ದೇವೇಗೌಡರೇ ನನ್ನ ರಾಜಕೀಯ ಗುರು: ಜಮೀರ್ ಅಹಮದ್ ಖಾನ್
Team Udayavani, Jul 25, 2022, 10:21 PM IST
ಹಾವೇರಿ: ನಾನು ರಾಜಕೀಯಕ್ಕೆ ಬರಲು ಆದಿಚುಂಚನಗಿರಿ ಸ್ವಾಮೀಜಿಗಳು ಕಾರಣ. ನಾನು ಕಾಂಗ್ರೆಸ್ನಲ್ಲಿದ್ದರೂ ದೇವೇಗೌಡರೇ ನನ್ನ ರಾಜಕೀಯ ಗುರುಗಳು ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು 4 ಬಾರಿ ಶಾಸಕ ಹಾಗೂ 2 ಬಾರಿ ಮಂತ್ರಿಯಾಗಿದ್ದೇನೆ. 2002ರಲ್ಲಿ ದೇವೇಗೌಡರು ಉಪಚುನಾವಣೆಗೆ ಸ್ಪರ್ಧಿಸಿದ್ದರು. ಆಗ ನಾನು ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಇರುತ್ತಿದ್ದೆ. ಶ್ರೀಗಳು ಆದಿಚುಂಚನಗಿರಿಯಿಂದ ವಿಜಯನಗರಕ್ಕೆ ಬಂದರೆ ಮಠದಲ್ಲಿ ನಾನು ಇರದಿದ್ದರೆ ಅವರೂ ಇರುತ್ತಿರಲಿಲ್ಲ. ಅರ್ಧ ದಾರಿಯಲ್ಲಿರುವಾಗಲೇ ಫೋನ್ ಮಾಡಿ ನಾನು ಬರುತ್ತಿದ್ದೇನೆ ಜಮೀರ್, ಮಠಕ್ಕೆ ಬಾ ಅಂತ ಫೋನ್ ಮಾಡಿ ಕರೆಯುತ್ತಿದ್ದರು. ಬೆಳಗ್ಗಿನಿಂದ ಸಂಜೆವರೆಗೆ ನಾನು ಮಠದಲ್ಲೇ ಇರುತ್ತಿದ್ದೆ. ನಾನು ಒಕ್ಕಲಿಗರ ಮಠದಲ್ಲಿ ಬೆಳೆದಿರುವವನು. ಶ್ರೀಗಳ ಆದೇಶದ ಮೇಲೆಯೇ ನಾನು ಜನತಾದಳ ಪಕ್ಷಕ್ಕೆ ಹೋಗಿದ್ದು. ನನ್ನದು, ಸ್ವಾಮೀಜಿ ಹಾಗೂ ಒಕ್ಕಲಿಗರ ಸಂಬಂಧ ಏನು ಅಂತ ಆ ಮಠದಲ್ಲಿ ಹೋಗಿ ಕೇಳಿದರೆ ಗೊತ್ತಾಗುತ್ತದೆ ಎಂದರು.
ರವಿಗೆ ಅಧಿಕಾರದ ಮೇಲಷ್ಟೇ ಪ್ರೀತಿ
ಕಾಂಗ್ರೆಸ್ ಜಾತಿಗೊಂದು ಸಿಎಂ ಮಾಡಲು ಹೊರಟಿದೆ, ಒಕ್ಕಲಿಗರ ಬಗ್ಗೆ ಹೀಗೆ ಮಾತಾಡೋದು ಸರಿಯಲ್ಲ ಎನ್ನುವ ಸಚಿವ ಆರ್.ಅಶೋಕ್ ಹೇಳಿಕೆ ಸರಿಯಲ್ಲ. ಕಾಂಗ್ರೆಸ್ ಎಲ್ಲ ಜಾತಿಯವರ ಪರವಾಗಿದೆ. ಒಕ್ಕಲಿಗರ ವಿರುದ್ಧ ನಾನು ಏನು ಮಾತಾಡಿದ್ದೇನೆ? ಸಿ.ಟಿ.ರವಿಗೆ ಹಿಂದೂಗಳ ಮೇಲೂ ಪ್ರೀತಿ ಇಲ್ಲ, ಮುಸಲ್ಮಾನರ ಮೇಲೂ ಇಲ್ಲ. ಅವರಿಗೆ ಕೇವಲ ಅಧಿಕಾರ ಹಾಗೂ ಕುರ್ಚಿ ಮೇಲಷ್ಟೇ ಪ್ರೀತಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು