ಕುಮಾರಸ್ವಾಮಿ ಕೃಪೆಯಿಂದ ನಮ್ಮ ಬದುಕು: ಮಾಜಿ ಸ್ಪೀಕರ್ ರಮೇಶ್ ಕುಮಾರ್
Team Udayavani, Aug 5, 2022, 10:16 PM IST
ಬಂಗಾರಪೇಟೆ: ಕೆಆರ್ಎಸ್, ಎತ್ತಿನಹೊಳೆ, ಯರಗೋಳ, ಎಚ್ಎನ್ ವ್ಯಾಲಿ, ಕೆಸಿ ವ್ಯಾಲಿ, ಎಚ್ಎಎಲ್ , ಎಚ್ಎಂಟಿ ಎಲ್ಲವೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯದ್ದೆ. ನಾವು ಕುಮಾರಸ್ವಾಮಿ ಕೃಪೆಯಿಂದ ಬದುಕುತ್ತಿದ್ದೇವೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ತಾಲೂಕಿನ ಯರಗೋಳ್ ಜಲಾಶಯಕ್ಕೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ರಮೇಶ್ ಕುಮಾರ್, ತಮ್ಮನ್ನು ಅಘೋಷಿತ ಭಗೀರಥ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮೇಲಿನಂತೆ ಟಾಂಗ್ ನೀಡಿದರು.
ನನ್ನನ್ನು ಭಗೀರಥ ಅಂತಾರೆ, ನರಿ, ಶಕುನಿ ಅಂತಾರೆ. ನೀವು ಏನಾದರೂ ಹೆಸರು ಕೊಡಿ, ಮನೆಯಲ್ಲಿ ಮೊಮ್ಮಕ್ಕಳಿದ್ದಾರೆ ಅವರೂ ಚೆನ್ನಾಗಿ ಆಟವಾಡಿಕೊಳ್ಳಲಿ ಎಂದು ಹೇಳಿದರು.
ಯರಗೋಳ್ ಜಲಾಶಯ ನಿರ್ಮಾಣ ಮಾಡಿರುವುದು ಯಾರ ಅವಧಿಯಲ್ಲಿ ಎನ್ನುವುದಕ್ಕೆ ದಾಖಲೆಗಳಿವೆ. ಯಾರಧ್ದೋ ಮಗವಿಗೆ ಯಾರೋ ಹೆಸರು ಇಟ್ಟ ಹಾಗೆ ಇನ್ನೊಬ್ಬರು ಬಂದು ನನ್ನದೇ ಮಗು ಎಂದು ಹೇಳಿಕೊಂಡು ಅಧಿಕಾರದಿಂದ ಹೆಸರಿಟ್ಟರೇ ನಾವೇನು ಮಾಡುವುದು? ಇದು ಪ್ರಜಾಪ್ರಭುತ್ವ, ಯಾರು ಏನು ಬೇಕಾದರೂ ಹೇಳಿಕೊಳ್ಳಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