ನಿಷ್ಕ್ರಿಯ ಪಾಲಿಸಿ ಸಕ್ರಿಯಗೊಳಿಸಲು ಎಲ್ಐಸಿ ಅಭಿಯಾನ
Team Udayavani, Aug 18, 2022, 8:15 PM IST
ನವದೆಹಲಿ: ದೇಶದ ಬೃಹತ್ ವಿಮಾ ಕಂಪನಿ ಎಲ್ಐಸಿ, ಕಂತು ಕಟ್ಟದೇ ನಿಷ್ಕ್ರಿಯವಾಗಿರುವ ಪಾಲಿಸಿಗಳಿಗೆ ಮತ್ತೆ ಜೀವ ನೀಡಲು ಅಭಿಯಾನವನ್ನೇ ಆರಂಭಿಸಿದೆ. ಆ.17ರಿಂದ ಅ.21 ಈ ಅಭಿಯಾನ ನಡೆಯಲಿದೆ.
ಹೆಚ್ಚುವರಿ ಭದ್ರತೆ ನೀಡುವ ಯುಲಿಪ್ ಪಾಲಿಸಿಗಳನ್ನು ಹೊರತುಪಡಿಸಿ, ಉಳಿದೆಲ್ಲ ರೀತಿಯ ವಿಮೆಗಳನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶವಿದೆ.
ಅನಿವಾರ್ಯ ಕಾರಣಗಳಿಂದ ವಿಮಾಕಂತನ್ನು ಕಟ್ಟಲು ಸಾಧ್ಯವಾಗದೇ, ನಿಷ್ಕ್ರಿಯವಾಗಿದ್ದರೆ ಅದನ್ನು ಸಕ್ರಿಯಗೊಳಿಸಲು ಕೆಲವು ವಿನಾಯಿತಿಗಳನ್ನು ಎಲ್ಐಸಿ ಘೋಷಿಸಿದೆ.
ಮೊದಲ ಬಾರಿಗೆ ನೀವು ಕಂತುಕಟ್ಟದ ದಿನಾಂಕದಿಂದ ಇಲ್ಲಿಯವರೆಗಿನ ಅವಧಿ ಐದು ವರ್ಷದೊಳಗಿದ್ದರೆ, ಆ ಕಂತುಗಳನ್ನು ನೀವು ಮರುಪಾವತಿ ಮಾಡಲು ಅವಕಾಶವಿದೆ.
ಸಣ್ಣಮೊತ್ತದ ಪಾಲಿಸಿಗಳಾಗಿದ್ದರೆ ತಡವಾಗಿ ಕಂತು ಕಟ್ಟುತ್ತಿರುವುದಕ್ಕೆ ಶೇ.100 ಶುಲ್ಕ ವಿನಾಯಿತಿ ನೀಡಲಾಗುತ್ತದೆ. ಸ್ವಲ್ಪ ದೊಡ್ಡ ಮೊತ್ತ ಕಂತುಗಳು ಬಾಕಿಯಿದ್ದರೆ ಬೇರೆಬೇರೆ ಶುಲ್ಕ ವಿನಾಯಿತಿ ಪ್ರಮಾಣವನ್ನು ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !