2 ತಿಂಗಳಲ್ಲೇ ತಮಿಳುನಾಡಿಗೆ 160 ಟಿಎಂಸಿ
Team Udayavani, Aug 7, 2022, 4:02 PM IST
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳು ಭರ್ತಿಯಾಗಿದ್ದು, ಕೃಷ್ಣರಾಜಸಾಗರ ಜಲಾಶಯದಿಂದ ಎರಡೇ ತಿಂಗಳಲ್ಲಿ ದಾಖಲೆ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗಿದೆ.
ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿದ್ದು, ತಮಿಳುನಾಡಿಗೆ ಆಯಾ ತಿಂಗಳು ನಿಗದಿಪಡಿಸಿದ ಟಿಎಂಸಿ ನೀರಿಗಿಂತಲೂ ಹೆಚ್ಚುವರಿ ನೀರು ಹರಿದು ಹೋಗಿರುವ ಬಗ್ಗೆ ದಾಖಲಾಗಿದೆ.
160 ಟಿಎಂಸಿ ನೀರು: ಮುಂಗಾರು ಮಳೆ ಆರಂಭಗೊಂಡ ಜೂನ್ನಿಂದಲೂ ಆ.6ರವರೆಗೂ 160 ಟಿಎಂಸಿ ನೀರು ಹರಿದು ಹೋಗಿದೆ. ಕೆಆರ್ಎಸ್ನಿಂದ 75ಕ್ಕೂ ಹೆಚ್ಚು ಟಿಎಂಸಿ ನೀರು ಹರಿದಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕಿದೆ. ಆದರೆ, ಈಗಾಗಲೇ 160 ಟಿಎಂಸಿ ನೀರು ಹರಿದು ಹೋಗಿದೆ. ಜೂನ್ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ, ಆಗಸ್ಟ್ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್ನಲ್ಲಿ 36.76 ಟಿಎಂಸಿ, ಅಕ್ಟೋಬರ್ ನಲ್ಲಿ 20.22 ಟಿಎಂಸಿ, ನವೆಂಬರ್ನಲ್ಲಿ 13.78 ಟಿಎಂಸಿ, ಡಿಸೆಂಬರ್ನಲ್ಲಿ 7.35 ಟಿಎಂಸಿ, ಜನವರಿಯಿಂದ ಮೇವರೆಗೆ ಪ್ರತಿ ತಿಂಗಳು 2.50 ಟಿಎಂಸಿ ನೀರು ಕೊಡಬೇಕಿದೆ. ಆದರೆ, ಈಗಾಗಲೇ ಹೆಚ್ಚುವರಿಯಾಗಿಯೇ ನೀರು ಹರಿದಿದೆ.
13 ದಿನ ಗರಿಷ್ಠ ಮಟ್ಟ: ಜು.20ರಂದು ಕೆಆರ್ಎಸ್ ಜಲಾಶಯ ಗರಿಷ್ಠ ಮಟ್ಟ 124.80 ಅಡಿಗೆ ಭರ್ತಿ ಯಾಗಿತ್ತು. ಅಂದಿನಿಂದ ಆ.3ರವರೆಗೂ ಗರಿಷ್ಠ ಮಟ್ಟ ಕಾಯ್ದುಕೊಂಡಿದೆ. ಆ.4ರಂದು ಜಲಾಶಯದ ಒಳ ಹರಿವು 67712 ಕ್ಯೂಸೆಕ್ ಹರಿದು ಬರುತ್ತಿರುವುದರಿಂದ ಹೊರ ಹರಿವನ್ನು 68100 ಕ್ಯೂಸೆಕ್ಗೆ ಹೆಚ್ಚಿಸಲಾಯಿತು. ಇದರಿಂದ ಒಂದು ಅಡಿಯಷ್ಟು ಇಳಿಕೆ ಕಂಡಿದೆ.
ಒಳ ಹರಿವು ಹೆಚ್ಚಳ: ಆ.1ಕ್ಕೆ ಒಳಹರಿವು 23081 ಕ್ಯೂಸೆಕ್ ಇತ್ತು. ಈಗ ಪ್ರಸ್ತುತ 74726 ಕ್ಯೂಸೆಕ್ ಹರಿದು ಬರುತ್ತಿದೆ. ಇದರಿಂದ ಹೊರಹರಿವನ್ನು 78316 ಕ್ಯೂಸೆಕ್ಗೆ ಏರಿಸಲಾಗಿದೆ. ಆ.2ರಂದು 30505 ಕ್ಯೂಸೆಕ್ಗೆ ಏರಿತು. 3ರಂದು ಏಕಾಏಕಿ 58062 ಕ್ಯೂಸೆಕ್ಗೆ ಏರಿಕೆಯಾಯಿತು. 4ರಂದು 68586 ಕ್ಯೂಸೆಕ್ ಹರಿದು ಬರುತ್ತಿತ್ತು. ಇದರಿಂದ ಹೊರಹರಿವನ್ನು 80 ಸಾವಿರ ಕ್ಯೂಸೆಕ್ಗೆ ಏರಿಸಲಾಗಿತ್ತು.
