ನೆರೆಗೆ ಸಂಪಾಜೆ ಗ್ರಾಮ ತತ್ತರ : ಸ್ವಾವಲಂಬಿ ಬದುಕು ನುಚ್ಚುನೂರು
Team Udayavani, Aug 3, 2022, 8:14 AM IST
ಅರಂತೋಡು : ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಂಪಾಜೆ ಗ್ರಾಮ ತತ್ತರಿಸಿದೆ.
ಮಂಗಳವಾರ ಬೆಳಗ್ಗೆ ನೆರೆ ನೀರು ಇಳಿದಿದೆಯಾದರೂ ಮನೆ, ಅಂಗಡಿ ಮುಂಗಟ್ಟುಗಳು, ರಸ್ತೆ, ತೋಟ ಇಡೀ ಪ್ರದೇಶ ಕೆಸರುಮಯವಾಗಿದೆ. ಹಲವು ಮಂದಿ ಸರ್ವಸ್ವವನ್ನೂ ಕಳೆದು ಕೊಂಡಿದ್ದಾರೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಭಾರೀ ಮಳೆ ಆರಂಭ ಗೊಂಡಿತು. 12 ಗಂಟೆಯ ಸುಮಾರಿಗೆ ಪಯಸ್ವಿನಿ, ಅರೆಕಲ್ಲು ಹೊಳೆಗಳು ಒಮ್ಮೆಗೆ ಉಕ್ಕಿ ಬಂದು ಹಲವು ಮನೆ ಗಳು ಜಲಾವೃತಗೊಂಡವು. 5-6 ಅಡಿ ಎತ್ತರದಲ್ಲಿ ಜಲ ಆವರಿಸಿಕೊಂಡಿತು. ನೆರೆ ಇಳಿದ ಬಳಿಕ ನೋಡಿದರೆ ಮನೆ, ಅಂಗಡಿಗಳಲ್ಲಿ 3-4 ಅಡಿಗಳಷ್ಟು ಕೆಸರು ತುಂಬಿ ಕೊಂಡಿರುವುದನ್ನು ಕಂಡು ಜನ ಆಘಾತಗೊಂಡಿದ್ದಾರೆ.
ಸಂಪಾಜೆಯ ವಿವಿಧ ಮಳಿಗೆಗಳ ವಸ್ತುಗಳು ನಾಶವಾಗಿವೆ, ಬಟ್ಟೆಬರೆಗಳು ಕೂಡಾ ಇಲ್ಲವಾಗಿವೆ.
ಸ್ವಾವಲಂಬಿ ಬದುಕು ನುಚ್ಚುನೂರು
ಅರಂತೋಡು: ಸ್ವ ಸಂಪಾದನೆಯ ಮೂಲಕವೇ ಬದುಕು ಸಾಗಿಸುವ ಛಲ ತೊಟ್ಟಿದ್ದ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ಕುಕ್ಕುಟೋದ್ಯಮ ಆರಂಭಿಸಿದ್ದರು. ಆದರೆ ಅವರ ಕನಸುಗಳೆಲ್ಲ ತಡರಾತ್ರಿ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಸಂಪಾಜೆ ಗ್ರಾಮದ ಚೌಕಿ ಸಮೀಪದ ಸಾವಿತ್ರಿ ಅವರು ಸಾಕಿದ 40ಕ್ಕೂ ಹೆಚ್ಚು ಕೋಳಿಗಳು ಪ್ರವಾಹಕ್ಕೆ ಗೂಡು ಸಮೇತ ನೀರು ಪಾಲಾಗಿವೆ. ಅವರ ಕನಸಿನ ಮನೆಯೂ ನೀರಿನ ರಭಸಕ್ಕೆ ಸಿಲುಕಿ ಕೆಸರಿನಿಂದ ನಲುಗಿ ಹೋಗಿದೆ. ಅವರ ಕುಟುಂಬವೀಗ ಕಣ್ಣೀರಿನಿಂದ ಕೈ ತೊಳೆಯುವಂತಾಗಿದೆ.
ಇದನ್ನೂ ಓದಿ : ಸುಬ್ರಹ್ಮಣ್ಯ ಗುಡ್ಡ ಕುಸಿದು ದುರಂತ ಪ್ರಕರಣ : ಇಬ್ಬರು ಮಕ್ಕಳಿಗೆ ಕಣ್ಣೀರ ವಿದಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು