ಶಿಕ್ಷಕರು ಸರ್ವಾಂಗೀಣ ವಿಕಾಸದ ದಾರಿ
Team Udayavani, Jul 31, 2022, 12:42 PM IST
ಕಲಬುರಗಿ: ಶಿಕ್ಷಕರು ಕೇವಲ ಮಕ್ಕಳಿಗೆ ಅಕ್ಷರ ಕಲಿಸುವುದಷ್ಟೇ ಅಲ್ಲ, ತಮ್ಮ ನಡೆ, ನುಡಿಗಳಿಂದ ಪರಿಸರ ಮತ್ತು ಸರ್ವಾಂಗೀಣ ವಿಕಾಸದ ದಾರಿ. ಆದರೆ, ಇವತ್ತು ಅವರೆಲ್ಲ ತುಂಬಾ ಒತ್ತಡದಿಂದ ಕೆಲಸ ಮಾಡುತ್ತಿರುವುದು ಖೇದಕರ ಎಂದು ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಕಳವಳ ವ್ಯಕ್ತಪಡಿಸಿದರು.
ಶಹಾಬಾದ ನಗರದ ಶಾಸಕರ ಸರಕಾರಿ ಕನ್ಯಾ ಮಾದರಿ ಶಾಲೆಯ ಮುಖ್ಯಶಿಕ್ಷಕ ಶಿವಪುತ್ರಪ್ಪ ಕೋಣಿನ್ ಸೇವಾ ನಿವೃತ್ತಿ ಸಮಾರಂಭದಲ್ಲಿ ಶ್ರೀಮತಿ ಚಂದ್ರಕಲಾ ಕೋಣಿನ್ ಹಾಗೂ ಶಿವಪುತ್ರಪ್ಪ ಕೋಣಿನ್ ಅವರನ್ನು ಸನ್ಮಾನಿಸಿ ಮತ್ತು ಅನಾಥ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.
ಶಿವಪುತ್ರಪ್ಪ ಕೇವಲ ಶಿಕ್ಷಕರಾಗಿ ನನಗೆ ಕಂಡಿಲ್ಲ, ಅವರೊಬ್ಬ ಸಂಘಟಕ ಮತ್ತು ಶ್ರಮಜೀವಿಯಾಗಿ ಕಂಡಿದ್ದಾರೆ. ಅನಾಥ ಮಕ್ಕಳ ಶಿಕ್ಷಣದ ಕುರಿತು ಅವರಿಗಿರುವ ಕಾಳಜಿ ಮತ್ತು ಮರುಗುವಿಕೆ ಇತರರಲ್ಲಿ ಇಲ್ಲ ಎಂದ ಅವರು, ಶಹಾಬಾದ ಕನ್ಯಾ ಪ್ರಾಥಮಿಕ ಶಾಲೆಗೆ ಬಂದ ಬಳಿಕ ಸಾಕಷ್ಟು ಪ್ರಗತಿ ಆಗಿದೆ ಎಂದರು.
ಅತಿಥಿಯಾಗಿದ್ದ ನಿವೃತ್ತ ಅಧ್ಯಾಪಕಿ ಡಾ| ಮೀನಾಕ್ಷಿ ಬಾಳಿ ಮಾತನಾಡಿ, ಶಿವಪುತ್ರಪ್ಪ ನನಗೆಂದು ಒಬ್ಬ ಶಿಕ್ಷಕರಾಗಿ ಕಂಡೇ ಇಲ್ಲ. ಅವರೊಬ್ಬ ತಳಸ್ಪರ್ಶಿ ಸಂಘಟಕ ಮತ್ತು ಶೈಕ್ಷಣಿಕ ಕೆಲಸಗಾರ. ಸದಾ ಮಕ್ಕಳ ಕುರಿತೇ ಚಿಂತಿಸುವ ಅದರಲ್ಲೂ ಪ್ರಮುಖವಾಗಿ ಅನಾಥ ಮಕ್ಕಳ ಕುರಿತು ಹೆಚ್ಚು ಮಮಕಾರ ಇರುವ ವ್ಯಕ್ತಿ. ಅವರು ನಿವೃತ್ತಿಯ ಬಳಿಕ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳಲು ಅನುಕೂಲವೂ ಆಗಿದೆ ಎಂದು ಆಶಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ಬಾಣಿ ಮಾತನಾಡಿ, ಶಿವಪುತ್ರಪ್ಪ ಕೋಣಿನ್ ಅವರು ಜೇವರ್ಗಿ ತಾಲೂಕಿನವರು ಎನ್ನುವುದು ನಮಗೂ ಹೆಮ್ಮೆ ಎಂದರು. ಮುಖಂಡರಾದ ಚನ್ನಬಸವ ಶರಣರು, ಸಿದ್ಧವೀರಯ್ಯ ರುದೂ°ರ, ಮಾಣಿಕಪ್ಪ, ನಗರಸಭೆ ಸದಸ್ಯೆ ಸಾಬೇರಾ ಬೇಗಂ ಇದ್ದರು.
ಅನಾಥ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು. ರವಿ ಬೆಳಮಗಿ ಸ್ವಾಗತಿಸಿದರು, ಅಂಬುಜಾ ದೇಶಮುಖ್ ನಿರೂಪಿಸಿದರು, ಸಂತೋಷ ಸಲಗರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್ ಖರ್ಗೆ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
DK Sivakumar: ಪ್ರಜ್ವಲ್ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ
Prajwal Revanna: ಪ್ರಜ್ವಲ್ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ
Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು
ಡ್ರಗ್ಸ್ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ
Paris Olympics: ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