ನಾಯಕಿಗಿಂತ ಉತ್ತಮ ನಟಿಯಾಗುವ ಹಂಬಲ: ಚಾರ್ಲಿಯ ಗೆಲುವು ಸಂಗೀತಾ ನಗು


Team Udayavani, Jul 31, 2022, 3:17 PM IST

sangeetha sringeri

“777 ಚಾರ್ಲಿ’ ಸಿನಿರಸಿಕರು, ಪ್ರಾಣಿಪ್ರಿಯರು ಕೈ ಬೀಸಿ ಅಪ್ಪಿಕೊಂಡ ಸಿನಿಮಾ. ಈ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಮಿಗಳಿಗೆ ದೊಡ್ಡ ಮಟ್ಟದಲ್ಲಿ ಪರಿಚಯವಾದ ಭರವಸೆಯ ನಟಿ ಸಂಗೀತಾ ಶೃಂಗೇರಿ. ಚಾರ್ಲಿ ಗೆಲುವಿನ ಖುಷಿಯಲ್ಲಿರುವ, ಮುಂದಿನ ದಿನಗಳಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿರುವ ಸಂಗೀತಾ ಜೊತೆಗಿನ ಚಿಟ್‌ಚಾಟ್‌ ಇಲ್ಲಿದೆ..

ಚಾರ್ಲಿ’ ನಂತರ ಹೇಗಿದೆ ಲೈಫ್?

– ತುಂಬಾ ಚೆನ್ನಾಗಿದೆ. ಖುಷಿಯಾಗಿದ್ದೇನೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ನನ್ನ ಪಾತ್ರದ ಬಗ್ಗೆಯೂ ಮೆಚ್ಚುಗೆ ಸಿಕ್ಕಿತು. ಒಂದು ಉತ್ತಮ ಕಂಟೆಂಟ್‌ ಇರುವ ಚಿತ್ರದಲ್ಲಿ ನಟಿಸುವುದರ ಜೊತೆಗೆ ಪಾತ್ರಕ್ಕೆ ಜೀವ ತುಂಬುವ ನಟನೆ ಮಾಡಿದ್ದೀರಿ ಎಂಬ ಮಾತುಗಳು ಕೇಳಿಬರುತ್ತಿರೋದು ಖುಷಿಕೊಟ್ಟಿದೆ.

ಚಾರ್ಲಿಗೆ ಆಯ್ಕೆಯಾದ ಬಗ್ಗೆ ಹೇಳಿ?

ಚಾರ್ಲಿ ಅಡಿಷನ್‌ಗೆ ನನಗೆ ಕರೆ ಬಂದಾಗ ಹೋಗಿ ಆಡಿಷನ್ಸ್‌ನಲ್ಲಿ ಒಂದೇ ಟೇಕ್‌ ಗೆ, ಕೊಟ್ಟ ಡೈಲಾಗ್‌ಅನ್ನು ಹೇಳಿದೆ. ಪಾತ್ರದ ಕುರಿತು ನಿರ್ದೇಶಕರು ವಿವರಿಸಿದ ರೀತಿ ಬಹಳ ಇಷ್ಟವಾಗಿ, ತಾನು ಈ ಚಿತ್ರದಲ್ಲಿ ನಟನೆ ಮಾಡಲೇಬೇಕು ಎಂದುಕೊಂಡೆ. ಆದರೆ ಚಿತ್ರದ ಆಡಿಷನ್ಸ್‌ ನೀಡಿ ಆರು ತಿಂಗಳು ಕಳೆದರೂ, ಒಂದು ಕರೆ ಕೂಡಾ ಬರದಿದ್ದಾಗ ತುಂಬಾ ಚಿಂತೆಗಿಡಾಗಿದ್ದೆ. ಕೊನೆಗೆ ಅವಕಾಶ ಸಿಕ್ಕಾಗ ಒಂದು ಷರತ್ತು ಇತ್ತು. ಎರಡು ವರ್ಷ ಬೇರೆಯಾವ ಚಿತ್ರಗಳಲ್ಲೂ ನಟಿಸಬಾರದು ಎಂದು. ಚಾರ್ಲಿ ಬರುವ ಮೊದಲೇ ಮತ್ತೂಂದು ಚಿತ್ರದ ಶೂಟಿಂಗ್‌ ಅಲ್ಲಿ ಇದ್ದ ನಾನು ಎಲ್ಲವನ್ನು ಸಮದೂಗಿಸಿ ಎರಡು ಚಿತ್ರ ಮುಗಿಸಿದೆ. ಕೋವಿಡ್‌ ಕಾರಣದಿಂದ ನಾಲ್ಕು ವರ್ಷ ತೆಗೆದುಕೊಂಡಿತ್ತು ಚಾರ್ಲಿ.

ಪ್ರಚಾರದ ಸಮಯದಲ್ಲಿ ಹೊರ ರಾಜ್ಯಗಳಲ್ಲಿ ಸುತ್ತಿದ್ದೀರಿ. ಹೇಗಿತ್ತು ಅನುಭವ?

