ರಕ್ತಹೀನತೆ ಸಮಸ್ಯೆ ನಿವಾರಣೆ…ಕೇಶ ಸೌಂದರ್ಯಕ್ಕೆ ಪೇರಳೆ ಎಲೆ ಬಳಸಿ…

ತಲೆಯಲ್ಲಿ ಹೊಟ್ಟು ನಿವಾರಣೆಗೆ ಪೇರಳೆ ಎಲೆ ಸೂಕ್ತ ಪರಿಹಾರ.

Team Udayavani, Aug 11, 2022, 1:44 PM IST

ರಕ್ತಹೀನತೆ ಸಮಸ್ಯೆ ನಿವಾರಣೆ…ಕೇಶ ಸೌಂದರ್ಯಕ್ಕೆ ಪೇರಳೆ ಎಲೆ ಬಳಸಿ…

ಕೇಶರಾಶಿ ಕನ್ಯೆಯರ ಸೌಂದರ್ಯ ಹೆಚ್ಚಿಸುತ್ತದೆ. ಉದ್ದ ಜಡೆ, ಗುಂಗುರು ಕೂದಲು, ದಪ್ಪ ಕೂದಲು ಇದು ಹೆಂಗಳೆಯರ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಆದರೆ ಅದೇ ಕೂದಲು ಉದುರಲು ಶುರುವಾದರೆ ಅದರಿಂದ ಬೇಸತ್ತು ಹೋಗುತ್ತೇವೆ. ಇತ್ತೀಚಿನ ಹವಾಮಾನ ಬದಲಾವಣೆ, ನೀರಿನ ಸಮಸ್ಯೆಯಿಂದ ಕೂದಲು ಉದುರುವುದು ಹೆಚ್ಚಾಗಿದೆ. ವಿವಿಧ ಸೆಲೂನ್‌ ಚಿಕಿತ್ಸೆ, ದುಬಾರಿ ಕೇಶವರ್ಧಕ ಶ್ಯಾಂಪೂ ಬಳಸಿದರೂ ಕೂಡ ಯಾವುದೇ ಪರಿಣಾಮ ಕಂಡು ಬಂದಿಲ್ಲವಾದಲ್ಲಿ ನೈಸರ್ಗಿಕವಾಗಿ ಸಿಗುವ ಪೇರಳೆ ಎಲೆಗಳಿಂದ ಕೇಶ ಕಾಪಾಡಿಕೊಳ್ಳಿ.

ಪೇರಳೆ ಎಲೆಗಳಲ್ಲಿ ವಿಟಮಿನ್‌ ಬಿ ಮತ್ತು ಸಿ ಇರುವುದರಿಂದ ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಎಲೆಗಳನ್ನು ನಿಮ್ಮ ಮನೆಯಲ್ಲಿ ಈ ರೀತಿಯಾಗಿ ಪ್ರಯೋಗಿಸಿ ನೋಡಿ.

ಪೇರಳೆ ಹಣ್ಣಿನ ಚಹಾ
ನೀವು ಪೇರಳೆ ಎಲೆಗಳನ್ನು ಬಳಸಿ ಒಂದು ಕಪ್‌ ಚಹಾ ತಯಾರಿಸಿ, ಪ್ರತಿದಿನ ಎರಡು ಬಾರಿಯಾದರೂ ನಿಯಮಿತವಾಗಿ ಕುಡಿಯಿರಿ. ಇದು ನಿಮ್ಮ ತಲೆಕೂದಲಿನ ಬೆಳವಣಿಗೆ ಸಹಾಯ ಮಾಡುತ್ತದೆ.

ಪೇರಳೆ ಎಲೆಯ ಸ್ನಾನ
ಸ್ವಲ್ಪ ಪೇರಳೆ ಎಲೆ, ಒಂದು ಲೀ. ನೀರು ಇಷ್ಟನ್ನು ಬಳಸಿಕೊಂಡು ಪೇರಳೆ ಎಲೆಗಳನ್ನು 20 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಅನಂತರ ಇದನ್ನು ತಣ್ಣಗಾಗಲು ಬಿಡಿ. ಅನಂತರ ನಿಮ್ಮ ಕೂದಲು ಒಣಗಿದ ಮೇಲೆ ನೆತ್ತಿಗೆ 10 ನಿಮಿಷಗಳ ಕಾಲ ಈ ದ್ರಾವಣ ಮಸಾಜ್‌ ಮಾಡಿ. ಅನಂತರ ತಣ್ಣೀರಿನಲ್ಲಿ ತಲೆಸ್ನಾನ ಮಾಡಿ. ಇನ್ನು ನೀವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇದನ್ನು ನೀವು ವಾರದಲ್ಲಿ ಎರಡು, ಮೂರು ಬಾರಿ ಬಳಸಿಕೊಳ್ಳಿ. ಇದರಿಂದ ನಿಮ್ಮ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ. ಅಥವಾ ನಿಮ್ಮ ಕೂದಲಿಗೆ ಅಥವಾ ನೆತ್ತಿಗೆ ಲೋಶನ್‌ ತಯಾರಿಸಿ ಹಚ್ಚಿಕೊಳ್ಳಿ. ಇದರಿಂದ ಕೂಡ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು ಮತ್ತು ಇದರಿಂದ ಕೂದಲಿನ ಬೆಳವಣಿಗೆ ಸಾಧ್ಯವಾಗುತ್ತದೆ.

