗೊತ್ತಿಲ್ಲ’ ಎಂದು ಹೇಳಿದಕ್ಕೆ ಹೇಮಂತ್ನನ್ನು ಕೊಲೆಗೈದಿದ್ದಾರೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಜು. 16ರಂದು ಜನ್ಮದಿನ ಆಚರಿಸಿಕೊಳ್ಳುವುದಕ್ಕಾಗಿ ಮೂವರು ಸ್ನೇಹಿತರ ಜತೆ ಹೇಮಂತ್, ಕೆಂಗೇರಿಯ ನೈಸ್ ರಸ್ತೆ ಬಳಿಯ ಕೋನಸಂದ್ರದ ಅಂಡರ್ ಪಾಸ್ ಬಳಿ ಹೋಗಿದ್ದ. ಅದೇ ವೇಳೆ ಕುಳ್ಳ ರಿಜ್ವಾನ್ ಸಹಚರರು ಕೂಗಳತೆ ದೂರದಲ್ಲಿ ಪಾರ್ಟಿ ಮಾಡುತ್ತಿದ್ದರು. ಇತ್ತ ಹೇಮಂತ್ ಹಾಗೂ ಸ್ನೇಹಿತರು ಮದ್ಯದ ಅಮಲಿನಲ್ಲಿ ರೌಡಿಯಿಸಂ ಬಗ್ಗೆ ಮಾತುಕತೆ ಆರಂಭಿಸಿದ್ದಾರೆ. ರಿಜ್ವಾನ್ ಸಹಚರರು, “ನಮ್ಮ ಬಾಸ್ ಕುಳ್ಳ ರಿಜ್ವಾನ್ ಗೊತ್ತಿಲ್ವಾ’ ಎಂದಿದ್ದಾರೆ ಗೊತ್ತಿಲ್ಲ ಎಂದಾಗ ಕಿಪಿತರಾಗಿ ಮಾರಕಾಸ್ತ್ರದಿಂದ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ಕ್ರಿಕೆಟ್ ಆಡುವಾಗ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ದೀಪೇಶ್ ಭಾನ್ ನಿಧನ
ವಿಚಾರಣೆಯಲ್ಲಿ ಕೃತ್ಯ ಬೆಳಕಿಗೆ
ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೇಮಂತ್ನ ಮುಖ ಮತ್ತು ಹೊಟ್ಟೆ ಇರಿಯುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಕುಳ್ಳ ರಿಜ್ವಾನ್ಗೆ ಕಳುಹಿಸಿ, ಗೆಲುವಿನ ಚಿಹ್ನೆ ಹಾಕಿದ್ದಾರೆ. ವಿಚಾರಣೆ ವೇಳೆ ರಿಜ್ವಾನ್ ಮೊಬೈಲ್ನಲ್ಲಿ ಹೇಮಂತ್ ಕೊಲೆ ವಿಡಿಯೋ ಸಿಕ್ಕಿತ್ತು. ಮತ್ತೊಂದೆಡೆ ಸೈಕಲ್ ರವಿ, ಆತನ ಸಹಚರ ಬೇಕರಿ ರಘು ಕೊಲೆಗೈದು ದಕ್ಷಿಣ ಭಾಗದಲ್ಲಿ ತಾನೂ ಅಧಿಪತ್ಯ ಸಾಧಿಸಲು ರಿಜ್ವಾನ್ ಸಿದ್ಧತೆ ನಡೆಸುತ್ತಿದ್ದ ತನಿಖೆಯಲ್ಲಿ ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು