ಎನ್ ಐಎಗೆ ಕೊಟ್ಟ ಪರೇಶ್ ಮೇಸ್ತ,ರುದ್ರೇಶ್ ಪ್ರಕರಣಗಳು ಏನಾಯಿತು? :ರಾಮಲಿಂಗಾ ರೆಡ್ಡಿ

ಹೆಣ ಬಿದ್ದರೆ ಸಾಕು ಬಿಜೆಪಿಯವರು ರಣಹದ್ದುಗಳಂತೆ ಹೋಗುತ್ತಿದ್ದರು

Team Udayavani, Jul 29, 2022, 3:55 PM IST

Ramalinga reddy 2

ಬೆಂಗಳೂರು: ಪರೇಶ್ ಮೇಸ್ತ, ರುದ್ರೇಶ್ ಹತ್ಯೆ ಪ್ರಕರಣಗಳನ್ನು ಎನ್ ಐಎ ಗೆ ಕೊಟ್ಟಿದ್ದರು, ಏನಾಯಿತು? ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸರಕಾರವನ್ನು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಲಾಗದವರು ಎಸ್ ಡಿ ಪಿಐ,ಪಿಎಫ್ಐ ನಿಂದ ಕೊಲೆ ಎಂಬ ಆರೋಪ, ಅಪಪ್ರಚಾರ ಮಾಡುತ್ತಾರೆ. 2013 ರಿಂದ 18 ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. 23 ಜನ ಹಿಂದೂ ಯುವಕರ ಕೊಲೆ ಏನು ಹೇಳುತ್ತಿದ್ದರು. ಯಾವುದಾದರೂ ಹೆಣ ಬಿದ್ದರೆ ಸಾಕು.ಅಲ್ಲಿಗೆ ಚಕ್ಕಂತ ಇವರು‌ ಹೋಗುತ್ತಿದ್ದರು. ಪರೇಶ್ ಮೇಸ್ತ,ರುದ್ರೇಶ್,ಪ್ರವೀಣ್ ಹತ್ಯೆ ಆದವು,ಆಗ ರಣಹದ್ದುಗಳಂತೆ ಅಲ್ಲಿಗೆ ಹೋದರು ಎಂದು ಕಿಡಿ ಕಾರಿದರು.

ನಾನು‌ ಗೃಹ ಸಚಿವನಾಗಿದ್ದೆ, ನಾಲ್ಕುಜನ ರಾಜಕೀಯ ಕಾರಣಕ್ಕೆ ಕೊಲೆ ಆಗಿದ್ದರು.ಅಪಘಾತ,ವೈಯುಕ್ತಿಕ ಕಾರಣಕ್ಕೆ ಕೊಲೆಯಾಗಿದ್ದರು. ಇದರಲ್ಲಿ ಹಲವರು ಬೇರೆ ಬೇರೆಯವರೂ ಕೊಲೆಯಾಗಿದ್ದರು.ಅಷ್ಟೇ ಸಂಖ್ಯೆಯಲ್ಲಿ ಪಿಎಫ್ ಐ,ಎಸ್ ಡಿ ಪಿಐನವರ ಕೊಲೆ ಆಗಿತ್ತು. ಆ ಕೊಲೆಗಳನ್ನ ಮಾಡಿಸಿದವರು ಯಾರು? ನಾನು ಸಂಪೂರ್ಣ ವಿವರ ಪಡೆದಿದ್ದೆ, ನಗ್ನ ಸತ್ಯ ಅನ್ನುವ ಪುಸ್ತಕವನ್ನೂ ಬಿಡುಗಡೆ ಮಾಡಿದ್ದೆ. ಕೊಲೆ ಮಾಡುವವರು ನೇರವಾಗಿ ಬಂದು ಸರೆಂಡರ್ ಆಗುತ್ತಿದ್ದರು. ನಂತರ ಅವರ ಪರ ವಕೀಲರು ಬಂದು ಬಿಡಿಸಿಕೊಳ್ಳುತ್ತಿದ್ದರು. ವ್ಯವಸ್ಥಿತವಾಗಿಯೇ ಮಾಡುತ್ತಿದ್ದರು. ಕೊಲೆ ಮಾಡಿದವರ ಹೆಸರು ಮಾತ್ರ ಎಫ್ ಐಆರ್ ನಲ್ಲಿತ್ತು, ಅದರಲ್ಲಿ ಸಹಕರಿಸಿದವರ ಹೆಸರು ಇರುತ್ತಿರಲಿಲ್ಲ ಎಂದರು.

ನಾಲ್ಕು ವರ್ಷದಿಂದ ಕೊಲೆಗಳೇ ಆಗಿರಲಿಲ್ಲ, ಈಗ ಮತ್ತೆ ಕೊಲೆಗಳು ಶುರುವಾಗಿವೆ ಎಂಬ ಬಿಜೆಪಿ ಆರೋಪಕ್ಕೆ ರಾಮಲಿಂಗಾರೆಡ್ಡಿ ತಿರುಗೇಟು ನೀಡಿ, ಇವರ ಸರ್ಕಾರ ಬಂದ ಮೇಲೆ ಹಲವು ಕೇಸ್ ವಾಪಸ್ ಪಡೆದಿದ್ದು, ಕೊಲೆ ಯತ್ನ ಕೇಸ್ ವಾಪಸ್ ಪಡೆದಿದ್ದಾರೆ. ಪೊಲೀಸರ ಮೇಲಿನ ಹಲ್ಲೆ ಕೇಸ್ ವಾಪಸ್ ಪಡೆದಿದ್ದಾರೆ. ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ವಾಪಸ್ ಪಡೆದ ಕೇಸ್ ಯಾಕೆ ಹೇಳುತ್ತಿಲ್ಲ. ನಾವು ರೈತರ ಮೇಲಿನ ಕೇಸ್ ವಾಪಸ್ ಪಡೆದಿದ್ದೆವಷ್ಟೇ ಎಂದರು.

ಇದನ್ನೂ ಓದಿ : ಪ್ರವೀಣ್ ಹತ್ಯೆ ಪ್ರಕರಣ ಎನ್ಐಎಗೆ ವಹಿಸಿದ ಸಿಎಂ ಬೊಮ್ಮಾಯಿ

ಬಿಬಿಎಂಪಿಗೆ ಸಂಬಂಧಿಸಿದಂತೆ ಸಭೆ ಮಾಡುತ್ತಿದ್ದೇವೆ, ಮುಖಂಡರು,ಮಾಜಿ‌ಪಾಲಿಕೆ ಸದಸ್ಯರ ಜತೆ ಸಭೆ ನಡೆಸುತ್ತಿದ್ದು, ಮೀಸಲಾತಿ ಪ್ರಕಟ ಆಗಬೇಕು,ಚುನಾವಣೆ ಆಯೋಗ ದಿನಾಂಕ ಪ್ರಕಟಿಸಬೇಕು. ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ವಾರ್ಡ್ ವಿಂಗಡಣೆ ಅವರ ಕಚೇರಿಯಲ್ಲಿ ಮಾಡಿದರು. ಈಗ ಮೀಸಲಾತಿ ಕೂಡ ಹಾಗೆಯೇ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.