ಉದಯವಾಣಿ ದಾವಣಗೆರೆ ಆವೃತ್ತಿಯ ದಶಮಾನೋತ್ಸವ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ
Team Udayavani, Aug 14, 2022, 1:02 PM IST
ಬೆಂಗಳೂರು: ಉದಯವಾಣಿ ದಾವಣಗೆರೆ ಆವೃತ್ತಿಯ ದಶಮಾನೋತ್ಸವ ಅಂಗವಾಗಿ ಹೊರತರಲಾದ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಉದಯವಾಣಿ ಜನಪರ ಕಾಳಜಿ, ಸುದ್ದಿ ನಿಖರತೆ ಬಗ್ಗೆ ಮುಖ್ಯಮಂತ್ರಿ ಅವರು ಮೆಚ್ಚುಗೆ ಸೂಚಿಸಿ ಪತ್ರಿಕೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ, ಓದುಗರ ಪ್ರೀತಿ ಗಳಿಸಲಿ ಎಂದು ಹಾರೈಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ, ಉದಯವಾಣಿ ಸಂಪಾದಕರಾದ ವೆಂಕಟೇಶ್ ಪ್ರಭು, ಉಪ ಮುಖ್ಯವರದಿಗಾರ ಲಕ್ಷ್ಮೀನಾರಾಯಣ, ವಿಶೇಷ ವರದಿಗಾರ ಶಂಕರ ಪಾಗೋಜಿ, ಹಿರಿಯ ಜಾಹೀರಾತು ವ್ಯವಸ್ಥಾಪಕರಾದ ಟಿ. ರವಿಕುಮಾರ್ ಹಾಗೂ ಬಿ.ಕೆ ಕೃಷ್ಣಪ್ಪ ಹಾಜರಿದ್ದರು.
ಉದಯವಾಣಿ ದಾವಣಗೆರೆ ಆವೃತ್ತಿಯ ದಶಮಾನೋತ್ಸವ ಅಂಗವಾಗಿ ಹೊರತರಲಾದ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ಸಚಿವರಾದ @JnanendraAraga, @drashwathcn ಉದಯವಾಣಿ ಸಂಪಾದಕರಾದ ವೆಂಕಟೇಶ್ ಪ್ರಭು ಹಾಗೂ ಇತರರು ಹಾಜರಿದ್ದರು.@udayavani_web pic.twitter.com/rZv3oWmzN2
— CM of Karnataka (@CMofKarnataka) August 14, 2022