– ಚಿತ್ರದ ಪ್ರಚಾರಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದೆವು. ನಾನು ಚಿತ್ರರಂಗಕ್ಕೆ ಹೊಸಬಳು. ನನ್ನ ಬಗ್ಗೆ ಅವರಿಗೆ ಅಷ್ಟು ಗೊತ್ತಿರಲ್ಲಾ ಅಂತಾ ಅಂದುಕೊಂಡಿದ್ದೇ, ಆದರೆ ಪತ್ರಕರ್ತರ ಕೈಯಲ್ಲಿ ನನ್ನ ಜಾತಕವೇ ಇತ್ತು! ನನ್ನ ಹಿನ್ನೆಲೆ, ಅಪ್ಪ -ಅಮ್ಮ, ನಟನೆ ಬಗ್ಗೆ ಎಲ್ಲವೂ ತಿಳಿದ್ದರು. ಇದು ತುಂಬಾ ಆಶ್ಚರ್ಯ ಅನಿಸಿತ್ತು. ಹೊರ ರಾಜ್ಯಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುವುದರ ಜೊತೆಗೆ ಜನರಿಗೆ ಪರಿಚಯವಾಗಿದ್ದು ಸಂತಸ ತಂದಿದೆ.

ಸಾಲು ಸಾಲು ಚಿತ್ರಗಳು ತೆರೆಗೆ ರೆಡಿಯಾಗಿವೆಯಲ್ಲ?

– ಹೌದು, “ಚಾರ್ಲಿ ನಂತರ ಮೂರು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿದೆ. ಈ ಮೊದಲು ನಟಿಸಿದ್ದ ಎಸ್‌ ಮಹೇಂದ್ರ ಅವರ “ಪಂಪ’ ಚಿತ್ರ ಆಗಸ್ಟ್‌ನಲ್ಲಿ ರಿಲೀಸ್‌ ಆಗಲಿದೆ. ಹಾಗೆ “ಲಕ್ಕಿ ಮ್ಯಾನ್‌’ ಕೂಡಾ ಆಗಸ್ಟ್‌ ನಲ್ಲಿ ತೆರೆಗೆ ಬರಲಿದ್ದು, “ಮಾರಿಗೋಲ್ಡ್‌ ‘ ಕೂಡಾ ಆಗಸ್ಟ್‌ ತಿಂಗಳ ಕೊನೆಗೆ ತೆರೆಗೆ ಬರುವ ನಿರೀಕ್ಷೆ ಇದೆ.

ಉತ್ತಮ ನಟಿಯಾಗುವ ಹಂಬಲ

ಸಾಮಾನ್ಯವಾಗಿ ನಟಿಯರಿಗೆ ಭಿನ್ನ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವ ಆಸೆ. ಆದರೆ ಸಂಗೀತಾ, “ಸದ್ಯ ನಾನು ಮಾಡಿರುವ ಎಲ್ಲಾ ಚಿತ್ರಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದು, ಗೆಟಪ್‌ಗಿಂತ ಪಾತ್ರ ಮುಖ್ಯ’ ಅನ್ನುತ್ತಾರೆ. ಒಂದು ಚಿತ್ರದಲ್ಲಿ ಕನ್ನಡಪರ ಕಾಲೇಜು ಹುಡುಗಿಯಾಗಿ ನಟಿಸಿದ್ದು, ಮತ್ತೂಂದರಲ್ಲಿ ಪಕ್ಕಾ ಫ್ಯಾಮಿಲಿ ಹುಡುಗಿಯಾಗಿ ಅಭಿನಯಿಸಿದ್ದಾರೆ. ಹೀಗೆ ಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಳ್ಳಲು ಇಷ್ಟ ಪಡುವ ಸಂಗೀತಾ, ಚಿತ್ರರಂಗದಲ್ಲಿ ಕೇವಲ ನಾಯಕಿಯಾಗಿ ಅಲ್ಲ ಉತ್ತಮ ನಟಿಯಾಗಿ ಬೆಳೆಯಬೇಕು ಎಂಬ ಆಸೆ ಹೊಂದಿದ್ದಾರೆ.

ಸಾಕು ನಾಯಿ ಸತ್ತಾಗ ಡಿಪ್ರಶನ್‌ಗೆ ಹೋಗಿದ್ದೆ…

ಚಾರ್ಲಿ ಚಿತ್ರದಲ್ಲಿ ಎನಿಮಲ್‌ ವೆಲ್‌ಫೇರ್‌ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿರುವ ಸಂಗೀತಾ, ನಿಜ ಜೀವನದಲ್ಲೂ ಪ್ರಾಣಿ ಪ್ರೇಮಿಯಂತೆ. ಶಾಲಾ ದಿನಗಳಿಂದಲೂ ಬೀದಿಯಲ್ಲಿ ಸಿಕ್ಕ ನಾಯಿಗಳನ್ನು ತಂದು, ಕದ್ದು ಮುಚ್ಚಿ ಸಾಕುತ್ತಿದ್ದರಂತೆ. ಇತ್ತೀಚೆಗೂ ಬೀದಿ ನಾಯಿ ಸಾಕಿದ್ದರು. ಎರಡು ಬಾರಿ  ಅವರ ಸಾಕು ನಾಯಿಗಳು ಖಾಯಿಲೆಯಿಂದ ಮೃತಪಟ್ಟಿತ್ತು. ಸಾಕು ನಾಯಿ ಸಾವಿನ ನೋವಿನಲ್ಲಿ ಡಿಪ್ರಶನ್‌ಗೆ ಓಳಗಾಗಿದ್ದರಂತೆ. ಸಂಗೀತಾ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.