ಮಣೂರು ಪಡುಕರೆ, ಕೋಡಿಕನ್ಯಾಣ ಕಡಲ್ಕೊರೆತ; ವ್ಯಾಪಕ ಹಾನಿ ಭೀತಿ
Team Udayavani, Aug 10, 2022, 8:29 AM IST
ಕೋಟ : ಮಣೂರು ಪಡುಕರೆ ಮತ್ತು ಕೋಡಿಕನ್ಯಾಣದಲ್ಲಿ ಕಡಲ್ಕೊರೆತ ಹೆಚ್ಚಿದ್ದು ವ್ಯಾಪಕ ಹಾನಿಯಾಗುವ ಭೀತಿ ಇದೆ.
ಮಣೂರು ಪಡುಕರೆಯ ಬಿ.ಎ. ಕಾಂಚನ್ ರಸ್ತೆಯಲ್ಲಿ ಕೊರೆತ ತೀವ್ರಗೊಂಡಿದ್ದು ಸಂಪರ್ಕ ರಸ್ತೆ ಕಡಿತವಾಗುವ ಭೀತಿ ಇದೆ. ಇಲ್ಲಿನ ಲಿಲ್ಲಿ ಫೆರ್ನಾಂಡಿಸ್ ರಸ್ತೆಯೂ ಕೊರೆತ ಭೀತಿ ಎದುರಿಸುತ್ತಿದ್ದು, ತೀರ ಪ್ರದೇಶದ ಮನೆಗಳು ಕೂಡ ಅಪಾಯದಲ್ಲಿವೆ. ಕೋಡಿ ಗ್ರಾ.ಪಂ. ವ್ಯಾಪ್ತಿಯ ಹೊಸಬೆಂಗ್ರೆಯಲ್ಲಿಯೂ ಸಂಪರ್ಕ ರಸ್ತೆ ಹಾಗೂ ಮನೆಗಳಿಗೆ ಹಾನಿಯಾಗುವ ಅಪಾಯವಿದೆ.
ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಅಧಿಕಾರಿ ಡಯಾಸ್ ಅವರು ಮಂಗಳವಾರ ಪಡುಕರೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು. ಗ್ರಾ.ಪಂ. ಸದಸ್ಯ ಭುಜಂಗ ಗುರಿಕಾರ ಉಪಸ್ಥಿತರಿದ್ದು ಸಮಸ್ಯೆ ಬಗ್ಗೆ ವಿವರಿಸಿದರು.
ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ : ಎಂಟು ಮಹಿಳೆಯರು ಸೇರಿ 9 ಮಂದಿ ಸಾವು