ಕಳೆದ ವರ್ಷವೂ ಹೆಚ್ಚುವರಿ ನೀರು: ಕಳೆದ ವರ್ಷವೂ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿದಿತ್ತು. ಸುಮಾರು 100 ಟಿಎಂಸಿ ಹೆಚ್ಚುವರಿ ನೀರು ಹರಿದು ಹೋಗಿತ್ತು. 177.25 ಟಿಎಂಸಿಗಿಂತ 275 ಟಿಎಂಸಿ ನೀರು 2021 ಜೂನ್ನಿಂದ 2022ರ ಮೇ ಅಂತ್ಯದವರೆಗೂ ಹರಿದಿತ್ತು. 4 ವರ್ಷದಿಂದ ತಣ್ಣಗಾದ ವಿವಾದ: ಕಳೆದ 4 ವರ್ಷಗಳಿಂದ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ನಡೆಯುತ್ತಿದ್ದ ವಿವಾದ ತಣ್ಣಗಾಗಿದೆ. ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಪ್ರತಿ ವರ್ಷ ತಮಿಳುನಾಡಿಗೆ ಹರಿಸಬೇಕಾದ ನೀರು ಹೋಗುತ್ತಿರುವುದರಿಂದ ತಮಿಳುನಾಡು ಸಹ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ.
ಯೋಜನೆಗೆ ತಮಿಳುನಾಡು ಅಡ್ಡಿ : ಕೆಆರ್ಎಸ್ ಹಾಗೂ ಮೆಟ್ಟೂರು ಡ್ಯಾಂಗಳು ಈಗಾಗಲೇ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರು ಸಮುದ್ರದ ಪಾಲಾ ಗುತ್ತಿದೆ. ಅದರಲ್ಲೂ ತಮಿಳುನಾಡು ಮೆಟ್ಟೂರು ಜಲಾಶಯದ ಕೆಳಭಾಗದಲ್ಲಿರುವ ಡ್ಯಾಂಗಳಿಗೆ ನೀರು ಹರಿಸುತ್ತಿದೆ. ಅದರಿಂದ ಹೆಚ್ಚುವರಿ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ, ಕರ್ನಾಟಕಕ್ಕೆ ಮೇಕೆದಾಟು ಯೋಜನೆಗೆ ಮಾತ್ರ ತಡೆಯೊಡ್ಡುತ್ತಿದೆ. ಮೇಕೆದಾಟು ಯೋಜನೆ ಜಾರಿಯಾದರೆ ಹೆಚ್ಚುವರಿ ನೀರು ಶೇಖರಿಸಿಟ್ಟುಕೊಂಡು ಕುಡಿಯುವ ನೀರಿಗೆ ಬಳಸಿಕೊಳ್ಳಬಹುದಾಗಿದೆ.
ತ.ನಾಡಿಗೆ ಹರಿಸಬೇಕಾದ ತಿಂಗಳ ಟಿಎಂಸಿ ನೀರು : ಸುಪ್ರೀಂಕೋರ್ಟ್ ತೀರ್ಪಿನಂತೆ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕಿದೆ. ಜೂನ್ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ, ಆಗಸ್ಟ್ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್ ನಲ್ಲಿ 36.76 ಟಿಎಂಸಿ, ಅಕ್ಟೋಬರ್ನಲ್ಲಿ 20.22 ಟಿಎಂಸಿ, ನವೆಂಬರ್ ನಲ್ಲಿ 13.78 ಟಿಎಂಸಿ, ಡಿಸೆಂಬರ್ನಲ್ಲಿ 7.35 ಟಿಎಂಸಿ, ಜನವರಿಯಿಂದ ಮೇ ವರೆಗೆ ಪ್ರತಿ ತಿಂಗಳು 2.50 ಟಿಎಂಸಿ ನೀರು ಹರಿಸಬೇಕಿದೆ.
ಕಾವೇರಿ ಜಲಾನಯನದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಕ್ಕೆ ಅಧಿಕ ನೀರು ಹರಿದು ಬರುತ್ತಿದೆ. ಇದರಿಂದ ನದಿಯ ಹೊರ ಹರಿವು ಹೆಚ್ಚಿಸಲಾಗಿದೆ. ತಮಿಳುನಾಡಿಗೆ ಜೂನ್ನಿಂದ ಇದುವರೆಗೂ 160 ಟಿಎಂಸಿ ನೀರು ಹರಿದು ಹೋಗಿದೆ. –ಶಂಕರೇಗೌಡ, ಮುಖ್ಯ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ, ಮಂಡ್ಯ
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