ಉರಿಯೂತವನ್ನು ಕಡಿಮೆ ಮಾಡುತ್ತದೆ
ಪೇರಳೆ ಎಲೆಗಳು ನೆತ್ತಿಯ ಉರಿಯೂತವನ್ನು ಕಡಿಮೆ ಮಾಡುತ್ತವೆ. ನೆತ್ತಿಯ ಉರಿಯೂತದಿಂದ ಕೂದಲು ಉದುರುವ ಸಾಧ್ಯತೆಗಳಿರುತ್ತವೆ. ಪೇರಳೆ ಹಣ್ಣಿನ ಎಲೆಗಳನ್ನು ಪೇಸ್ಟ್‌ ಮಾಡಿ ನೆತ್ತಿಯ ಮೇಲೆ ಹಚ್ಚಿಕೊಳ್ಳಿ. ಇದರಿಂದ ತಲೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ರಕ್ತ ಹೀನತೆಯನ್ನು ತಡೆಗಟ್ಟುತ್ತದೆ
ರಕ್ತಹೀನತೆಯಿಂದಾಗಿ ಕೂಡ ಕೂದಲು ಉದುರುತ್ತದೆ. ಅನೇಕ ಮಹಿಳೆಯರು ಇಂದು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕೂದಲು ಉದುರುವ ಸಮಸ್ಯೆಗಳು ಕೂಡ ಹೆಚ್ಚಾಗಿವೆ. ಪೇರಳೆ ಎಲೆಯ ಚಹಾವನ್ನು ತಯಾರಿಸಿ ಅದನ್ನು ಕುಡಿಯುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.

ಹೊಟ್ಟು ನಿವಾರಣೆ
ತಲೆಯಲ್ಲಿ ಹೊಟ್ಟು ನಿವಾರಣೆಗೆ ಪೇರಳೆ ಎಲೆ ಸೂಕ್ತ ಪರಿಹಾರ. ಪೇರಳೆ ಎಲೆಯಿಂದ ಸೀರಮ್‌ ಅನ್ನು ತಯಾರಿಸಿ ಅದನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಸಾಧ್ಯವಾಗುತ್ತದೆ.

ಟಾಪ್ ನ್ಯೂಸ್

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

1-wqewqewq

Hunsur: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ; ಆತಂಕ

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ;  ರೈತರ ಮೊಗದಲ್ಲಿ ಮಂದಹಾಸ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ; ರೈತರ ಮೊಗದಲ್ಲಿ ಮಂದಹಾಸ

1-wqeqwewq

Gangavathi: ಪೊಲೀಸ್ ಠಾಣೆಯಲ್ಲೇ ಒಂದೇ ಕೋಮಿನ ಎರಡು ಗುಂಪುಗಳ ಮಾರಾಮಾರಿ

Panaji: ಕೇಜ್ರಿವಾಲ್‍ಗೆ ಜಾಮೀನು… ಬೆರಗಾದ ಬಿಜೆಪಿ ನಾಯಕರು: ವಿನೋದ ಪಾಲೇಕರ್

Panaji: ಕೇಜ್ರಿವಾಲ್‍ಗೆ ಜಾಮೀನು… ಬೆರಗಾದ ಬಿಜೆಪಿ ನಾಯಕರು: ವಿನೋದ ಪಾಲೇಕರ್

PAK ಆಕ್ರಮಿತ ಕಾಶ್ಮೀರದಲ್ಲಿ ಜನಾಕ್ರೋಶ-ಭುಗಿಲೆದ್ದ ಪ್ರತಿಭಟನೆ-ಹಿಂಸಾಚಾರಕ್ಕೆ 2 ಸಾವು

PAK ಆಕ್ರಮಿತ ಕಾಶ್ಮೀರದಲ್ಲಿ ಜನಾಕ್ರೋಶ-ಭುಗಿಲೆದ್ದ ಪ್ರತಿಭಟನೆ-ಹಿಂಸಾಚಾರಕ್ಕೆ 2 ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqeqeewq

ICMR ಸಲಹೆ; ಸಕ್ಕರೆ, ಉಪ್ಪು ಬಳಕೆಯಲ್ಲಿ ನಿಯಂತ್ರಣ ಇರಲಿ

covid

Covishield ಅಡ್ಡ ಪರಿಣಾಮ ಭಾರತದಲ್ಲಿ ಅತ್ಯಲ್ಪ: ಹಿರಿಯ ಅಧಿಕಾರಿ

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

1-wqewqewq

Hunsur: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ; ಆತಂಕ

4N6 Movie Review: ಕೊಲೆಯ ಜಾಡು ಹಿಡಿದು…

4N6 Movie Review: ಕೊಲೆಯ ಜಾಡು ಹಿಡಿದು…

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ;  ರೈತರ ಮೊಗದಲ್ಲಿ ಮಂದಹಾಸ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ; ರೈತರ ಮೊಗದಲ್ಲಿ ಮಂದಹಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.