Mangaluru; ಮಂಗಳಾ ಕಪ್ ಓಪನ್ ಬ್ಯಾಡ್ಮಿಂಟನ್ ಕೂಟಕ್ಕೆ ಚಾಲನೆ
Team Udayavani, May 11, 2024, 12:12 AM IST
ಮಂಗಳೂರು: ಕ್ರೀಡಾ ಕೂಟಗಳು ಪ್ರತಿಭೆಗಳ ಸಾಮರ್ಥ್ಯ ವನ್ನು ಅಳೆಯಲು ಸಹಕಾರಿ ಯಾಗು ತ್ತದೆ. ಮಂಗಳಾ ಕಪ್ ಆಯೋ ಜನೆಯ ಮೂಲಕ ಬಹಳಷ್ಟು ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿದಂತಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿ’ಸೋಜಾ ಹೇಳಿದರು.
ಮಂಗಳಾ ಬ್ಯಾಡ್ಮಿಂಟನ್ ಅಸೋಸಿ ಯೇಶನ್ ವತಿಯಿಂದ ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂ ಗಣ ದಲ್ಲಿ ಶುಕ್ರ ವಾರ ದಿಂದ ಆರಂಭ ವಾದ “ಮಂಗಳಾ ಕಪ್ 2024′ ರಾಷ್ಟ್ರಮಟ್ಟದ ಓಪನ್ ಬ್ಯಾಡ್ಮಿಂಟನ್ ಕೂಟವನ್ನು ಅವರು ಉದ್ಘಾಟಿಸಿದರು.
ಅಂತಾರಾಷ್ಟ್ರೀಯ ಮೋಟಾರ್ ರೇಸ್ ಪಟು ಅಶ್ವಿನ್ ನಾಯಕ್ ಮಾತ ನಾಡಿ, ಆರೋಗ್ಯಪೂರ್ಣ ಬದುಕಿಗೆ ಕ್ರೀಡೆ ಸಹಕಾರಿ. ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಮುನ್ನಡೆದರೆ ಅವರಿಗೆ ಉತ್ತಮ ಭವಿಷ್ಯವಿದೆ ಎಂದರು. ಮನಪಾ ಸದಸ್ಯೆ ಸಂಧ್ಯಾ ಮೋಹನ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸುಪ್ರೀತ್ ಆಳ್ವ, ಕಾರ್ಯದರ್ಶಿ ದೀಪಕ್ ಕುಮಾರ್, ಪ್ರಮುಖರಾದ ಮುಖ್ಯ ತೀರ್ಪುಗಾರ ಸುರೇಶ್, ವೀಣಾ ಸುರೇಶ್ ಮುಂತಾ ದವರು ಇದ್ದರು.
ಈ ಪಂದ್ಯಾಟದಲ್ಲಿ ಮಿಕ್ಸೆಡ್ ಡಬಲ್ಸ್, ಪುರುಷರ ಮತ್ತು ಮಹಿಳೆ ಯರ ಸಿಂಗಲ್ಸ್, ಡಬಲ್ಸ್, 20, 40 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್, 30 ವರ್ಷ ಮೇಲ್ಪಟ್ಟ ಮಹಿಳೆಯರ ಮುಕ್ತ ಪಂದ್ಯಾಟ ನಡೆಯ ಲಿದ್ದು, ಒಟ್ಟು ಬಹುಮಾನದ ಮೊತ್ತ 5,83,000 ರೂ. ಎಂದು ನಿಗದಿ ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Natasa Stankovic: ಹಾರ್ದಿಕ್ ಪಾಂಡ್ಯ ಜೊತೆಗಿನ ಮದುವೆ ಫೋಟೋಗಳನ್ನು ಮತ್ತೆ ಹಂಚಿಕೊಂಡ ನತಾಶ
T20 World Cup 2024: ವಿಶ್ವಕಪ್ ನ ಪಂದ್ಯಗಳನ್ನು ನಾನು ನೋಡುವುದಿಲ್ಲ..: ರಿಯಾನ್ ಪರಾಗ್
NamvsOmn: ಲೋ ಸ್ಕೋರ್ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್ ಓವರ್ ಗೆದ್ದ ನಮೀಬಿಯಾ
Cricket; ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಆಲ್ರೌಂಡರ್ ವೆಂಕಟೇಶ್ ಅಯ್ಯರ್
T20 World Cup ಕ್ರಿಕೆಟ್; ದಕ್ಷಿಣ ಆಫ್ರಿಕಾ-ಶ್ರೀಲಂಕಾ: ಮೊದಲ ಬಿಗ್ ಗೇಮ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.