ವೀರ್ಯ, ಅಂಡಾಣು ಇಲ್ಲದೇ ಭ್ರೂಣ ಸೃಷ್ಟಿ!


Team Udayavani, Aug 5, 2022, 7:30 AM IST

ವೀರ್ಯ, ಅಂಡಾಣು ಇಲ್ಲದೇ ಭ್ರೂಣ ಸೃಷ್ಟಿ!

ಜೆರುಸಲೇಂ: ವೈದ್ಯಕೀಯ ವಿಜ್ಞಾನದಲ್ಲಿನ ಮಹತ್ವದ ಮೈಲುಗಲ್ಲು ಎಂಬಂತೆ, ವಿಶ್ವದಲ್ಲೇ ಮೊದಲ ಬಾರಿಗೆ ಇಸ್ರೇಲ್‌ನ ವಿಜ್ಞಾನಿಗಳು “ಗರ್ಭಕೋಶದ ಹೊರಗೆ ಸಂಶ್ಲೇಷಿತ ಭ್ರೂಣ’ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ವೀರ್ಯವಿಲ್ಲದೇ, ಫ‌ಲಿತ ಅಂಡಾಣುವಿಲ್ಲದೇ, ಗರ್ಭಕೋಶವೂ ಇಲ್ಲದೇ ಭ್ರೂಣವನ್ನು ಸೃಷ್ಟಿಸುವ ಮೂಲಕ ವಿಜ್ಞಾನಿಗಳು ಅಚ್ಚರಿ ಮೂಡಿಸಿದ್ದಾರೆ.

ವೃತ್ತಾಕಾರದ ಪಾರದರ್ಶಕ ಪಾತ್ರೆ ಯೊಂದರಲ್ಲಿ ಬೀಜ ಕೋಶ(ಸ್ಟೆಮ್‌ ಸೆಲ್‌)ಗಳನ್ನು ಬಳಸಿಕೊಂಡು ಕೃತಕವಾಗಿ ಇಲಿಯೊಂದರ ಭ್ರೂಣವನ್ನು ಸೃಷ್ಟಿಸಲಾಗಿದೆ. ವಿಶೇಷವೆಂದರೆ, ಯಾವುದೇ ಫ‌ಲಿತ ಅಂಡಾಣು ವನ್ನು ಬಳಸದೇ ಈ ಕೋಶಗಳನ್ನು ಅಭಿವೃದ್ಧಿಪಡಿಸುವ ಮೂಲಕ “ಭ್ರೂಣದ ಸೃಷ್ಟಿಗೆ ವೀರ್ಯದ ಅಗತ್ಯವಿಲ್ಲ’ ಎನ್ನುವುದನ್ನು ಈ ವಿಜ್ಞಾನಿಗಳು ಸಾರಿದ್ದಾರೆ. ಇಸ್ರೇಲ್‌ನ ವೈಸ್‌ಮನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನ ಸಂಶೋಧಕರು ಈ ಸಾಧನೆ ಮಾಡಿದ್ದಾರೆ.

ಅನುಕೂಲಗಳೇನು?: ಈ ಆವಿಷ್ಕಾರದಿಂದಾಗಿ ಮುಂದಿನ ದಿನಗಳಲ್ಲಿ ಇದೇ ಸಂಶ್ಲೇಷಿತ ಭ್ರೂಣ ಮಾದರಿ ಬಳಸಿ ಕೊಂಡು ಇತರೆ ಅಂಗಾಂಶಗಳನ್ನು ಅಭಿವೃದ್ಧಿಪಡಿಸಬಹುದು. ನಂತರ ಇದನ್ನು ಅಂಗಾಂಗ ಜೋಡಣಾ ಶಸ್ತ್ರಚಿಕಿತ್ಸೆಯಲ್ಲಿ ಬಳಸಬಹುದಾಗಿದೆ.

ಭ್ರೂಣ ಬೆಳೆದಿದ್ದು ಹೇಗೆ? :

ವಿದ್ಯುನ್ಮಾನ ನಿಯಂತ್ರಿತ ಸಾಧನವೊಂದರಲ್ಲಿ ಈ ಬೀಜಕೋಶಗಳನ್ನು ಇಡುವ ಮುನ್ನ, ಅವುಗಳನ್ನು ಸಂಶೋಧಕರು 3 ಗುಂಪುಗಳಾಗಿ ಪ್ರತ್ಯೇಕಿಸಿದ್ದರು. ಮೊದಲ ಗುಂಪನ್ನು ಇದ್ದ ಹಾಗೆಯೇ ಬಿಡಲಾಯಿತು. ಮತ್ತೆರಡು ಗುಂಪುಗಳನ್ನು 48 ಗಂಟೆಗಳ ಕಾಲ ಸಂಸ್ಕರಿಸಲಾಯಿತು. ನಂತರ ಎಲೆಕ್ಟ್ರಾನಿಕ್‌ ಸಾಧನದಲ್ಲಿ ಮೂರನ್ನೂ ಒಟ್ಟಿಗೆ ಮಿಶ್ರ ಮಾಡಿದಾಗ, ಬಹುತೇಕ ಕೋಶಗಳು ಸಮರ್ಪಕವಾಗಿ ಬೆಳೆಯಲಿಲ್ಲ. ಆದರೆ, ಸುಮಾರು ಶೇ.0.5ರಷ್ಟು ಅಂದರೆ 10 ಸಾವಿರದಲ್ಲಿ 50ರಷ್ಟು ಬೀಜಕೋಶಗಳು ಗೋಲಾಕೃತಿಗೆ ತಿರುಗಲು ಪ್ರಾರಂಭಿಸಿ, ನಂತರ ಭ್ರೂಣದ ಮಾದರಿಯ ರಚನೆಯಾಗಿ ಮಾರ್ಪಾಡಾದವು. ಭ್ರೂಣದ ಹೊರಪದರದಲ್ಲಿ ಹೊಕ್ಕುಳಬಳ್ಳಿ ಮತ್ತು ಪೊರೆಯ ಹಳದಿ ಚೀಲವೂ ಸೃಷ್ಟಿಯಾಗಿ ನೈಸರ್ಗಿಕ ಭ್ರೂಣದ ಆಕಾರವನ್ನು ಪಡೆದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.